ಬೆಂಗಳೂರು ನಗರದಲ್ಲಿ ಪುಟ್ಟ ಮನೆಯೊಂದನ್ನು ಮಾಡುವುದು ಸುಲಭವಲ್ಲ. ನಿವೇಶನಗಳ ಬೆಲೆಗಳನ್ನು ಕೇಳಿದರೆ ಬೆಚ್ಚಿಬೀಳಬೇಕು, ಆದರೂ ಎಲ್ಲರಿಗೂ ತಮ್ಮದೇ ಆದ ಸ್ವಂತ ಮನೆಯೊಂದನ್ನು ಕಟ್ಟಬೇಕೆನ್ನುವ ಆಸೆ ಇದ್ದದ್ದೇ. ಅದರ ಜೊತೆ ಮನೆಯ ಸುತ್ತ ಹೂವಿನ ಹಾಸಿಗೆಯನ್ನು ಚೆಲ್ಲುವಂತೆ ಇರಬೇಕೆನ್ನುವ ಕನಸು, ಆದರೆ ನಗರದ ಪುಟ್ಟ ನಿವೇಶನಗಳಲ್ಲಿ ಈ ಕನಸನ್ನು ನನಸು ಮಾಡಿಕೊಳ್ಳುವುದು ನಿಜಕ್ಕೂ ಕಷ್ಟ. ಮನೆಯ ಸುತ್ತ ಹೂವಿನ ಹಾಸಿಗೆ ಇರದಿದ್ದರೇನಂತೆ, ಮನೆಯ ಮೇಲೆ ತಾರಸಿಯಲ್ಲೇ ನಾನು ಹೂವಿನ ಹಾಸಿಗೆಯನ್ನಲ್ಲದೆ ತರಕಾರಿಯನ್ನೂ ಬೆಳೆಯುವೆ ಎನ್ನುವವರು ಬಹಳ ಅಪರೂಪ, ಅಂತಹರಲ್ಲಿ ರಾಜಾಜಿನಗರದ ವಿಜಯಾ ಉರಾಳ ಅವರೂ ಒಬ್ಬರು.

ಅವರ ಮನೆಯ ತಾರಸಿಯಲ್ಲಿ ಹೂಗಳೇ ಅಲ್ಲದೆ ತರಿಕಾರಿಯನ್ನೂ ಬೆಳೆಸಿದ್ದಾರೆ. ನಾವು ತಿನ್ನುವ ಮಾರುಕಟ್ಟೆಯ ತರಕಾರಿಗಳು ವಿಷಪೂರಿತ ಆಗಿರುತ್ತವೆ. ಅವನ್ನು ಬೆಳೆಯಲು ಹೆಚ್ಚಿನ ಪ್ರಮಾಣದಲ್ಲಿ ಸಾಕಷ್ಟು ಕ್ರಿಮಿ ನಾಶಕಗಳನ್ನು ಸಿಂಪಡಿಸಿರುತ್ತಾರೆ. ಆದ್ದರಿಂದ ಸಾವಯವ ಕೃಷಿಯಿಂದ ಬೆಳೆದಂತಹ ತರಕಾರಿಗಳನ್ನು ತಿನ್ನಿ ಎಂದು ಆಹಾರ ತಜ್ಞರು ಹೇಳುತ್ತಲೇ ಇರುತ್ತಾರೆ. ಆದರೆ ವಾಸ್ತವಿಕವಾಗಿ ಅದು ಅಷ್ಟು ಸುಲಭವಲ್ಲ. ವಿಜಯಾ ತಮ್ಮ ತಾರಸಿಯಲ್ಲಿ ತರಕಾರಿಯನ್ನು ಬೆಳೆದು, ಈ ಕಷ್ಟವನ್ನೂ  ಸುಲಭವೆಂದು ತೋರಿಸಿದ್ದಾರೆ.

ಮೂಲತಃ ಮಂಗಳೂರಿನವರಾದ ಇವರ ಮನೆಯಲ್ಲೇ ತೋಟವಿತ್ತಂತೆ. ಅವರು ಬಾಲ್ಯದಲ್ಲಿ ನೆಟ್ಟ ಮಾವು ಮತ್ತು ಸೀಬೆ ಮರಗಳಲ್ಲಿ ಈಗಲೂ ಹಣ್ಣು ಬಿಡುತ್ತದೆಯಂತೆ.

``ಮದುವೆಯಾದ ನಂತರ ಪತಿ ಬ್ಯಾಂಕ್‌ ಉದ್ಯೋಗಿ. ಊರೂರು ಅಲೆಯುತ್ತಿದ್ದುದರಿಂದ ಗಿಡ ಬೆಳೆಸುವ ಆಶೆ ಕೈಗೂಡಲೇ ಇಲ್ಲ. ಆದರೆ ಬೆಂಗಳೂರಿಗೆ ಬಂದ ಮೇಲೂ ನೆಟ್ಟ ಕೆಲವು ಗಿಡಗಳನ್ನು ಹೆಗ್ಗಣ ಬರುತ್ತದೆಂದು ಸಿಮೆಂಟ್‌ ಹಾಕಿ ಮುಚ್ಚಿಸಿಬಿಟ್ಟರು. ಆದರೂ ನಾನು ಹಠ ಬಿಡದೆ ತಾರಸಿಯಲ್ಲೇ ಹೂವು ತರಕಾರಿ ಬೆಳೆಯಲು ಪ್ರಾರಂಭಿಸಿದೆ. ಈಗ ಮನೆಯ ಎಲ್ಲರ ಜೊತೆ, ಅಕ್ಕಪಕ್ಕದವರೂ ನನಗೆ ಸಹಕಾರ ನೀಡುತ್ತಾರೆ,'' ಎನ್ನುತ್ತಾರೆ ವಿಜಯಾ.

ಬೆಳ್ಳಗೆ ಹೊಳೆಯುವ ಸೇವಂತಿಗೆ, ಶಾಂತಿಯ ಪ್ರತೀಕವಾದ ಗೊಂಚಲು ಗೊಂಚಲು ಶ್ವೇತ ಗುಲಾಬಿ, ಕೆಂಪನೆಯ ರೋಜಾ ಹೂ,  ಬಿಳಿಯ ಲಿಲಿ ಹೂ, ಸರಸ್ವತಿ ಬಣ್ಣದ ಡೇಲಿಯಾ, ಮಲ್ಲಿಗೆ, ಸೇವಂತಿಗೆ, ದಾಸವಾಳ, ಶಂಖಪುಷ್ಪ, ಸದಾಪುಷ್ಪ, ವಲ್ವೆಟ್‌ ಹೂ, ರುದ್ರಾಕ್ಷಿ, ತುಳಸಿ, ಒಂದೆಡೆ ಹೂಗಳ ಸಾಮ್ರಾಜ್ಯವಾದರೆ ಮತ್ತೊಂದೆಡೆ ತರಕಾರಿಗಳದು.

ಅವರು ಬೆಳೆಸಿರುವ ತರಕಾರಿ ಒಂದಕ್ಕಿಂತ ಒಂದು ಆರೋಗ್ಯಪೂರ್ಣ ಮತ್ತು ಪುಷ್ಟಿದಾಯಕವಾಗಿದೆ. ನೋಡಿದರೆ ಬಾಯಿಯಲ್ಲಿ ನೀರು ಒಸರುತ್ತದೆ. ಹಸಿರಿನ ಮಧ್ಯೆ ಮೈದುಂಬಿಕೊಂಡ ಸಿಹಿಗುಂಬಳ, ಪಕ್ಕದಲ್ಲೇ ಬೂದುಗುಂಬಳ, ಎಳಸಾದ ಬೆಂಡೆಕಾಯಿ, ಉದ್ದನೆಯ ಹಲಸಂದೆ, ಹಸಿರು ಬೀನ್ಸ್, ಶುಂಠಿ, ಅರಿಶಿನ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಗಾಂಧಾರಿ ಮೆಣಸು, ದೊಣ್ಣೆ ಮೆಣಸಿನಕಾಯಿ, ಕಲ್ಲಂಗಡಿ, ಟೊಮೇಟೊ ಎಲ್ಲವನ್ನೂ ಬೆಳೆಸಿದ್ದಾರೆ.

ದಿನಕ್ಕೆ ಒಂದು ಗಂಟೆ ಗಿಡಗಳೊಂದಿಗೆ ಕಳೆಯುತ್ತಾರೆ. ರೀ ಪಾಟಿಂಗ್‌ ಸಹ ತಾವೇ ಮಾಡುತ್ತಾರೆ. ಮೇಲಿನ ಸ್ವಲ್ಪ ಮಣ್ಣನ್ನು ತೆಗೆದು ಅದಕ್ಕೆ ಕುರಿ ಗೊಬ್ಬರ ಬೆರೆಸಿ ಮತ್ತೆ ತುಂಬಿಸುತ್ತಾರೆ. ಗಿಡಗಳಿಗೆ ನೀರುಣಿಸುವಾಗಲೂ ತರಕಾರಿ ಮತ್ತು ಅಕ್ಕಿ ತೊಳೆದ ನೀರು ಈಗಿನ ಆಧುನಿಕ ಫಿಲ್ಟರ್‌ಗಳಲ್ಲಿ ಹೊರಬರುವ ನೀರನ್ನೂ ಸಹ ಗಿಡಗಳಿಗೆ ಬಳಸುತ್ತಾರಂತೆ. ಗಿಡಗಳಿಗೆ ಅಗತ್ಯವಿರುವ ಅರ್ಧ ನೀರು ಬಳಸಿರುವುದೇ ಆಗಿರುತ್ತದೆ ಎನ್ನುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ