``ನೀನು ಎಂದಾದರೂ ಬುದ್ಧಿವಂತಿಕೆಯ ಮಾತಾಡಿದ್ದೀಯಾ?''

ಮಗ-ಸೊಸೆಯ ಮುಂದೆ ಗಂಡ ಸಿಡುಕಿದ್ದು ಹೆಂಡತಿ ಉಷಾಳಿಗೆ ಬಹಳ ಇರುಸುಮುರುಸು ಉಂಟು ಮಾಡಿತು. ಆಕೆ ಉದಾಸ ಧ್ವನಿಯಲ್ಲಿ ``ನೀವೇ ತಾನೇ ಹೇಳಿದ್ದು, ಸಾಂಬಾರು ತಣ್ಣಗಾಗಿದೆ, ಬಿಸಿ ಮಾಡಿಕೊಂಡು ಬಾ ಅಂತಾ...'' ಎಂದಳು.

``ಹೌದು, ಬಿಸಿ ಮಾಡಿಕೊಂಡು ಬಾ ಅಂತ ಹೇಳಿದ್ದೆನೆ ಹೊರತು ಕುದಿಸಿಕೊಂಡು ಬಾ ಅಂತ ಹೇಳಿರಲಿಲ್ಲ. ಮುದುಕಿಯಾದೆ ವಿನಾ ಇನ್ನೂ ನಿನಗೆ ಬುದ್ಧಿ ಬರಲಿಲ್ಲ ಅಲ್ವಾ...?''

ಮಾತಿಗೆ ಮಾತು ಬೆಳೆಯುತ್ತಿರುವುದನ್ನು ನೋಡಿ ತಾನು ಮೌನಾಗಿರುವುದೇ ಸರಿ ಎಂದು ಉಷಾಳಿಗೆ ಅನಿಸಿತು. ಸಾಂಬಾರು ಆರಲು ಎಷ್ಟು ನಿಮಿಷ ಬೇಕು? ಆದರೆ ಹೆಂಡತಿಯನ್ನು ಮಾತು ಮಾತಿಗೂ ಹೀಯಾಳಿಸುವ ಪರಂಪರೆ ಮನೆಯಲ್ಲಿದ್ದರೆ, ಅದು ಪರಂಪರಾಗತವಾಗಿ ಮುಂದುವರಿಯುತ್ತಲೇ ಇರುತ್ತದೆ. ಮಕ್ಕಳು ಇದೆಲ್ಲವನ್ನೂ ನೋಡುತ್ತಲೇ ಬೆಳೆಯುತ್ತಾರೆ. ದೊಡ್ಡವರಾದ ಮೇಲೆ ಅವರು ಹೀಗೆ ಮಾಡಿದರೂ ಆಶ್ಚರ್ಯವಿಲ್ಲ.

ಅದೆಷ್ಟೊ ಜನರು ಹೇಳುವ ಪ್ರಕಾರ, ಗಂಡಹೆಂಡತಿಯ ನಡುವಣ ಸಣ್ಣಪುಟ್ಟ ಜಗಳಗಳು ಸಾಮಾನ್ಯ. ಅದರಿಂದ ಸಂಬಂಧದ ಮೇಲೆ ಯಾವುದೇ ಗಾಢ ಪರಿಣಾಮ ಉಂಟಾಗದು. ಆದರೆ ನಿಮ್ಮ ಸಂಗಾತಿ ಸ್ವಲ್ಪ ಹೆಚ್ಚೇ ಎನ್ನುವಷ್ಟರ ಮಟ್ಟಿಗೆ ಈ ಸ್ಥಿತಿಯನ್ನು ಉತ್ಪನ್ನ ಮಾಡಿದರೆ ಅದನ್ನು ಸಹಿಸಿಕೊಳ್ಳುವುದು ತಪ್ಪು. ಮಾತು ಮಾತಿಗೆ ಸಿಡುಕುವುದು ಕೈ ಎತ್ತಿ ಅವಮಾನಿಸುವುದಕ್ಕೆ ಸಮ ಎಂದೇ ಹೇಳಬಹುದು.

ವಾಸ್ತವ ಜೀವನದ ಉದಾಹರಣೆ

ಶ್ವೇತಾ ಮತ್ತು ರಮೇಶ್‌ ಮದುವೆಯಾಗಿ 14 ವರ್ಷಗಳೇ ಕಳೆದಿವೆ. ಶ್ವೇತಾ ಒಂದು ಖಾಸಗಿ ವಿ.ವಿ.ಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆರಿಯರ್‌ ನಿರ್ವಹಿಸುತ್ತಿದ್ದಾರೆ. ರಮೇಶ್‌ ಬ್ಯಾಂಕ್‌ ಉದ್ಯೋಗಿ. ರಮೇಶ್‌ ಟೆನ್ಶನ್‌ನಲ್ಲಿ ಇದ್ದಾಗ ಶ್ವೇತಾಳ ಮೇಲೆ ತನ್ನೆಲ್ಲ ಕೋಪವನ್ನು ತೋರಿಸಿಕೊಳ್ಳುತ್ತಾನೆ. ನಾವೀಗ ಎಲ್ಲಿದ್ದೇವೆ ಎದುರಿಗೆ ಯಾರಿದ್ದಾರೆ ಎಂಬುದನ್ನೂ ನೋಡುವುದಿಲ್ಲ. ಅದಕ್ಕೆ ಹೊತ್ತು ಗೊತ್ತು ಒಂದೂ ಇರುವುದಿಲ್ಲ.

ರಮೇಶ್‌ ಶ್ವೇತಾಳ ಜೊತೆ ಮಾತನಾಡುವಾಗ ಅತ್ಯಂತ ಅವಮಾನಕರ ಭಾಷೆ ಬಳಸುತ್ತಾನೆ, ಸಿಡುಕುತ್ತಾನೆ, ಕಿರುಚುತ್ತಾನೆ. ಅವಳನ್ನು ಕಡೆಗಣಿಸಿ ಮಾತನಾಡುತ್ತಾನೆ. ಇದರಿಂದ ಆಕೆಯ ಮನಸ್ಸು ಘಾಸಿಗೊಳ್ಳುತ್ತದೆ. ಅಷ್ಟೇ ಅಲ್ಲ, ಅವನ ಬಗೆಗಿನ ಪ್ರೀತಿಗೂ ಧಕ್ಕೆ ಉಂಟಾಗುತ್ತದೆ. ಶ್ವೇತಾ ಈ ಬಗ್ಗೆ ಕೇಳಿದರೆ, ಅವನು ತನ್ನ ವರ್ತನೆಯ ಬಗ್ಗೆ ಕ್ಷಮೆ ಕೇಳುತ್ತಾನೆ. ಆದರೆ ಅವನ ಕ್ಷಮೆಗೆ ಯಾವುದೇ ಬೆಲೆ ಇಲ್ಲ. ಸ್ವಲ್ಪ ದಿನಗಳ ಬಳಿಕ ಅವನು ಪುನಃ ಅದೇ ರೀತಿ ವರ್ತಿಸುತ್ತಾನೆ.

ಈ ಪರಿಸ್ಥಿತಿಯನ್ನು ಸುಧಾರಣೆಗೆ ತರಲು ಶ್ವೇತಾ, ಡಾ. ಸ್ಟೀವನ್‌ ಸ್ಟೋಸನ್ನರವರ ಪುಸ್ತಕ `ಲವ್ ವಿದೌಟ್‌ ಹರ್ಟ್‌' ಪುಸ್ತಕವನ್ನು ಓದಿದಳು. ಆ ಪುಸ್ತಕದಲ್ಲಿ ಆಕೆಗೆ ಭಾವನಾತ್ಮಕ ಅವಮಾನಕರ ವರ್ತನೆಯನ್ನು ಹೇಗೆ ನಿಭಾಯಿಸಬೇಕೆಂಬ ಬಗ್ಗೆ ಮಾಹಿತಿ ದೊರಕಿತು. ಶ್ವೇತಾ ಅವನಿಗೆ ಅದೆಷ್ಟೋ ತಿಳಿವಳಿಕೆ ಹೇಳಿ ನೋಡಿದಳು. ಆದರೆ ಅದರಿಂದ ರಮೇಶ್‌ ಮೇಲೆ ಯಾವುದೇ ಪರಿಣಾಮ ಉಂಟಾಗಲಿಲ್ಲ. ಹೀಗಾಗಿ ಆಕೆ ಸಾರ್ವಜನಿಕ ಸ್ಥಳ, ಸಭೆ-ಸಮಾರಂಭಗಳಿಗೆ ಅವನ ಜೊತೆ ಹೋಗುವುದನ್ನೇ ನಿಲ್ಲಿಸಿಬಿಟ್ಟಳು. ರಮೇಶ್‌ ಆ ಬಗ್ಗೆ ಶ್ವೇತಾಳ ಬಳಿ ಕಾರಣ ಕೇಳಿದಾಗ, ಅವಳು ಸ್ಪಷ್ಟವಾಗಿಯೇ ಸಾರ್ವಜನಿಕ ಸ್ಥಳದಲ್ಲಿ ನಿಮ್ಮಿಂದ ಅವಮಾನಿತಳಾಗುವುದು ನನಗೆ ಇಷ್ಟವಿಲ್ಲ ಎಂದು ಹೇಳಿದಳು. ಆ ಬಳಿಕ ರಮೇಶ್‌ನ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಕಂಡುಬಂತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ