ನನ್ನ ಮದುವೆಗೆ ನೂಕುನುಗ್ಗಲು ಇಷ್ಟವಿಲ್ಲ!

ಇದೇನಪ್ಪ ವಿಚಿತ್ರ...... ಸೋನಂ ಎಲ್ಲರನ್ನೂ ತನ್ನ ಮದುವೆಗೆ ಬರುವಂತೆ ಕರೆದಳು, ಆದರೆ ಬಹಳ ಜನ ಬಂದು ನೂಕುನುಗ್ಗಲು ಆಗುವುದು ನನಗೆ ಇಷ್ಟವಿಲ್ಲ ಎನ್ನುತ್ತಾಳೆ. ತನ್ನ ಪ್ರೈವೆಸಿ ಮುಖ್ಯ ಎಂದು ಭಾವಿಸುವ ಮಿಸೆಸ್‌ ಸೋನಂ ಆನಂದ್‌, ಮದುವೆ ನಂತರ ಒಂದು ಚಿತ್ರದ ಪಿಸಿಯಲ್ಲಿ ಹೀಗೆ ಹೇಳಿದ್ದಾಳೆ. ``ನನ್ನ ಮದುವೆಗೆ ಬಂದಿದ್ದ ಜ್ಯಾಕ್‌ಲೀನ್‌, ರಣಬೀರ್‌, ಮದುವೆಯ ಎಲ್ಲಾ ಕಲಾಪಗಳನ್ನೂ ಸೋಶಿಯಲ್ ಮೀಡಿಯಾದಲ್ಲಿ ಲೈವ್‌ಮಾಡಿಬಿಟ್ಟರು. ಇದು ನನಗೆ ಅಷ್ಟು ಹಿಡಿಸಲಿಲ್ಲ. ಪ್ರತಿ ಮದುವೆಯಲ್ಲೂ ಪ್ರೈವೆಸಿ ಕೂಡ ಅಷ್ಟೇ ಮುಖ್ಯ. ನನ್ನ ಮದುವೆ ಬಗ್ಗೆಯೂ ಜನ ಹೀಗೆ ಯೋಚಿಸಿದ್ದರೆ ಚೆನ್ನಾಗಿತ್ತು. ನಾನಂತೂ ಕೆಲವೇ ಹಿತೈಷಿಗಳ ಮಧ್ಯೆ ಮದುವೆ ಆಗಬೇಕೂಂತಿದ್ದೆ. ಆದರೆ ಹಿರಿಯರು ಒಪ್ಪಬೇಕಲ್ಲ.....?''

ಹಿಟ್‌ಗಾಗಿ ಕಾಯುತ್ತಿರುವ ರಣಬೀರ್‌

ಇತ್ತೀಚೆಗೆ ಬಾಲಿವುಡ್‌ನಲ್ಲಿ ಈ ಕಪೂರ್‌ ಬಾಯ್‌ ಬಗ್ಗೆ ಎಲ್ಲೆಲ್ಲೂ ಮಾತು ಕೇಳಿಬರುತ್ತಿದೆ. ಕತ್ರೀನಾ ಕೈ ಕೊಟ್ಟ ನಂತರ ಆಲಿಯಾ ಹಿಂದೆ ಬಿದ್ದಿರುವ ಹಾಗೂ ಸಂಜಯ್‌ದತ್ ಕುರಿತಾದ `ಸಂಜೂ' ಬಯೋಪಿಕ್‌ ಚಿತ್ರದ ಕುರಿತಾಗಿ ಮಾತು ಕೇಳಿಬರುತ್ತಿವೆ. ಸೋನಂ ಮದುವೆಗೆ ಒಟ್ಟಾಗಿ ಬಂದ ಆಲಿಯಾ ರಣಬೀರ್‌, ಆಗಿನಿಂದ ಹಲವಾರು ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದ್ದಾರೆ. ಅವನ ಮಾಜಿ ಪ್ರೇಯಸಿ ಕತ್ರೀನಾ, ತಾನು ಕಣ್ಣಾರಿ ಅವರಿಬ್ಬರನ್ನೂ ಒಟ್ಟೊಟ್ಟಿಗೆ ಪಬ್ಲಿಕ್‌ ಆಗಿ ನೋಡುವವರೆಗೂ ಇದನ್ನು ನಂಬುವುದಿಲ್ಲ ಎಂದಿದ್ದಾಳೆ. ಆಕೆ ಜೊತೆ ನಟಿಸಿದ್ದ `ಜಗ್ಗಾ ಜಾಸೂಸ್‌' ತೋಪಾಗಿದ್ದು ಗೊತ್ತಿರುವ ಇವನಿಗೆ ಈಗ ಆಲಿಯಾ ಜೊತೆ ನಟಿಸುತ್ತಿರುವ `ಬ್ರಹ್ಮಾಸ್ತ್ರ, ಸಂಜು' ಚಿತ್ರಗಳ ಯಶಸ್ಸೇ ಆಶಾಕಿರಣವಾಗಿ ಕೂತಿದೆ. ಕಳೆದ ಹಲವು ವರ್ಷಗಳಿಂದ ಇವನ ಚಿತ್ರಗಳೆಲ್ಲ ಫ್ಲಾಪೇ, ಇವಾದರೂ ಕ್ಲಿಕ್‌ ಆಗುತ್ತವಯೇ? ಕಾಲವೇ ಉತ್ತರಿಸಬೇಕು.

ಪ್ಲಾಸ್ಟಿಕ್‌ ಮುಕ್ತ ಪರಿಸರ ಕಟ್ಟಬಯಸುವ ದೀಯಾ
ಸ್ವಚ್ಛ ಪರಿಸರಕ್ಕೆ ಆದ್ಯತೆ ಕೊಡು, ಅದನ್ನು ಸದಾ ಪ್ಲಾಸ್ಟಿಕ್‌, ಪಾಲಿಥಿನ್‌ ಫ್ರೀ ಆಗಿಸ ಬಯಸಿ ಅಭಿಯಾನಗಳನ್ನು ಆರಂಭಿಸಿರುವ ದೀಯಾ ಮಿರ್ಜಾ ಮೊದಲಿನಿಂದಲೂ ಇದರಲ್ಲಿ ಸಕ್ರಿಯಳು. ಈಗ ಎಷ್ಟೋ ತಾರೆಯರು ಈಕೆಯ ಈ ಸ್ವಚ್ಛತಾ ಆಂದೋಲನಕ್ಕೆ ಕೈ ಜೋಡಿಸಿದ್ದಾರೆ. ದೀಯಾ ಒಮ್ಮೆ ತಾನು ಸ್ಯಾನಿಟರಿ ನ್ಯಾಪ್‌ಕಿನ್‌ ಸಹಾ ಬಳಸುವುದಿಲ್ಲ ಎಂದು ಹೇಳಿದ್ದಳು. ಏಕೆಂದರೆ ಅದರಲ್ಲೂ ಪ್ಲಾಸ್ಟಿಕ್‌ ಬಳಸುತ್ತಾರೆ. ಜೂನ್‌ 5ರ ವಿಶ್ವ ಪರಿಸರ ದಿನದಂದು, ತಾಜ್‌ಮಹಲ್‌ನ ಸೌಂದರ್ಯ ಕುಂದಲು ಪ್ಲಾಸ್ಟಿಕ್‌ ಬಳಕೆಯೇ ಕಾರಣ ಎಂದಳು. ನಮ್ಮ ಮುಂದಿನ ಪೀಳಿಗೆಗಾಗಿ ನಾವಿಂದು ಪರಿಸರ ರಕ್ಷಿಸಲೇಬೇಕು. ನಾವು ಪ್ರಕೃತಿಗಾಗಿ ಏನು ಮಾಡುತ್ತೇವೋ ಅದು ಮರಳಿ ನಮಗೇ ಬರಲಿದೆ. ನದಿಗಳಲ್ಲಿ ನಾವು ಎಸೆಯುವ ಕಸ ಫುಡ್‌ ಚೇನ್‌ ಪ್ರಕ್ರಿಯೆ ಮೂಲಕ ನಮಗೇ ಮರಳುತ್ತದೆ, ಎಂದು ಕಳಕಳಿ ವ್ಯಕ್ತಪಡಿಸಿದಳು.

ಮಲೈಕಾ ಅರ್ಬಾಜ್ ಡೈವೋರ್ಸ್‌ಗೆ ಕಾರಣವಿದು

ಮಲೈಕಾ ಅರೋರಾ ತನ್ನ ಗಂಡ ಅರ್ಬಾಜ್ ನಿಂದ ಡೈಮೋರ್ಸ್‌ ಪಡೆಯಲು ಮೂಲಕಾರಣ ಅರ್ಜುನ್‌ ಕಪೂರ್‌ ಎಂದು ಬಾಲಿವುಡ್‌ನಲ್ಲಿ ಎಲ್ಲೆಲ್ಲೂ ಗುಸುಗುಸು ಕೇಳಿ ಬರುತ್ತಿತ್ತು. ಅರ್ಜುನ್‌ ಮಲೈಕಾರ ಅತಿ ನಿಕಟ ಸ್ನೇಹದಿಂದಾಗಿ ಅರ್ಬಾಜ್ ಹೆಂಡತಿಯಿಂದ ದೂರವಾಗತೊಡಗಿದ. ಆದರೆ ಈಗ ಪೆಪ್ಸಿ ಕ್ರಿಕೆಟ್‌ ಮ್ಯಾಚ್‌ನ ಜೂಜಿನಲ್ಲಿ ಅರ್ಬಾಜ್ ಹೆಸರು ದಟ್ಟವಾಗಿ ಕೇಳುತ್ತಿರುವಾಗ ಎಲ್ಲರಿಗೂ ವಿಷಯ ಕ್ಲಿಯರ್‌ ಆಗಿದೆ. ಅರ್ಬಾಜ್ ನ ಈ ದುರ್ಗುಣದಿಂದಾಗಿಯೇ ಮಲೈಕಾ ಅವನಿಂದ ದೂರ ಸರಿದಿದ್ದಂತೆ. ಅಣ್ಣ ಸಲ್ಮಾನ್‌ ಸಹ ಇವನಿಗೆ ತಿಳಿಹೇಳಿದ್ದನಂತೆ. ಆಗಲೂ ಅವನು ಜಗ್ಗದಿದ್ದಾಗ ಎಲ್ಲರೂ ಸಿಡಿದೆದ್ದರು. ಅರ್ಬಾಜ್ ಪೊಲೀಸರಿಗೆ ಹೇಳಿದ್ದೇನೆಂದರೆ, ತಾನು ಕಳೆದ 5 ವರ್ಷಗಳಿಂದಲೂ ಪೆಪ್ಸಿ ಜೂಜಿನಲ್ಲಿ ಕೋಟ್ಯಂತರ ಲಾಭ ನಷ್ಟ ಅನುಭವಿಸಿದ್ದನಂತೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ