- ಕೆ. ಮಾಳವಿಕಾ

ಕೀರ್ತನಾಳ ಮದುವೆಯ ದಿನ ಹತ್ತಿರಕ್ಕೆ ಬರುತ್ತಿದ್ದಂತೆ ಅವಳ ಚಿಂತೆಯೂ ಹೆಚ್ಚಾಗುತ್ತಿತ್ತು. ಹಿಂದೆ ಅನುಭವಿಸಿದ ಸುಂದರ ಕ್ಷಣಗಳು ಪದೇಪದೇ ಅವಳನ್ನು ಚುಚ್ಚುತ್ತಿದ್ದವು. ಮದುವೆ ದಿನದವರೆಗೆ ಅವಳು ಆ ಕ್ಷಣಗಳಿಂದ ಬಿಡುಗಡೆ ಪಡೆಯಲು ಬಯಸುತ್ತಿದ್ದಳು. ಶರತ್‌ನ ನೆನಪುಗಳು ಮರೆತುಹೋಗುವ ಬದಲು ದಿನದಿನಕ್ಕೂ ಇನ್ನಷ್ಟು ಗಾಢವಾಗುತ್ತಿತ್ತು. ಕಳೆದುಹೋದ ಕ್ಷಣಗಳು ಅವಳ ಹೃದಯವನ್ನು ಮುಳ್ಳಿನಂತೆ ಚುಚ್ಚುತ್ತಿದ್ದವು.

ಕೀರ್ತನಾಳ ತಂದೆತಾಯಿ ಕೂಡ ಅವಳ ಮನಸ್ಸಿನ ನೋವನ್ನು ಅರ್ಥ ಮಾಡಿಕೊಂಡಿದ್ದರು. ಆದರೆ ಅವರೆದುರು ಕೀರ್ತನಾಳ ಇನ್ನೊಂದು ಮದುವೆ ಹೊರತಾಗಿ ಬೇರೆ ದಾರಿ ಇರಲಿಲ್ಲ. ಅವಳ ವಯಸ್ಸು ಇನ್ನೂ 23 ವರ್ಷವಾಗಿತ್ತು. ಅವಳಿನ್ನೂ ಬದುಕಿನಲ್ಲಿ ಬಹಳ ದೂರ ಸಾಗಬೇಕಿತ್ತು. ಅವಳ ತಂದೆತಾಯಿ ತಾವು ಬದುಕಿರುವಾಗಲೇ ಅವಳ ಏಕಾಂಗಿತನ ದೂರ ಮಾಡಲು ಇಚ್ಛಿಸಿದ್ದರು. ಅವರು ಕೀರ್ತನಾಳಂತೆಯೇ ತನ್ನ ಸಂಗಾತಿಯನ್ನು ಕಳೆದುಕೊಂಡು ವಿರಹ ಅನುಭವಿಸುತ್ತಿದ್ದ ಒಬ್ಬ ವಿಧುರನೊಡನೆ ಅವಳ ಮದುವೆ ನಿಶ್ಚಯಿಸಿದರು.

ಮದುವೆ ಯಶಸ್ವಿಯಾಗಲಿಲ್ಲ

ಹಲವು ಸಂದರ್ಭಗಳಲ್ಲಿ ಮಹಿಳೆ ಇನ್ನೊಂದು ಮದುವೆಯಾಗಿಯೂ ತನ್ನ ಮೊದಲ ಗಂಡನೊಂದಿಗೆ ಸಂಬಂಧವನ್ನು ಸಂಪೂರ್ಣವಾಗಿ ತೊಡೆದುಹಾಕುವುದಿಲ್ಲ. ಎರಡನೆ ಬಾರಿ ವಿಚ್ಛೇದನಕ್ಕೆ ಬಲಿಯಾದ 32 ವರ್ಷದ ರಾಧಿಕಾ ಹೀಗೆ ಹೇಳುತ್ತಾರೆ, ``ಇನ್ನೊಂದು ಮದುವೆ ನನ್ನ ಪಾಲಿಗೆ ಲೈಂಗಿಕ ಶೋಷಣೆ ಬಿಟ್ಟರೆ ಬೇರೇನೂ ಆಗಲಿಲ್ಲ. ನನ್ನ ಮೊದಲ ಮದುವೆ ಅಸಫಲವಾಗಲು ಕಾರಣ ನನ್ನ ಹಿಂದಿನ ಪತಿ ನಪುಂಸಕರಾಗಿದ್ದರು. ಸಂತಾನೋತ್ಪತ್ತಿ ಮಾಡಲು ಅಸಮರ್ಥರಾಗಿದ್ದರು.

``ಮದುವೆಯ ನಂತರ ನನ್ನ ಎರಡನೆಯ ಗಂಡನಿಗೆ ಸೆಕ್ಸ್ ಬಗ್ಗೆ ನನ್ನ ಬಲಹೀನತೆ ಹೇಗೆ ಗೊತ್ತಾಯಿತೋ ತಿಳಿಯಲಿಲ್ಲ. ಅವರು ಪುರುಷರ ಅಹಂ ತೋರಿಸಲು ನನ್ನ ಲೈಂಗಿಕ ಶೋಷಣೆ ಮಾಡತೊಡಗಿದರು. ಅದರಿಂದ ಅವರ ಅಹಂಗೆ ತೃಪ್ತಿಯಾಗಿರಬಹುದು. ಆದರೆ ಅವರು ನನಗೆ ಮಾನಸಿಕವಾಗಿ ಬಹಳ ಪೀಡಿಸತೊಡಗಿದರು.

``ಇವರಿಗಿಂತ ನನ್ನ ಮೊದಲ ಗಂಡನೇ ಉತ್ತಮ ಅನಿಸತೊಡಗಿತು. ಅವರು ಸಂವೇದನಾಶೀಲರಂತೂ ಆಗಿದ್ದರು. ನನ್ನ ಮನಸ್ಸಿನ ನೋವು ಮತ್ತು ಸಂಕಟ ಅರ್ಥ ಮಾಡಿಕೊಳ್ಳುತ್ತಿದ್ದರು. ಮೊದಲ ಗಂಡನೊಡನೆ ವಿಚ್ಛೇದನ ಮತ್ತು ಎರಡನೆ ಮದುವೆ ಬಗ್ಗೆ ನನಗೆ ಬಹಳಷ್ಟು ಪಶ್ಚಾತ್ತಾಪ ಆಗುತ್ತಿತ್ತು.

``ಆದರೆ ಈಗ ನಾನೇನೂ ಮಾಡುವಂತಿರಲಿಲ್ಲ. ಇದರ ಮಧ್ಯೆ ಒಂದು ದಿನ ಶಾಪಿಂಗ್‌ ಮಾಡುವಾಗ ನನ್ನ ಮೊದಲ ಗಂಡನೊಂದಿಗೆ ಭೇಟಿಯಾಯಿತು. ವಿಚ್ಛೇದನದಿಂದಾಗಿ ಅವರು ಕುಗ್ಗಿಹೋಗಿದ್ದರು. ಅವರ ಈ ಪರಿಸ್ಥಿತಿಗೆ ನಾನೇ ಕಾರಣ ಅನ್ನಿಸತೊಡಗಿತು. ಹೀಗಾಗಿ ಅವರನ್ನು ಭೇಟಿಯಾಗತೊಡಗಿದೆ.

``ನನ್ನ ಎರಡನೆ ಗಂಡ ಸಂಶಯ ಸ್ವಭಾವದವರು, ಆದ್ದರಿಂದ ನನ್ನನ್ನು ಹಿಂಬಾಲಿಸತೊಡಗಿದರು ಅಥವಾ ಕಣ್ಣಿಡತೊಡಗಿದರು. ನನ್ನ ಗಂಡನ ವರ್ತನೆ ಯಾವ ಹಂತಕ್ಕೆ ಹೋಯಿತೆಂದರೆ ನಾನು ಮತ್ತೊಮ್ಮೆ ವಿಚ್ಛೇದನಕ್ಕಾಗಿ ಕೋರ್ಟಿನ ಮೆಟ್ಟಿಲು ಹತ್ತಬೇಕಾಯಿತು. ಮೂರನೆಯ ಮದುವೆ ಮಾಡಿಕೊಳ್ಳುವುದಿಲ್ಲ, ಇಡೀ ಜೀವನ ಒಂಟಿಯಾಗಿರುತ್ತೇನೆ ಎಂದು ಸಂಕಲ್ಪಿಸಿದ್ದೇನೆ.''

ಕುಮುದಾ ಹೀಗೆ ಹೇಳುತ್ತಾರೆ, ``ನನ್ನ ಮರುಮದುವೆಯಲ್ಲಿ ಸಪ್ತಪದಿ ಹಂತ ಬಂದಾಗಲೂ ನನ್ನ ಮನಸ್ಸಿನಲ್ಲಿ ಈ ಮದುವೆಯ ಕುರಿತು ಉತ್ಸಾಹವಿರಲಿಲ್ಲ. ಹೂಗಳಿಂದ ಅಲಂಕೃತಗೊಡ ಮಂಚದಲ್ಲಿ ಕುಳಿತಾಗ ನಿರ್ಜೀವಿಯಂತಿದ್ದೆ. ಅವರು ಮೊದಲ ಬಾರಿ ನನ್ನನ್ನು ಸ್ಪರ್ಶಿಸಿದಾಗ ನನಗೆ ಬೇಡವೆಂದರೂ ರಾಜೀವರ ನೆನಪಾಗತೊಡಗಿತು. ಇನ್ನೊಬ್ಬ ಗಂಡನನ್ನು ಒಪ್ಪಿಕೊಳ್ಳಲು ನನಗೆ ಸಾಕಷ್ಟು ಸಮಯ ಬೇಕಾಯಿತು.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ