ಆಲಿಯಾಳ ಹೊಸ ಎಂಟ್ರಿ

ಕರಣ್‌ ಜೋಹರ್‌ ತನ್ನ `ಕಳಂಕ್‌' ಚಿತ್ರದ ನಂತರ ಪೀರಿಯಡ್‌ ಡ್ರಾಮಾ ಆಧಾರಿತ `ತಖ್ತ್' ಚಿತ್ರ ನಿರ್ದೇಶಿಸುವುದಾಗಿ ಘೋಷಿಸಿದ್ದಾನೆ. ಕರಣ್‌ ಚಿತ್ರವೆಂದ ಮೇಲೆ ಅದರಲ್ಲಿ ಆಲಿಯಾ ಬೇಬಿ ಇಲ್ಲದಿದ್ದರೆ ಹೇಗೆ? ರಣವೀರ್‌ ಸಿಂಗ್‌, ಅನಿಲ್ ‌ಕಪೂರ್‌, ವಿಕೀ ಕೌಶಲ್, ಕರೀನಾ ಕಪೂರ್‌..... ಮುಂತಾದ ದೊಡ್ಡ ದಂಡಿನ ಜೊತೆ ಆಲಿಯಾ ಕೂಡ ಇರುತ್ತಾಳೆ. ಶ್ರೀದೇವಿ ಮಗಳು ಜಾಹ್ನವಿ ಸಹ ಎಂಟ್ರಿ ಕೊಡಲಿದ್ದಾಳೆ!

ಸೋನಾಕ್ಷಿಯ ಟ್ರಕ್‌ ಸವಾರಿ

ತನ್ನ ಕೆರಿಯರ್‌ ಸ್ಪೀಡ್‌ ಗಳಿಸದ್ದಿದರೇನಂತೆ, ಸೋನಾಕ್ಷಿಗೆ ಸ್ಪೀಡಾಗಿ ಟ್ರಕ್‌ ಓಡಿಸಲು ಗೊತ್ತು. ಅವಳಿಗೂ ಹೀಗೆ ಅನಿಸಿರಬೇಕು. ತನ್ನ ಮುಂದಿನ `ಹ್ಯಾಪಿ ಫಿರ್‌ ಭಾಗ್‌ ಜಾಯೇಗಿ' ಚಿತ್ರಕ್ಕಾಗಿ ಒಂದು ದೃಶ್ಯದಲ್ಲಿ ಈಕೆ ಯಾರ ನೆರವು ಇಲ್ಲದೆ 25-30 ಕಿ.ಮೀ.ವರೆಗೂ ಡ್ರೈವ್ ‌ಮಾಡಿದಳು ಈ ಪಯಣ ಇವಳ ಚಿತ್ರ ಜೀವನ ಬದಲಿಸುತ್ತೋ? ಕಾದು ನೋಡಿ!

ಯಶಸ್ಸಿಗಾಗಿ ಸೀಕ್ವೆಲ್ ‌ಸೂತ್ರ

ಬಾಲಿವುಡ್‌ನಲ್ಲಿ ಸುವರ್ಣ ದಿನಗಳನ್ನು ಕಂಡುಂಡ ಧರ್ಮೇಂದ್ರರ ಪರಿವಾರ, ಒಂದಾದರೂ ತಮ್ಮ ಕಡೆಯಿಂದ ಹಿಟ್‌ ಚಿತ್ರ ಬರಲಿ ಎಂದು ತಹತಹಿಸುತ್ತಿದೆ. ಅಂತೂ ಇಂತೂ ಬಾಬಿ ಡಿಯೋಲ್‌ ಬಾಲಿವುಡ್‌ಗೆ ಮರಳಿದ ನಂತರ, ಯಾವುದೂ ಹಿಟ್‌ ಎನಿಸಲಿಲ್ಲ. ಹೀಗಾಗಿ ಸನಿ ಡಿಯೋಲ್‌`ಘಾಯಲ್' ಚಿತ್ರದ ನಂತರ ಮತ್ತೊಂದು ಸೀಕ್ವೆಲ್`ಘಾತಕ್‌' ಮಾಡುವ ಹುನ್ನಾರದಲ್ಲಿದ್ದಾರೆ. ನಿರ್ದೇಶಕ ಅನಿಲ್ ಶರ್ಮ ಈ ಕುರಿತು ಮಾತುಕತೆ ನಡೆಸಿದ್ದಾರಂತೆ. ತಮ್ಮಿಬ್ಬರು ಮಕ್ಕಳ ಕೈಹಿಡಿದು ನಡೆಸಲು ಡ್ಯಾಡಿ ಧರ್ಮೇಂದ್ರ ಶತಾಯಗತಾಯ ಶ್ರಮಿಸುತ್ತಿದ್ದಾರೆ. ಹಾಗೆಯೇ `ಯಮಲಾ ಪಗಲಾ ದೀವಾನಾ' ಚಿತ್ರದ ಭಾಗ 1, 2 ಮುಗಿಯಿತು. ಈಗ ಭಾಗ 3ಕ್ಕೆ ನಾಂದಿ.

ವಿದ್ಯುತ್‌ನ ಹೊಸ ಕಲೆ

ವಿದ್ಯುತ್‌ನ ಆ್ಯಕ್ಷನ್‌ ಫೈಟ್ಸ್ ಗೆ ಮಾರು ಹೋಗದವರಿಲ್ಲ. ಇತ್ತೀಚೆಗೆ ಖ್ಯಾತ ನಿರ್ಮಾಪಕ ರಸೇಲ್‌ರ `ಜಂಗ್ಲಿ' ಚಿತ್ರದ ಶೂಟಿಂಗ್‌ಮುಗಿಯಿತು. ಇದರಲ್ಲಿ ಈತನ `ಕಲರಿಪಟ್ಟು' ಮಾರ್ಶಲ್ ಆರ್ಟ್‌ ಪರ್ಫಾರ್ಮೆನ್ಸ್ ನೋಡಿ, ಇಡೀ ಬಾಲಿವುಡ್‌ ದಂಗಾಯ್ತಂತೆ! ಈತನ ಮೂವ್ಸ್ ಅವೋಘ ಎನ್ನುತ್ತಾರೆ. ಡ್ಯಾಶಿಂಗ್‌ ಲುಕ್ಸ್, ನಟನೆ, ಆ್ಯಕ್ಷನ್‌ ಎಲ್ಲಾ ಇದ್ದರೂ ಏಕೆ ಈತನ ಕೆರಿಯರ್‌ಬೆಳೆಯುತ್ತಿಲ್ಲವೋ.... ತಿಳಿಯುತ್ತಿಲ್ಲ.

ನಿಕ್‌ನಿಂದ ಟ್ರೆಂಡಿಂಗ್‌ ನಟಿಯಾದ ಪ್ರಿಯಾಂಕಾ

ಪ್ರಿಯಾಂಕಾ ತನ್ನ ವಿದೇಶಿ ಬಾಯ್‌ ಫ್ರೆಂಡ್‌ ನಿಕ್‌ ಜೊತೆ ಎಂಗೇಜ್‌ ಆಗಿದ್ದೇ ಬಂತು, ಟಾಪ್‌ ಟ್ರೆಂಡಿಂಗ್‌ ಸ್ಟಾರ್‌ ಎನಿಸಿದ್ದಾಳೆ. ಸಲ್ಮಾನ್‌ನ `ಭಾರತ್‌' ಚಿತ್ರ ಬಿಟ್ಟು ಹೊರನಡೆದ ಇವಳನ್ನು ಕಂಡು ಎಂಗೇಜ್‌ಮೆಂಟ್‌ ಬಿಝಿ ಎಂದುಕೊಂಡರು. ಆದರೆ ಕೆಲವೇ ದಿನಗಳಲ್ಲಿ ಫರ್ಹಾನ್‌ ಅಖ್ತರ್‌ನ ತಂಡದ ಜೊತೆ ಸೆಲ್ಛಿ ಕ್ಲಿಕ್ಕಿಸಿಕೊಂಡು ಈಕೆ ಎಲ್ಲರನ್ನೂ ಕಸಿವಿಸಿಗೊಳಿಸಿದ್ದಾಳೆ. ಫರ್ಹಾನ್‌ನ ಮುಂದಿನ ಹೆಸರಿಡದ ಚಿತ್ರದಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾಳಂತೆ.

ಯೋಗ್ಯತೆಗೆ ಸಂದ ಪುರಸ್ಕಾರ

ಅಂದಿನ ಕಾಲದಲ್ಲಿ, ಕ್ಯಾಸೆಟ್‌ ಕಿಂಗ್‌ ಎಂದೆನಿಸಿದ್ದ ಗುಲ್ಶನ್‌ ಕುಮಾರ್‌ರ ಮಾರ್ಗದರ್ಶನದಲ್ಲಿ ಪ್ರಖ್ಯಾತಿಯ ಶಿಖರ ತಲುಪಿದ್ದ ಅನುರಾಧಾ ಪೋಡ್ವಾಲ್‌ರಿಗೆ `ಮಹಾರಾಷ್ಟ್ರ ಗೌರವ' ಪ್ರಶಸ್ತಿ ನೀಡಿ ಇತ್ತೀಚೆಗೆ ಸನ್ಮಾನಿಸಲಾಯಿತು. ಪದ್ಮಶ್ರೀ ಮಾತ್ರವಲ್ಲದೆ ಅನೇಕ ಪ್ರಶಸ್ತಿ ಪುರಸ್ಕೃತ ಅನುರಾಧಾ, ಈಗೀಗ ಭಕ್ತಿಗೀತೆ ಮಾತ್ರ ಹಾಡುತ್ತಾರೆ. ಅಂದಿನ ಕಾಲದ ಲಾಲಿತ್ಯಭರಿತ ಸಂಗೀತಕ್ಕೆ ತಮ್ಮನ್ನು ಮೀಸಲಾಗಿರಿಸಿಕೊಂಡ ಈಕೆ, ಇಂದಿನ ಅಬ್ಬರದ ಚಿತ್ರ ಸಂಗೀತ ಒಲ್ಲೆ ಎನ್ನುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ