ಪ್ರತಿಯೊಬ್ಬ ಸ್ತ್ರೀ ಪುರುಷರು ತಮ್ಮ ತಮ್ಮ ಆದ್ಯತೆಗಳ ಬಗೆಗೆ ಹೆಚ್ಚು ಗಮನ ಕೊಡುತ್ತಿರುತ್ತಾರೆ. ಈ ರೀತಿಯಾಗಿ ಅವರು ಸದಾ ವ್ಯಸ್ತರಾಗಿರುವುದು ಕಂಡುಬರುತ್ತದೆ.

ಈ ಕಾರಣದಿಂದಲೇ ಮದುವೆಯ ಬಳಿಕ ಅತಿ ಹೆಚ್ಚು ದಂಪತಿಗಳು ಒತ್ತಡಕ್ಕೆ ಸಿಲುಕುತ್ತಾರೆ.

ಎರಡು ಬೇರೆ ಬೇರೆ ಕುಟುಂಬಗಳಿಂದ ಬಂದ ಗಂಡು ಮತ್ತು ಹೆಣ್ಣು ಸಪ್ತಪದಿ ತುಳಿದು ಗಂಡ ಹೆಂಡತಿಯರಾಗುತ್ತಾರೆ. ಒಟ್ಟಾಗಿ, ಹೊಂದಾಣಿಕೆಯಿಂದ ಬಾಳುವ ಕನಸು ಕಾಣುತ್ತಾರೆ. ಆ ಬಳಿಕ ಅವರ ನಡುವೆ ಉದ್ಭವಿಸುವ ಮಾನಸಿಕ ತಾಕಲಾಟ ಅವರನ್ನು ಗೊಂದಲಕ್ಕೆ ಕೆಡತ್ತದೆ. ಆಗ ಅವರಲ್ಲಿ ಅಸಹನೆ, ಕೋಪ ಮನೆ ಮಾಡಿ ಅವರನ್ನು ಒತ್ತಡಕ್ಕೆ ದೂಡುತ್ತದೆ.

ಸಾಮಾನ್ಯವಾಗಿ ಸಂಗಾತಿ ಸತತವಾಗಿ ಸತಾಯಿಸುವುದು, ಟೀಕೆ ಮಾಡುವುದು, ಕಡೆಗಣಿಸಿ ಮಾತನಾಡುವುದರಿಂದ ಈ ರೀತಿಯ ಭಾವನೆ ಉಂಟಾಗುತ್ತದೆ.

ಏನಾಗುತ್ತದೆ? ಅಂದಹಾಗೆ, ಮದುವೆಯ ಬಳಿಕ ನಿಮ್ಮ ಸಂಗಾತಿಯ ಅಪೇಕ್ಷೆಗಳು ನಿಮಗಿಂತಲೂ ಹೆಚ್ಚಾಗುತ್ತವೆ. ನೀವು ನಿಮ್ಮ ವ್ಯಸ್ತ ದಿನಚರಿಯ ಕಾರಣದಿಂದಾಗಿ ಅವರ ಅಪೇಕ್ಷೆಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗುವುದಿಲ್ಲ. ಇದೇ ಮರುಕಳಿಸುತ್ತಿದ್ದರೆ  ಒತ್ತಡಕ್ಕೆ ಕಾರಣವಾಗುತ್ತದೆ.

ಮದುವೆಯ ಕಾರಣದಿಂದಾಗಿ ಉದ್ಭವಿಸಿದ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಕೆಲವರು ಮದ್ಯಕ್ಕೆ ಶರಣಾದರೆ ಇನ್ನು ಕೆಲವರು ಸಂಗಾತಿಯಿಂದ ದೂರ ಇರತೊಡಗುತ್ತಾರೆ. ಪರಸ್ಪರರನ್ನು ನಿರ್ಲಕ್ಷಿಸತೊಡಗುತ್ತಾರೆ. ತಮ್ಮಲ್ಲಿನ ಆಕ್ರೋಶವನ್ನು ಕೋಪದ ಮೂಲಕ ಹೊರಗೆಡಹುತ್ತಾರೆ.

ಮದುವೆ ಇಬ್ಬರು ವ್ಯಕ್ತಿಗಳ ಮಿಲನ. ಅದರಲ್ಲಿ ಇಬ್ಬರೂ ಪರಸ್ಪರ ಪೂರಕವಾಗಿರಬೇಕು ಬಹುಶಃ ಸಂಗಾತಿಗಳಲ್ಲಿ ಒಬ್ಬರು ಹೆಚ್ಚು ಖರ್ಚು ಮಾಡುವ ಪ್ರವೃತ್ತಿಯರಾಗಿರುತ್ತಾರೆ. ಇನ್ನೊಬ್ಬರು ಖರ್ಚು ಮಾಡುವ ಮುನ್ನ ಒಂದು ಸಲ ಯೋಚಿಸಲು ಸಲಹೆ ನೀಡಬಹುದು. ಗಂಡಹೆಂಡತಿಯರಲ್ಲಿ ಒಬ್ಬರು ಅಂತರ್ಮುಖಿಯಾದರೆ, ಇನ್ನೊಬ್ಬರು ಬಹಿರ್ಮುಖಿಯಾಗುತ್ತಾರೆ. ಒಂದು ವೇಳೆ ಹೀಗಿರದಿದ್ದರೆ ಗಂಡಹೆಂಡತಿ ಇಬ್ಬರೂ ಸೇರಿಯೇ ಮನಬಂದಂತೆ ಖರ್ಚು ಮಾಡುವ ಪ್ರವೃತ್ತಿಯರಾಗಿರುತ್ತಾರೆ. ಈ ಕಾರಣದಿಂದ ಅವರಿಗೆ ಉಳಿತಾಯವಾಗಲಿ, ಹಣ ಹೂಡಿಕೆ ಮಾಡುವುದಾಗಲಿ ಸಾಧ್ಯವಾಗುವುದಿಲ್ಲ.

ಅದೇ ರೀತಿಯಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಹೋಲಿಸಿದಲ್ಲಿ ಹೆಚ್ಚು ಪರೋಪಕಾರಿ ಮನೋಭಾವದವನಾಗಿರಬಹುದು ಹಾಗೂ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳಲು ತನ್ನ ಭಾವನೆಗಳನ್ನು ಬಳಸಿಕೊಳ್ಳುವುದರ ಮೂಲಕ ಅಂದಾಜು ಮಾಡಬಹುದು. ಕೆಲವು ಸಂಬಂಧಗಳ ಬಾಬತ್ತಿನಲ್ಲಿ ಇದು ಗೊತ್ತಿರುವ ವ್ಯವಹಾರವೇ ಆಗಿರುತ್ತದೆ. ಅದರಲ್ಲಿ ಯಾವುದೇ ಭಾವನಾತ್ಮಕ ಒತ್ತಡವಿಲ್ಲದೆ, ವ್ಯಕ್ತಿಯೊಬ್ಬರ ಇಚ್ಛೆ ಪೂರ್ತಿಗೊಳ್ಳುತ್ತದೆ. ಇಂತಹ ವ್ಯಕ್ತಿ ಮದುವೆಯ ಬಳಿಕ ಶೀಘ್ರವೇ ಅದರ ಉಪಯೋಗ ಮಾಡಿಕೊಳ್ಳಲು ಆರಂಭಿಸುತ್ತಾನೆ.

ಇದಕ್ಕೆ ಪರಿಹಾರವೆಂದರೆ, ಇಬ್ಬರೂ ಸಾಕಷ್ಟು ಸಮಯ ಬಿಡುವು ಮಾಡಿಕೊಂಡು ಕಳೆಯಬೇಕು. ಒಬ್ಬರ ಮಾತನ್ನು ಇನ್ನೊಬ್ಬರು ಕೇಳಿಸಿಕೊಳ್ಳಬೇಕು. ಅವರ ವಿಚಾರಗಳಿಗೆ ಮಹತ್ವ ಕೊಡಬೇಕು. ಇದರ ಹೊರತಾಗಿ ಮನೆಯ ವ್ಯವಹಾರಗಳು, ಮಕ್ಕಳ ಭವಿಷ್ಯ ಹಾಗೂ ಹಣಕಾಸು ವ್ಯವಹಾರಗಳನ್ನು ಇಬ್ಬರೂ ಸೇರಿಯೇ ನಿರ್ವಹಿಸಬೇಕು.

ಈ ಎಲ್ಲ ಸಂಗತಿಗಳ ಬಗೆಗೆ ಗಮನಕೊಡದೇ ಇರುವುದರಿಂದ ಗಂಡ ಹೆಂಡತಿ ನಡುವಿನ ಬಿರುಕು ಇನ್ನಷ್ಟು ಹೆಚ್ಚಾಗಬಹುದು. ಇದು ಕಾಲಕ್ರಮೇಣ ಆರಂಭಿಕ ಸಿಡಿಮಿಡಿತನದ ಸ್ಥಿತಿಯಿಂದ ಪರಸ್ಪರ ಬೇರೆ ಬೇರೆ ಆಗುವ ಹಂತದ ತನಕ ತಲುಪಬಹುದು. ಇದರಿಂದ ಚಿಂತೆ, ಖಿನ್ನತೆ, ಒತ್ತಡ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ.

ಹಿಂದೆ  ಮಕ್ಕಳು ದೊಡ್ಡವರಾಗುತ್ತ ಹೋದಂತೆ ಅವರ ಜವಾಬ್ದಾರಿಯೂ ಹೆಚ್ಚುತ್ತ ಹೋಗುತ್ತಿತ್ತು. ಆಗ ತಾಯಿಯಾದವಳು ಅವರ ಆಗುಹೋಗುಗಳ ಬಗ್ಗೆ ಪರಿಪೂರ್ಣ ಗಮನ ಕೂಡಬೇಕಾಗಿ ಬರುತ್ತಿತ್ತು. ಆದರೆ ಈಗಿನ ಪರಿಸ್ಥಿತಿ ಬೇರೆ. ಹೆಂಡತಿಯಾದವಳಿಗೆ ಒಮ್ಮೊಮ್ಮೆ ಆಕಸ್ಮಿಕವಾಗಿಯೇ ಸಮಯ ದೊರಕುತ್ತದೆ. ಇಂತಹ ಸ್ಥಿತಿಯಲ್ಲಿ ಆಕೆಗೆ ತನ್ನ ಪತಿಯ ಹೆಚ್ಚೆಚ್ಚು ನೆರವು ಮತ್ತು ಸಮಯದ ಅಗತ್ಯತೆ ಇತ್ತು. ಅದು ಸಾಧ್ಯವಿಲ್ಲ ಎಂದಾಗ ನಿರಾಶೆ ಮತ್ತು ಸಿಡಿಮಿಡಿತನ ಉಂಟಾಗುತ್ತದೆ. ಇದರ ಪರಿಣಾಮವೆಂಬಂತೆ ವೈವಾಹಿಕ ಜೀವನದಲ್ಲಿ ಕಲಹ ಉಂಟಾಗುತ್ತದೆ.

Taaki

ಸಂಬಂಧದಲ್ಲಿ ಸುಧಾರಣೆ

ದಾಂಪತ್ಯ ಜೀವನದಲ್ಲಿ ಬರುವ ಇಂತಹ ಪರಿಸ್ಥಿತಿ ಮತ್ತು ಅವುಗಳ ಪರಿಹಾರಗಳನ್ನು ಇಲ್ಲಿ ಸೂಚಿಸಲಾಗಿದ್ದು, ಅವುಗಳನ್ನು ಅನುಸರಿಸುವುದರ ಮೂಲಕ ದಾಂಪತ್ಯ ಜೀವನವನ್ನು ಒತ್ತಡಗ್ರಸ್ತ ಆಗುವುದರಿಂದ ರಕ್ಷಿಸಬಹುದಾಗಿದೆ. ಪರಸ್ಪರರ ಬಗೆಗಿನ ಆಕರ್ಷಣೆಯನ್ನು ಹೆಚ್ಚಿಸಬಹುದಾಗಿದೆ.

ಒತ್ತಡಗ್ರಸ್ತರೆಂದು ಭಾವಿಸದಿರಿ

ಎದುರಿನ ವ್ಯಕ್ತಿಯ ಮುಂದೆ ನಿಮ್ಮನ್ನು ನೀವು ಕಡಿಮೆ ಎಂದು ಬಿಂಬಿಸಿಕೊಳ್ಳುತ್ತಿದ್ದರೆ, ನಿಮ್ಮಲ್ಲಿ ಒತ್ತಡದ ಸ್ಥಿತಿ ಉಂಟಾಗಬಹುದು. ಇಬ್ಬರು ವಯಸ್ಕ ವ್ಯಕ್ತಿಗಳ ನಡುವಿನ ಪ್ರೀತಿಯ ಸಂಬಂಧದಲ್ಲಿ ಪಾಲುದಾರಿಕೆಯ ಶಕ್ತಿ ದೊಡ್ಡದಾಗಿರುತ್ತದೆ. ಕೆಲಸ ಕಾರ್ಯಗಳನ್ನು ಜೊತೆ ಜೊತೆಗೆ ಸೇರಿ ಮುಗಿಸಲು ವಾರಕ್ಕೊಮ್ಮೆ ಸಮಯ ನಿಗದಿಪಡಿಸಿಕೊಳ್ಳಿ. ಒಮ್ಮೊಮ್ಮೆ ಹೀಗೂ ಮಾಡಬಹುದು, ಒಂದು ವಾರ ಒಬ್ಬರು ಕೆಲಸ ಮಾಡಿದರೆ, ಇನ್ನೊಂದು ವಾರ ಇನ್ನೊಬ್ಬರು ಕೆಲಸ ಮಾಡಿ ಮುಗಿಸಬೇಕು.

ಟೀಕೆಗೆ ತಲೆ ಕೆಡಿಸಿಕೊಳ್ಳಬೇಡಿ

“ನೀನು ಕೂದಲು ಈ ರೀತಿ ಇಟ್ಟುಕೊಳ್ಳುವುದು ನನಗೆ ಎಳ್ಳಷ್ಟು ಇಷ್ಟವಿಲ್ಲ,”

“ನೀನು ಈ ಸ್ವೆಟರ್‌ ಖರೀದಿಸಬಾರದಿತ್ತು,” ಮುಂತಾದ ಟೀಕೆಗಳ ಕುರಿತಂತೆ ತಕ್ಷಣವೇ ಪ್ರತಿಕ್ರಿಯೆ ಕೊಡುವ ಬದಲು ಇಬ್ಬರೂ ಶಾಂತರಾಗುವ ವಿಷಯದ ಬಗ್ಗೆ ಪ್ರಸ್ತಾಪಿಸಿ. ಆದರೆ ಇಂತಹ ವಿಷಯದ ಬಗ್ಗೆ ನಿರ್ಲಕ್ಷ್ಯ ತೋರಬೇಡಿ.

ಆದೇಶಾತ್ಮಕ ಧೋರಣೆ

ಇಂತಹ ಧೋರಣೆ ಉತ್ಸಾಹ ಭಂಗಗೊಳಿಸುವಂಥದ್ದು ಆಗಿರುತ್ತದೆ. `ಮನೆ ಗೇಟ್‌ ಹತ್ತಿರ ಬಿದ್ದಿರೋ ಪೇಪರ್‌ ಎತ್ಕೊಂಡು ಬಾ,’ ಎಂಬಂತಹ ಆದೇಶಗಳು ಕೂಡ ಒಮ್ಮೊಮ್ಮೆ ಸಿಡಿಮಿಡಿತನ ಅಥವಾ ಒತ್ತಡಕ್ಕೆ ಜನ್ಮ ಕೊಡುತ್ತವೆ. ಏಕೆಂದರೆ ನಮಗೆ ಏನು ಮಾಡಬೇಕೆಂದು ಬೇರೆಯವರು ಹೇಳುವುದು ಯಾರಿಗೂ ಇಷ್ಟವಾಗುವುದಿಲ್ಲ. ಒಪ್ಪಿಗೆಯ ಉತ್ತರವನ್ನು `ಹೌದು’ ಅಥವಾ `ಇಲ್ಲ’ ಎಂಬ ಶಬ್ದಗಳಲ್ಲಿ ಕೊಡುವುದು ಕಷ್ಟ. ಹೀಗಾಗಿ ಮನೆಯ ವ್ಯವಹಾರಗಳು ಮತ್ತು ಹಣದ ಹೊಣೆಗಾರಿಕೆ ಹಾಗೂ ಕರ್ತವ್ಯವನ್ನು ಪರಸ್ಪರ ಹಂಚಿಕೊಳ್ಳಬಹುದು.

ನಿಯಂತ್ರಣಗೊಳಿಸುವ ಪ್ರಯತ್ನ

ಯಾವ ಸಮಯದಲ್ಲಿ ಏನು ಮಾಡಬೇಕು, ಖರ್ಚಿನ ಮೇಲೆ ನಿಯಂತ್ರಣ, ಯಾರೊಂದಿಗೆ ಸ್ನೇಹ ಬೆಳೆಸಬೇಕು, ಯಾರೊಂದಿಗೆ ಮಾಡಬಾರದು, ತನ್ನ ಕುಟುಂಬದವರನ್ನು ಭೇಟಿಯಾಗಲು ಎಷ್ಟು ಸಲ ಹೋಗಬೇಕೆನ್ನುವ ಆದೇಶ ನೀಡುವ ವರ್ತನೆ ಒತ್ತಡಕ್ಕೆ ಆಮಂತ್ರಣ ನೀಡುವಂಥದ್ದಾಗಿರುತ್ತದೆ. ನಿಮ್ಮ ಸಂಗಾತಿ ಯಾವುದೇ ವೈಯಕ್ತಿಕ ನಿರ್ಣಯ ಕೈಗೊಳ್ಳಬೇಕೆನ್ನುವ ನಿಮ್ಮ ಹಕ್ಕನ್ನು ಕಿತ್ತುಕೊಳ್ಳುತ್ತಾನೊ ಅಥವಾ ನಿಮ್ಮ ನಿರ್ಧಾರದಲ್ಲಿ ಪಾಲುದಾರರಾಗಲು ಇಚ್ಛಿಸಿದರೆ ಒತ್ತಡ ಹೆಚ್ಚುವುದು ಸಹಜವೇ ಆಗಿರುತ್ತದೆ. ಇಂತಹದರಲ್ಲಿ ಪ್ರತಿದಿನ ಜೊತೆ ಜೊತೆಗೆ ಸುತ್ತಾಡುವ ಅಥವಾ ವ್ಯಾಯಾಮ ಮಾಡುವ ಅವಕಾಶ ಪಡೆದುಕೊಂಡು ನಿಮ್ಮ ಮನದ ಮಾತುಗಳನ್ನು ಅವರೊಂದಿಗೆ ಹಂಚಿಕೊಳ್ಳಿ.

ಸಂಗಾತಿ ಕೆಲಸ ಮಾಡದಿದ್ದಾಗ

ದೈನಂದಿನ ಜೀವನದಲ್ಲಿ ಪ್ರೀತಿಯಿಂದ ಸಕ್ರಿಯ ಪಾಲುದಾರಿಕೆ ನಿರ್ವಹಿಸುವ ದಂಪತಿಗಳು ಯಾರಿಗೇ ಆದರೂ ಇಷ್ಟವಾಗುತ್ತಾರೆ. ಅದು ಮುಂಜಾನೆ ಸಂಗಾತಿಗೆ ಟೀ/ಕಾಫಿ ಮಾಡಿಕೊಡುದೇ ಆಗಿರಬಹುದು ಅಥವಾ ಸಂಜೆ ಹೊತ್ತಿನಲ್ಲಿ ಯಾರಾದರೂ ಅತಿಥಿಗಳು ಬರುವವರಿದ್ದರೆ ಮನೆಯ ಸ್ವಚ್ಛತೆ ಅಲಂಕಾರದಲ್ಲಿ ಕೈ ಜೋಡಿಸುವುದರಿಂದ ಪ್ರೀತಿ ಹೆಚ್ಚುತ್ತದೆ. ಇದಕ್ಕೆ ತದ್ವಿರುದ್ಧ ಎಂಬಂತೆ ಯಾವುದೇ ಸಂಗಾತಿ ಸಕ್ರಿಯತೆ ತೋರದೇ ಇದ್ದಲ್ಲಿ ಅಥವಾ ಯಾವುದೇ ಕೆಲಸದಲ್ಲಿ ನೆರವಾಗದೇ ಇದ್ದಲ್ಲಿ ಸಂಗಾತಿಗೆ ಇದರಿಂದ ಸಿಡಿಮಿಡಿತನದ ಸ್ಥಿತಿ ಉಂಟಾಗುತ್ತದೆ.

ನಿಯಂತ್ರಣ ತಪ್ಪಿ ಹೊರ ಹೋಗುವ ಇಂತಹ ಪರಿಸ್ಥಿತಿಯಲ್ಲಿ ವೈಯಕ್ತಿಕವಾಗಿ ನೆಮ್ಮದಿ ತರುವಂತಹ ಕೆಲವು ಆಗುಹೋಗುಗಳ ಆಸರೆ ಪಡೆದುಕೊಳ್ಳಿ. ಅದಕ್ಕಾಗಿ ನಿಮ್ಮ ಸಂಗಾತಿಯ ಜೊತೆಗೆ  ಚರ್ಚಿಸಿ. ಆದರೆ ಹೀಗೆ ಮಾಡುವ ಮುಂಚೆ ಕೆಲವು ಸಂಗತಿಗಳ ಬಗ್ಗೆ ಎಚ್ಚರಿಕೆ ವಹಿಸುವುದು ಕೂಡ ಅಗತ್ಯ. ದೂರು ಅಥವಾ  ಟೀಕೆಗಳು ನಿಮ್ಮ ಸಂಗಾತಿಯಲ್ಲಿ ಒತ್ತಡವನ್ನುಂಟು ಮಾಡಬಹುದು ಇಲ್ಲಿ ಇಬ್ಬರ ನಡುವೆ ಜಗಳದ ಪರಿಸ್ಥಿತಿ ಉಂಟು ಮಾಡಬಹುದು. ಹೀಗಾಗಿ ಕೌಟುಂಬಿಕ ಜೀವನದಲ್ಲಿ ಹೊಸ ನಿಯಮಗಳನ್ನು ಅನುಸರಿಸಲು ಸಂಗಾತಿಯ ಮನವೊಲಿಸುವ ಸುಲಭ ಉಪಾಯವೆಂದರೆ ಮೊಬೈಲ್ ಫೋನ್‌. ಅದರಲ್ಲಿ ಸಂದೇಶಗಳ ಮೂಲಕ ನಿರಾಶಾದಾಯಕ ಸಂಗತಿಗಳನ್ನು ಹೊಡೆದೋಡಿಸಿ ಜೀವನದಲ್ಲಿ ಖುಷಿಯ ಸಿಂಚನ ಮಾಡಿಕೊಳ್ಳಿ.

ಡಾ. ಪ್ರಫುಲ್ಲಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ