ಪ್ರೊ. ಸುಮಿತ್ರಾರ ಮನೆಯಲ್ಲಿ ಹಬ್ಬದ ವಾತಾವರಣವಿತ್ತು. 3 ತಿಂಗಳ ಹಿಂದೆ ಅವರು ಬುಕ್‌ ಮಾಡಿದ್ದ ಹೊಸ ಆಡೀ ಕಾರು ಬರುವುದಿತ್ತು. ಅರ್ಚಕರು ಕಾರನ್ನು ನಿಗದಿತ ದಿನದಂದು ತೆಗೆದುಕೊಂಡು ಬರಬೇಕೆಂದು ಸೂಚಿಸಿದರು. ಅಂದರೆ ಕಾರು ತರುವ ಮುಹೂರ್ತ ಅಂದಿಗೆ ನಿಗದಿಯಾಗಿತ್ತು.

ಅವರ ಪತಿ ಡಾ. ಚಂದ್ರಭೂಷಣ್‌ ಹೆಸರಾಂತ ಡಾಕ್ಟರ್‌. ಅಂದು ಅವರು ತಮ್ಮ ನರ್ಸಿಂಗ್‌ಹೋಂನಲ್ಲಿ ಒಂದು ಆಪರೇಷನ್‌ಮಾಡಬೇಕಿತ್ತು. ಅದನ್ನು ಅವರು ಬೇರೆಯವರಿಗೆ ಒಪ್ಪಿಸಿ ಬಂದಿದ್ದರು. ಏಕೆಂದರೆ ಕಾರು ಪೂಜೆಗಾಗಿ ಅರ್ಚಕರ ಮುಂದೆ ಕುಳಿತುಕೊಳ್ಳುವ ಅನಿವಾರ್ಯತೆ ಇತ್ತು. ಮಗ ವಿನೋದ್‌ ಎಂಡಿ ಮಾಡುತ್ತಿದ್ದ, ಮತ್ತೊಬ್ಬ ಮಗ ಚಿರಂತನ್‌ ಎಂಜಿನಿಯರ್‌ ಆಗಿದ್ದ. ಅಂದು ಅವರಿಬ್ಬರೂ ರಜೆ ಹಾಕಿದ್ದರು. ಡಾಕ್ಟರ್‌ ಮತ್ತು ಅವರ ಮಕ್ಕಳು ಕಾರು ತೆಗೆದುಕೊಂಡು ಬಂದಾಗ, ಅರ್ಚಕರು ಕಾರಿಗೆ ಹೂಮಾಲೆ ಹಾಕಿ, ಕಾರಿನ ಹಿಂದೆ ಮುಂದೆ ಕುಂಕುಮ ಅರಿಶಿನ ಲೇಪಿಸಿದರು. ಪ್ರತಿಯೊಂದು ಚಕ್ರಕ್ಕೂ ನೀರು ಚಿಮುಕಿಸಿದರು. ನಂತರ ರಸ್ತೆಯಲ್ಲಿ ತೆಂಗಿನಕಾಯಿ ಒಡೆದರು. ಹತ್ತು ಹಲವು ಮಂತ್ರಗಳನ್ನು ಸುಮಾರು ಹೊತ್ತು ಪಠಿಸಿದರು. ಆದರೆ ಅವ್ಯಾವೂ  ಮನೆಯ ಯಾರೊಬ್ಬರಿಗೂ ಅರ್ಥ ಆಗಲಿಲ್ಲ. ಆ ಬಳಿಕ ಎಲ್ಲರೂ ಪುರೋಹಿತರ ಕಾಲು ಮುಟ್ಟಿ ನಮಸ್ಕರಿಸಿದರು.

ಪುರಾತನ ಯೋಚನೆ

ಅವರು ಕೊಂಡುಕೊಂಡಿದ್ದು 50 ಲಕ್ಷ ರೂ. ಬೆಲೆಯ ಆಡೀ ಕಾರು. ಪುರೋಹಿತರು ಅದನ್ನು ಗಮನದಲ್ಲಿಟ್ಟುಕೊಂಡೇ ತಮ್ಮ ಪೂಜಾ ಶುಲ್ಕ 5000 ರೂ. ಎಂದು ಮೊದಲೇ ಸೂಚನೆ ಕೊಟ್ಟಿದ್ದರು. ಬಡ ರೋಗಿಗಳ ರಕ್ತ ಹೀರುವ ಡಾ. ಚಂದ್ರಭೂಷಣ್‌ರಿಗೆ 5000 ರೂ.ಗಳ ದಕ್ಷಿಣೆಯನ್ನು ಪುರೋಹಿತನಿಗೆ ಕೊಡುವುದೇನೂ ಕಷ್ಟವೆನಿಸಲಿಲ್ಲ.

ಇಲ್ಲಿ ಏಳುವ ಪ್ರಶ್ನೆಯೆಂದರೆ ಸಂಪೂರ್ಣ ಸಾಕ್ಷರ ಕುಟುಂಬವೊಂದು ಹೊಸ ತಂತ್ರಜ್ಞಾನದ ಕಾರೊಂದನ್ನು ಖರೀದಿಸಿದ ಬಳಿಕ ಹಳೆಯ ಪರಂಪರೆಯ ಪೂಜೆಯನ್ನು ಏಕೆ ಮಾಡಿಸುತ್ತದೆ? ಮಂತ್ರ, ಜಪ, ಪೂಜೆ ಪ್ರವಚನಗಳು ಕಾರಿನಲ್ಲಿ ಕುಳಿತುಕೊಳ್ಳುವವರನ್ನು  ಮತ್ತು ಚಲಾಯಿಸುವವರನ್ನು ರಕ್ಷಣೆ ಮಾಡುತ್ತದೆಯೇ?

ಯಾರಾದರೊಬ್ಬರು ಸೀಟು ಬೆಲ್ಟ್ ಧರಿಸದಿದ್ದರೆ, ಸುರಕ್ಷತೆಯ ನಿಯಮ ಪಾಲಸದಿದ್ದರೆ, ಕುಡಿದು ಗಾಡಿ ಓಡಿಸದಿದ್ದರೆ, ನಟ್‌ಬೋಲ್ಟ್ ಗಳ ಮಾಹಿತಿ ಹೊಂದಿರದಿದ್ದರೆ ಪುರೋಹಿತರ ಪೂಜೆ ಪುನಸ್ಕಾರ, ಮಂತ್ರಗಳು ಅವರನ್ನು ಕಾಪಾಡುತ್ತವೆಯೇ? ಪ್ರತಿದಿನ ರಸ್ತೆಗಳಲ್ಲಿ ಸಾವಿರಾರು ಅಪಘಾತಗಳು ಸಂಭವಿಸುತ್ತವೆ. ಆ ಅಪಘಾತಗಳಲ್ಲಿ ಕಾರುಗಳು ನಜ್ಜುಗುಜ್ಜಾಗಿ ಹೋಗಿರುತ್ತವೆ. ಆ ಕಾರುಗಳನ್ನೂ ಪೂಜೆ ಮಾಡಲಾಗಿರುತ್ತದೆ.

ಮುಂದೇನು?

ನಾವು ಆಧುನಿಕ ವಿಜ್ಞಾನದ ಹೊಸ ಹೊಸ ತಂತ್ರಜ್ಞಾನನ್ನು ಕರಗತ ಮಾಡಿಕೊಂಡು, ಸುಖ ಸೌಲಭ್ಯಗಳನ್ನು ಅನುಭವಿಸಿ ಖುಷಿಪಡುತ್ತೇವೆ. ಆದರೆ ಮಾನಸಿಕವಾಗಿ ನಾವಿನ್ನೂ ಪುರಾತನ ಯುಗದಲ್ಲೇ ಇದ್ದೇವೆ. ಪುರೋಹಿತರು, ಮೌಲ್ವಿಗಳು ಹೇಳಿದಂತೆ ಧರ್ಮಕರ್ಮ, ದಾನದಕ್ಷಿಣೆ ಇವು ನಮ್ಮನ್ನು ಬಿಡುತ್ತಲೇ ಇಲ್ಲ ಅಥವಾ ಅವನ್ನು ನಾವೇ ಬಿಡುತ್ತಿಲ್ಲವೇನೋ!

ಕಾರು ಖರೀದಿಸಿದ ಬಳಿಕ ಕಾರಿನಲ್ಲಿ ಕುಳಿತವರು ನಾವು ಕಾರಿಗೆ ಪೂಜೆ ಮಾಡಿಸಿದ್ದೇವೆ, ಈಗ ನಾವು ಮನಸ್ಸಿಗೆ ಬಂದಂತೆ ಕಾರು ಓಡಿಸಿದರೂ ನಮಗೇನೂ ಆಗುವುದಿಲ್ಲ ಎಂದು ಯೋಚಿಸುತ್ತಾರೆ. ಆದರೆ ಡ್ರೈವಿಂಗ್‌ ಮೇಲೆಯೇ ನಮ್ಮ ಅಳಿವು, ಉಳಿವು ಅವಲಂಬಿಸಿರುವಾಗ ಪುರೋಹಿತರು ಪೂಜೆ ಮಾಡಿಸಿದರೆ ಮಾತ್ರ ನಮಗೆ ತೃಪ್ತಿ ಎಂದು ಭಾವಿಸುವುದೇಕೆ? ಅವರು ಹೇಳಿದ ಸಮಯಕ್ಕೆ ಸರಿಯಾಗಿ ಶೋರೂಂನಿಂದ ಗಾಡಿ ತೆಗೆದುಕೊಂಡು ಬರಬೇಕೆನ್ನುವುದು, ಪೂಜೆ ಪುನಸ್ಕಾರದ ಬಳಿಕವೇ ವಾಹನ ಚಲಾಯಿಸುವ ಧೋರಣೆ ಅನುಸರಿಸಬೇಕೆ?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ