ರಚಿತಾ ರಾಮ್ ಅಂದ್ರೆ ಸ್ಯಾಂಡಲ್‌ವುಡ್‌ ಕ್ವೀನ್‌, ಡಿಂಪಲ್ ಕ್ವೀನ್‌, ಲಕ್ಕಿ ಕ್ವೀನ್‌ ಹೀಗೆ ಅನೇಕ ಹೆಸರುಗಳು ಸೇರಿಕೊಳ್ತಿವೆ.

ರಚಿತಾ ಕಿರುತೆರೆಯಿಂದ ಬಂದಂಥ ನಟಿ. ಇಂದು ಜನಪ್ರಿಯ ತಾರೆ. ಇದೆಲ್ಲ ಹೇಗೆ ಸಾಧ್ಯವಾಯ್ತು ಅಂತ ನೀವಂದುಕೊಂಡರೆ ರಚಿತಾ ಹೇಳೋದನ್ನೇ ಕೇಳಿದರೆ ಚೆನ್ನಾಗಿರುತ್ತದೆ.

``ನಾನು ಫಿಲ್ಮ್ ಫ್ಯಾಮಿಲಿಯಿಂದ ಬಂದವಳಲ್ಲ. ನನಗ್ಯಾರೂ ಗಾಡ್‌ಫಾದರ್‌ ಇಲ್ಲ. ನಾನ್ಯಾವತ್ತೂ ಸಿನಿಮಾ ತಾರೆಯಾಗಬೇಕೆಂದು ಆಸೆ ಪಟ್ಟವಳೇ ಅಲ್ಲ. ಟಿವಿ ಸೀರಿಯಲ್‌ನಲ್ಲಿ  ಅವಕಾಶ ಅದಾಗಿಯೇ ಬಂದಿತು. ಅದರಲ್ಲಿ ನಟಿಸಿದೆ. ಅದೇ ಸಮಯಕ್ಕೆ `ಬುಲ್ ಬುಲ್' ಚಿತ್ರ ತಂಡದಿಂದ ಆಫರ್‌ಬಂತು. ಇಂಥ ದೊಡ್ಡ ಆಫರ್‌ ಅದರಲ್ಲೂ ದರ್ಶನ್‌ ಸರ್‌ ಜೊತೆ ನಟಿಸುವ ಅವಕಾಶ ನಾನಂತೂ ಕನಸಿನಲ್ಲೂ ಕಂಡಿರಲಿಲ್ಲ. ಎಲ್ಲದಕ್ಕೂ ಆತನೊಬ್ಬನೇ ಕಾರಣ!

ಯಾರಿದು ರಚಿತಾ.....?

ನಾನು ಚಿಕ್ಕ ಹುಡುಗಿಯಾಗಿದ್ದಾಗಿನಿಂದ ಆಂಜನೇಯ ಭಕ್ತಳು. ನನಗೇನೇ ಬೇಕೆಂದರೂ ಆಂಜನೇಯ ದೇವಸ್ಥಾನ ಗಿರಿನಗರದಲ್ಲಿದೆ. ಅಲ್ಲಿಗೆ ಹೋಗಿ ಕೇಳುವ ರೂಢಿ. ಆಂಜನೇಯ ಏನು ಹೇಳ್ತಾನೋ ಅದನ್ನೇ ನಾನು ಕೇಳೋದು. `ಅರಸಿ' ಟಿ.ವಿ. ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗ ದೊಡ್ಡ ಸಿನಿಮಾ ಕಂಪನಿಯಿಂದ ಫೋನ್‌ ಕರೆ ಬಂತು. ನಾನು ಆಂಜನೇಯನ ಬಳಿ ಹೋಗಿ ನಮಸ್ಕಾರ ಹಾಕಿ ಬಂದೆ. ಏನೇ ಬಂದರೂ ಒಳ್ಳೆಯದು ಬರಲಿ ಅಂತ ಕೇಳಿಕೊಂಡೆ, ಆಂಜನೇಯ ನಾನು ಕೇಳದಿದ್ದರೂ ಕೊಟ್ಟೆ ಕೊಡುತ್ತಾನೆ ಎಂಬುದು ಗೊತ್ತಿದೆ. ಮರುದಿನವೇ `ಬುಲ್‌ ಬುಲ್‌' ಚಿತ್ರಕ್ಕೆ ನೀವು ನಾಯಕಿಯಾಗಿ ಆಯ್ಕೆಯಾಗಿದ್ದೀರಾ ಅಂತ ನ್ಯೂಸ್‌ ಬಂತು. ಜೈ ಆಂಜನೇಯ ಅಂತ ಸಿನಿಮಾರಂಗಕ್ಕೆ ಹೊರಟುಬಿಟ್ಟೆ. ಇಲ್ಲಿಯವರೆಗೂ ನಾನು ಮಾಡಿಕೊಂಡು ಬಂದಿರುವ ಎಲ್ಲಾ ಚಿತ್ರಗಳೂ, ಪಾತ್ರಗಳೂ ಆ ದೇವರು ಕೊಟ್ಟಿರುವ ಆಶೀರ್ವಾದ. ನನ್ನ ಸೋಲು, ಗೆಲುವು, ಜನಪ್ರಿಯತೆ ಎಲ್ಲಾ ಕ್ರೆಡಿಟ್‌ನಿನಗೇ ಸೇರಿದ್ದು ಅಂತ ಮೊದಲೇ ಹೇಳಿಬಿಟ್ಟಿರುತ್ತೇನೆ. ಜೈ ಹನುಮಾನ್‌!

ನಿಜ ಹೇಳು.... ನಟಿಯಾಗಬೇಕೆಂಬ ಆಸೇನೇ ಇರಲಿಲ್ವಾ?

ನೀವು ನಂಬೋದಿಲ್ಲ, ನನಗಂತೂ ಸತ್ಯವಾಗಲೂ ಅನಿಸಿರಲಿಲ್ಲ. ಏಕೆಂದರೆ ನನಗೆ ಅಭಿನಯ ಗೊತ್ತಿರಲಿಲ್ಲ. ಮೇಕಪ್‌ ಹಾಕೋಕೆ ಇಷ್ಟವಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೇನೇ ಇರಲಿಲ್ಲ. ಕ್ಯಾಮೆರಾ ಫೇಸ್‌ ಮಾಡೋದು, ಡೈಲಾಗ್‌ ಹೇಳೋದು ಇದು ಯಾವುದೂ ಗೊತ್ತಿರಲಿಲ್ಲ. ಸೀರಿಯಲ್ ಮಾಡುವಾಗ ಡೈರೆಕ್ಟರ್‌ ಅರವಿಂದ್‌ ಕೌಶಿಕ್‌ ನಂಗೆ ಟ್ರೇನ್‌ ಮಾಡಿದರು. ಆಗಲೇ ಎಲ್ಲರೂ ಹೇಳೋರು ನಿನಗೆ ಒಳ್ಳೆ ಸ್ಕ್ರೀನ್‌ ಪ್ರೆಸೆನ್ಸ್ ಇದೆ. ಹೀರೋಯಿನ್‌ ಆಗು ಅಂತ. ನಾನಂತೂ ಯಾರ ಬಳಿಯೂ ಅವಕಾಶ ಕೇಳಿಕೊಂಡು ಹೋದವಳಲ್ಲ. ಫೋಟೋ ಶೂಟ್‌ ಮಾಡಿಸಿ ಪ್ರೊಡಕ್ಷನ್‌ ಕಂಪನಿಗಳಿಗೆ ಕೊಟ್ಟವಳಲ್ಲ. ಅದೆಲ್ಲ ನಾನು ಮಾಡಿಲ್ಲ, ಮುಂದಕ್ಕೆ ಮಾಡುವುದೂ ಇಲ್ಲ. ನನ್ನ  ಭವಿಷ್ಯವನ್ನು ದೇವರೇ ರೂಪಿಸಬೇಕು ಅಂತ ಆಂಜನೇಯನಿಗೇ ಬಿಟ್ಟಿದ್ದೆ. ವಿದ್ಯಾಭ್ಯಾಸ ಮುಂದುವರಿಸು ಅಂದರೆ ಅದಕ್ಕೂ ರೆಡಿ ಇದ್ದೆ. ಒಳ್ಳೆ ಹುಡುಗ ಸಿಕ್ಕರೆ ಮದುವೆಯಾಗಿ ಸಂಸಾರ ಮಾಡಿಕೊಂಡಿರುವ ಅಂದರೆ ಅದಕ್ಕೂ ಸೈ. ಒಟ್ಟಿನಲ್ಲಿ ಯಾವ ದಾರಿ ತೋರಿಸತ್ತೀಯೋ ಅಲ್ಲಿಗೆ ಹೋಗ್ತೀನಿ ಅಂತ ಎಲ್ಲ ಭಾರವನ್ನೂ ಹಾಕಿಬಿಟ್ಟಿದ್ದೆ. `ನೀನು ನಾಯಕಿಯಾಗು,' ಅಂತ ದೇವರು ಹೇಳಿದರು, ನಾನೀಗ ಅದೇ ಆಗಿದ್ದೀನಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ