ಸತೀಶ್‌ ನಗರವಾಸಿ. ಅವನು ಆಗಾಗ ಹೆಂಡತಿಯ ಮೇಲೆ ಕೈ ಮಾಡುತ್ತಿದ್ದ. ಪಕ್ಕದ ಮನೆಯಲ್ಲಿ ವಾಸಿಸುವ ಚಂದ್ರಕಾಂತ 1-2 ಸಲ ಆ ಬಗ್ಗೆ ಗಮನಿಸಿಯೂ ಏನೂ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಆದರೆ ಸತೀಶ್‌ ಹೊಡೆಯುವುದನ್ನು ನಿಲ್ಲಿಸದೇ ಇದ್ದಾಗ ಚಂದ್ರಕಾಂತ ಸತೀಶ್‌ ಗೆ ಎಚ್ಚರಿಕೆ ಕೊಟ್ಟರು, ``ನೀನು ನಿನ್ನ ಹೆಂಡತಿಯ ಮೇಲೆ ಕೈ ಮಾಡುವುದನ್ನು ನಿಲ್ಲಿಸದೇ ಇದ್ದರೆ, ನಾನು ನಿನ್ನ ವಿರುದ್ಧ ಪೊಲೀಸ್‌ ಠಾಣೆಗೆ ದೂರು ಕೊಡುತ್ತೇನೆ.''

`ತನಗೆ ಬುದ್ಧಿ ಹೇಳಲು ಇವರಾರು?' ಎಂದು ಸತೀಶ್‌ ಕೋಪಗೊಂಡು ನಾಲ್ಕೈದು ಜನ ಸ್ನೇಹಿತರನ್ನು ಕರೆದುಕೊಂಡು ಬಂದು ಚಂದ್ರಕಾಂತ್‌ ರನ್ನು ಮನಬಂದಂತೆ ಥಳಿಸಿದ. ಅಷ್ಟೇ ಅಲ್ಲ, ಅವರ ಮಗನ ಮೇಲೂ ಹಲ್ಲೇ ಮಾಡಿ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ತಂದ.

ಮತ್ತೊಂದು ಘಟನೆ. ಬದ್ರಿ ಪ್ರಸಾದ್‌ ಹಾಗೂ ಅವರ ಮಗ ಶ್ರೀನಿವಾಸ್‌ ಮೇಲೆ ಪಕ್ಕದ ಮನೆಯ ಅನಿಲ್ ‌ಎಂಬಾತ ಹಲ್ಲೆ ನೆಡಸಿದ. ಇದಕ್ಕೆ ಕಾರಣ ಏನು ಗೊತ್ತೆ? ತಮ್ಮ ಮನೆ ಎದುರು ಗಾಡಿ ನಿಲ್ಲಿಸಬೇಡಿ ಎಂದು ಬದ್ರಿ ಪ್ರಸಾದ್‌ ಮತ್ತು ಅವರ ಮಗ ಶ್ರೀನಿವಾಸ್ ಹೇಳಿದ್ದಕ್ಕೆ ಈ ರೀತಿ ಪ್ರತಿಕ್ರಿಯೆ ತೋರಿಸಿದ.

ದೆಹಲಿಯಲ್ಲಿ 15 ವರ್ಷದ ರೋಹನ್‌ ಎಂಬ ಯುವಕನನ್ನು ಅವನ ಗೆಳೆಯರೇ ಹೊಡೆದು ಸಾಯಿಸಿದರು. ಅದಕ್ಕೆ ಬಲವಾದ ಕಾರಣವೇನೂ ಇರಲಿಲ್ಲ. ಯಾವುದೊ ವಿಷಯಕ್ಕೆ ಸಂಬಂಧಪಟ್ಟಂತೆ ಮನಸ್ತಾಪ ಆಗಿತ್ತಂತೆ. ಅದೇ ಕಾರಣ ಮುಂದಿಟ್ಟುಕೊಂಡು ಗೆಳೆಯರು ಅವನನ್ನು ಹೊಡೆದು ಸಾಯಿಸಿದರು.

ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಸಾಮಾನ್ಯ ಎಂಬಂತಾಗಿವೆ. ಜನರ ಹೃದಯದಲ್ಲಿ ಪ್ರೀತಿಯ ಬದಲಿಗೆ ಸಿಡಿಮಿಡಿತನ, ಕೋಪ, ಆಕ್ರೋಶ, ಆವೇಶಗಳು ಮನೆ ಮಾಡಿಕೊಂಡಿವೆ. ಚಿಕ್ಕಪುಟ್ಟ ವಿಷಯಗಳಿಗೆ ಸಂಬಂಧಪಟ್ಟಂತೆ ಜನರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ.

ಕೆಲವೇ ಕೆಲವು ನಿಮಿಷಗಳ ಕೋಪ, ಆವೇಶ ಇನ್ನೊಬ್ಬರ ಜೀವಕ್ಕೆ ಅಪಾಯ ಉಂಟು ಮಾಡಿದರೆ, ಅದರ ಪರಿಣಾಮ ಅನುಭವಿಸುವವರು ಕೋಪ ಮಾಡಿಕೊಂಡರೇ ಹೊರತು ಬೇರಾರೂ ಅಲ್ಲ. ಅದರಿಂದಾಗಿ ಅವರ ಜೀವನವೇ ನರಕವಾಗುತ್ತದೆ. ಅವರ ಜೀವನ ಜೈಲಿನಲ್ಲಿ ಅಥವಾ ಜೈಲಿಗೆ ಹೋಗುವುದನ್ನು ತಡೆಯುವ ಪ್ರಯತ್ನದಲ್ಲೇ ಕಳೆದುಹೋಗುತ್ತದೆ.

ಅಂದಹಾಗೆ ಸಿಟ್ಟು ಅಥವಾ ಆಕ್ರೋಶ ದೇಹಕ್ಕೆ ತಲುಪಿದ ಬಳಿಕ ವಿಷದ ಹಾಗೆ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲ, ದೈಹಿಕ ಮಾನಸಿಕ ದೃಷ್ಟಿಯಿಂದ ಹಾನಿ ತಲುಪಿಸುವುದರ ಜೊತೆ ಜೊತೆಗೆ ಜೀವನದ ನೆಮ್ಮದಿಯನ್ನೇ ಉಡುಗಿಸಿಬಿಡುತ್ತದೆ.

ಜೀವನದಲ್ಲಿ ಇಂತಹ ಅದೆಷ್ಟೋ ಘಟನೆಗಳು ನಡೆಯುತ್ತವೆ. ಆಗ ನಾವು ಕೋಪದ ಮೇಲೆ ನಿಯಂತ್ರಣ ಕಳೆದುಕೊಂಡು ಬಿಡುತ್ತೇವೆ. ನಾವು ಮಾನಸಿಕವಾಗಿ ದುರ್ಬಲರಾದಾಗ ನಮ್ಮೊಳಗಿನ ಶಕ್ತಿಯೂ ಸಹ ಮಂದಾಗುತ್ತದೆ.

ಇದಕ್ಕೊಂದು ಒಳ್ಳೆಯ ಉಪಾಯವೆಂದರೆ, ನಾವು ನಮ್ಮ ಕೋಪದ ಮೇಲೆ ನಿಯಂತ್ರಣ ಹೊಂದಬೇಕು.`ಸ್ಟಾಪ್‌ ಟೆಕ್ನಿಕ್‌' ಅನುಸರಿಸಿ

`ಎಸ್‌' ಅಂದರೆ ಸ್ಟಾಪ್‌. `ಟಿ' ಅಂದರೆ ಟೇಕ್‌ ಎ ಬ್ರೆಥ್‌, `ಓ' ಅಂದರೆ ಅಬ್ಸರ್ವ್ಸ್, `ಪಿ' ಅಂದರೆ ಪ್ರೊಸೀಡ್‌! ಯಾವುದೇ ವ್ಯಕ್ತಿ ನಿಮ್ಮ ಜೊತೆಗೆ ಕೋಪದಲ್ಲಿ ಏನಾದರೂ ಮಾತನಾಡಿದರೆ, ಆವೇಶದಲ್ಲಿ ಪ್ರತಿಕ್ರಿಯೆ ನೀಡಲು ಹೋಗಬೇಡಿ, ನಂತರ ದೀರ್ಘ ಶ್ವಾಸ ತೆಗೆದುಕೊಂಡು ನಾನೇಕೆ ಅಸಮಾಧಾನಗೊಂಡಿರುವೆ? ಆಸುಪಾಸಿನ ಪರಿಸ್ಥಿತಿಯ ಬಗ್ಗೆ ಗಮನ ಕೊಡುತ್ತ ವಾಸ್ತವ ಸ್ಥಿತಿ ಏನು, ಮುಂದಿನ ಪ್ರತಿಕ್ರಿಯೆ ಏನು ಕೊಡಬೇಕು ಎಂದು ಯೋಚಿಸಿ. ಹೆಚ್ಚಿನ ಪ್ರಕರಣಗಳಲ್ಲಿ ಅತೃಪ್ತಿಯ ಮೂಲ ವಿಷಯವೇ ಮಾಯವಾಗಿ ನೀವು ಅತ್ಯುತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ