-ರಾಘವೇಂದ್ರ ಅಡಿಗ ಎಚ್ಚೆನ್.
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ ಹಾಗೂ ಯಕ್ಷಗಾನ ಹರಕೆ ಪ್ರದರ್ಶನ ನಡೆದಿದೆ. ಮನೆಯ ಹಿರಿಯರು ಹೇಳಿಕೊಂಡ ಹರಕೆಯಂತೆ ಈ ಸಾಂಪ್ರದಾಯಿಕ ಆಚರಣೆ ನಡೆದಿದೆ. ಬೈಂದೂರಿನ ಕೆರಾಡಿಯಲ್ಲಿರುವ ರಿಷಬ್ ಶೆಟ್ಟಿ ಹಿರಿಯರ ಮನೆಯಲ್ಲಿ ತಂಡಗಳನ್ನು ಕರೆಸಿಕೊಂಡು ಕುಣಿತ ಭಜನೆ ನಡೆಸಲಾಯಿತು. ನಟ ರಿಷಬ್ ಶೆಟ್ಟಿ ಸ್ವತಃ ಭಜನಾ ತಂಡಗಳ ಜೊತೆ ಭಾಗವಹಿಸಿದರು. ಈ ಹಿಂದೆಯೇ ಹರಕೆ ಹೇಳಿಕೊಂಡಿದ್ದು, ಕಳೆದ ವರ್ಷ ಮೇ ತಿಂಗಳಲ್ಲಿ ಈ ಆಚರಣೆ ನಡೆಸಬೇಕಾಗಿತ್ತು. ಆದರೆ ಕಾಂತಾರ ಸಿನಿಮಾ ಶೂಟಿಂಗ್ ಕಾರಣಕ್ಕೆ ಇತ್ತೀಚೆಗೆ ಹರಕೆ ತೀರಿಸಲಾಗಿದೆ. ಇದೆ ವೇಳೆ ಮಾರಣಕಟ್ಟೆ ಮೇಳದ ಹರಕೆಯ ಯಕ್ಷಗಾನ ಪ್ರದರ್ಶನ ಕೂಡ ನಡೆದಿದೆ.
ಒಂದೆರಡು ದಿನದಲ್ಲಿ ‘ಜೈ ಹನುಮಾನ್’ ಬಹು ನಿರೀಕ್ಷಿತ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ಕುಣಿತ ಭಜನೆಯಲ್ಲಿ ಭಾಗವಹಿಸಿದ ತಂಡಗಳಿಗೆ ಚಲನಚಿತ್ರದ ಲೋಗೋ ಹೊಂದಿದ ಟೀ ಶರ್ಟ್ ನೀಡಿ ಚಿತ್ರದ ಪ್ರಮೋಷನ್ ಕೂಡಾ ನಡೆಸಲಾಗಿದೆ.
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





