ಇಂದು ಸಂಗೀತಾಳ ಮನಸ್ಸು ಬಹಳ ಉದಾಸವಾಗಿತ್ತು. ಅವಳು ಸದಾ ಖುಷಿಯಿಂದಿರಲು ಪ್ರಯತ್ನಿಸುತ್ತಿದ್ದಳು. ಆದರೆ 30 ವರ್ಷಗಳ ಹಿಂದೆ ತೆಗೆದುಕೊಂಡ ನಿರ್ಣಯ ಸರಿಯಾಗಿರಲಿಲ್ಲ ಎಂದು ಎಷ್ಟೋ ಸಲ ಅನಿಸುತ್ತಿತ್ತು. ಅಮ್ಮ ಬಾಲ್ಯದಲ್ಲೇ ತೀರಿಹೋಗಿದ್ದಳು. ಅಪ್ಪ ಶಿವಮೊಗ್ಗದ ಕಾಂಟ್ರ್ಯಾಕ್ಟರ್‌ವರನ ಜೊತೆ ಅತ್ಯಂತ ಅದ್ಧೂರಿಯಾಗಿ ಮದುವೆ ಮಾಡಿದ್ದರು.

ತವರಿನಿಂದ ಗಂಡನ ಮನೆಗೆ ಕಾಲಿಡುತ್ತಲೇ ಆಕೆಗೆ ಅಲ್ಲಿ ಮನಸ್ಸೇ ನಿಲ್ಲಲಿಲ್ಲ. ತವರಿನಲ್ಲಿದ್ದ ಸ್ವಾತಂತ್ರ್ಯ ತನ್ನ ಮನಸ್ಸಿಗೆ  ಬಂದಂತೆ ಇರುತ್ತಿದ್ದ ಸಂಗೀತಾಳಿಗೆ ಗಂಡನ ಮನೆಯ ಜವಾಬ್ದಾರಿಯಿಂದ ಕೂಡಿದ ಜೀವನ ಒಗ್ಗಲಿಲ್ಲ. ಅವಳು ಮೇಲಿಂದ ಮೇಲೆ ಬ್ಯಾಗ್‌ ಹಿಡಿದುಕೊಂಡು ಗಂಡನ ಮನೆಯಿಂದ ತವರಿಗೆ ಬರುತ್ತಿದ್ದಳು. ಅಣ್ಣ ಅತ್ತಿಗೆ ಇಬ್ಬರೂ ನೌಕರಿ ಮಾಡುತ್ತಿದ್ದರು. ಅವರು ಕೂಡ ಹೆಚ್ಚಿಗೇನೂ ಕೇಳದೆ ಸುಮ್ಮನಿದ್ದು ಬಿಡುತ್ತಿದ್ದರು. ಅವರ ಮಕ್ಕಳನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲದೆ ಇದ್ದುದರಿಂದ ಸಂಗೀತಾ ತವರಿಗೆ ಬಂದದ್ದು ಅನುಕೂಲ ಅವರಿಗೆ ಆಗಿತ್ತು.

ಗಂಡನಿಗೆ ಸಮಯಕ್ಕೆ ತಕ್ಕಂತೆ ಕೆಲಸ ಮಾಡುವುದು, ಸಂಬಂಧಿಕರು ಬರುವುದು, ಹೋಗುವುದು, ಮನೆಯ ಜವಾಬ್ದಾರಿಗಳನ್ನು ನಿಭಾಯಿಸುವುದು ಆಕೆಗೆ ಕಷ್ಟಕರವಾಗಿ ಪರಿಣಮಿಸುತ್ತಿತ್ತು. ಇಲ್ಲಿ ಅಣ್ಣ ಅತ್ತಿಗೆ ಇಬ್ಬರೂ ಮುಂಜಾನೆಯೇ ಬ್ಯಾಂಕಿಗೆ ಹೊರಟು ಹೋಗುತ್ತಿದ್ದರು. ಇಡೀ ಮನೆಗೆ ಆಕೆಯೊಬ್ಬಳದೇ ರಾಜ್ಯಭಾರ. ಅದೇ ರೀತಿ 23 ವರ್ಷ ಕಳೆಯಿತು. ಅದೊಂದು ದಿನ ಆಕೆ ಗಂಡನೊಂದಿಗೆ ಮುನಿಸಿಕೊಂಡು ಅಣ್ಣನ ಮನೆಗೆ ಖಾಯಂ ಆಗಿ ವಾಪಸ್ಸಾದಳು. ಅಷ್ಟೊತ್ತಿಗೆ ಅಪ್ಪ ತೀರಿಕೊಂಡಿದ್ದರು. ಅಪ್ಪನ ಹಾಗೆ ಅಣ್ಣ ಕೂಡ ಆಕೆಗೆ ಏನೂ ಕೇಳುತ್ತಿರಲಿಲ್ಲ. ಅಂದಿನಿಂದ ಈವರೆಗೆ ಅಂದರೆ ತನ್ನ 53ನೇ ವಯಸ್ಸಿನ ತನಕ ಆಕೆಗೆ ತವರುಮನೆಯೇ ಎಲ್ಲ ಆಗಿದೆ. ಅವರಂತೆಯೇ ನಡೆಯುವುದು ಆಕೆ ಜೀವನವಾಗಿಬಿಟ್ಟಿದೆ. ಆದರೆ ಒಮ್ಮೊಮ್ಮೆ ಕೆಲವು ಮಾತುಗಳು ಆಕೆಗೆ ಒಳಗೊಳಗೆ ನೋವು ತರಿಸುತ್ತದೆ.

ಹೇಳಿಕೊಳ್ಳಲು ನಮ್ಮವರು....

ಸೀಮಾ ಕೂಡ ಗಂಡನ ಮನೆ ಬಿಟ್ಟು ತವರಿಗೆ ಬಂದು 25 ವರ್ಷವಾಗಿದೆ. ಆಕೆ ತವರಿಗೆ ಬಂದಾಗ ಅಪ್ಪ ಅಮ್ಮ ಜೀವಿತರಾಗಿದ್ದರು. ಗಂಡನ ಮನೆಯಿಂದ ಬಂದ ಆಕೆಯನ್ನು ಮನಃಪೂರ್ಕವಾಗಿ ಸ್ವಾಗತಿಸಿದ್ದರು. ಅಪ್ಪ ಅಮ್ಮ ತೀರಿಹೋದ ನಂತರ ಅಣ್ಣ ಅತ್ತಿಗೆಯ ಸಹಾಯ ಸಹಕಾರದಿಂದ ತಾನು ಹಾಗೂ ಇಬ್ಬರು ಮಕ್ಕಳ ಜೀವನ ನಡೆಸುವಂತಾಗಿದೆ. ಆಕೆಗೆ ಬ್ಯಾಂಕ್‌ನೌಕರಿ ಇರುವ ಕಾರಣದಿಂದ ಆರ್ಥಿಕವಾಗಿ ಏನೂ ತೊಂದರೆಯಾಗಿಲ್ಲ. ಆದರೆ ಸಮಾಜ, ಸಂಬಂಧಿಕರು ಮತ್ತು ಅತ್ತಿಗೆಯ ಚುಚ್ಚು ಮಾತುಗಳು ಆಕೆಯ ಅಂತರಂಗವನ್ನು ನೋಯಿಸುತ್ತವೆ. ಆದರೆ ಇದು ತನ್ನ ವಾಸ್ತವ, ಇದನ್ನು ಬದಲಿಸಲು ಆಗುವುದಿಲ್ಲ ಎಂದು ಆಕೆ ಸುಮ್ಮನಿದ್ದಾಳೆ.

ರಶ್ಮಿ ಮದುವೆಯಾಗಿ ಗಂಡನಮನೆಗೆ ಹೋದಾಗ ಅಲ್ಲಿನ ವಾತಾವರಣ ತವರಿಗಿಂತ ಭಿನ್ನವಾಗಿರುವುದು ಆಕೆಯ ಗಮನಕ್ಕೆ ಬಂತು. ತವರಿನಲ್ಲಿ ಎಲ್ಲರೂ ಸ್ವತಂತ್ರ ಮನೋಭಾವದವರಾಗಿದ್ದರು. ಆದರೆ ಇಲ್ಲಿ ಪರತಂತ್ರದ ವಾತಾರಣವಿತ್ತು. ಸದಾ ಸೆರಗು ಹೊದ್ದುಕೊಂಡು ಇರಬೇಕಾಗುತ್ತಿತ್ತು. ದೊಡ್ಡವರ ಎದುರು ಮಾತನಾಡುವ ಸ್ವಾತಂತ್ರ್ಯ ಇರಲಿಲ್ಲ. ಇಂತಹ ವಾತಾವರಣದಲ್ಲಿ ಆಕೆಗೆ ಉಸಿರುಗಟ್ಟಿದಂತಾಗುತ್ತಿತ್ತು. ಇಂತಹದರಲ್ಲಿ ಆಕೆಗೆ ಗಂಡನಿಂದ ಅಂತಹ ಇಂತಹ ಮಾತುಗಳನ್ನು ಕೇಳಬೇಕಾಗಿ ಬರುತ್ತಿತ್ತು. ಇದೆಲ್ಲದರಿಂದ ರೋಸಿಹೋದ ಆಕೆ ಒಂದು ದಿನ ತನ್ನ ಸೂಟ್‌ಕೇಸ್‌ ಎತ್ತಿಕೊಂಡು ತವರಿಗೆ ಬಂದೇಬಿಟ್ಟಳು. ಅಮ್ಮ ಆಕೆಗೆ ಸಾಕಷ್ಟು ತಿಳಿಸಿ ಹೇಳಿದಳು. ಯೌವನದ ಉತ್ಸಾಹ ಮತ್ತು ಪರಿಜನರ ಬೆಂಬಲ ಆಕೆಗೆ ತನ್ನ ಬಗೆಗೆ ಯೋಚಿಸಲು ಅವಕಾಶವೇ ಸಿಗಲಿಲ್ಲ. ಈಗ ಆಕೆಗೆ 45 ವರ್ಷ. ಆದರೆ ತನ್ನ ನೋವನ್ನು ಈಗ ಯಾರ ಮುಂದೆ ಹೇಳಿಕೊಳ್ಳಬೇಕು ಎಂಬುದು ಗೊತ್ತಾಗುವುದಿಲ್ಲ. ಅಣ್ಣ ತಮ್ಮಂದಿರು, ಅತ್ತಿಗೆಯರು, ಅವರ ಮಕ್ಕಳು ತಮ್ಮದೇ ಆದ ಲೋಕದಲ್ಲಿ ವ್ಯಸ್ತರಾಗಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ