ಭಾರತ ದೇಶದ ಕಾಫಿ ತವರೂರು ಕರ್ನಾಟಕ

ಭಾರತದಲ್ಲಿ ಕಾಫಿ ಎಂದರೆ ಮೊದಲು ನೆನಪಾಗುವ ರಾಜ್ಯ ಕರ್ನಾಟಕ. ಇಂದು ದೇಶದ ಒಟ್ಟು ಕಾಫಿ ಉತ್ಪಾದನೆಯ ಸುಮಾರು 65–70% ಕರ್ನಾಟಕದಲ್ಲೇ ಬೆಳೆಯಲಾಗುತ್ತದೆ. ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳ ಮಲೆನಾಡು ಪ್ರದೇಶಗಳು ವಿಶ್ವದ ಅತ್ಯುತ್ತಮ ನೆರಳಿನ (Shade-grown) ಅರೇಬಿಕಾ ಮತ್ತು ರೋಬಸ್ಟಾ ಕಾಫಿಗೆ ಹೆಸರುವಾಸಿಯಾಗಿವೆ. ಆದರೆ ಈ ಯಶಸ್ಸಿನ ಹಿಂದೆ ಸುಮಾರು 350 ವರ್ಷಗಳ ಇತಿಹಾಸಸಾಹಸ, ಬ್ರಿಟಿಷರ ಆಡಳಿತ ಸುಧಾರಣೆ, ವೈಜ್ಞಾನಿಕ ಕೃಷಿ ಮತ್ತು ಸಾವಿರಾರು ರೈತರ ಪರಿಶ್ರಮ ಅಡಗಿದ್ದು ಆ ಯಶೋಗಾಥೆಯನ್ನು ಸವಿವರವಾಗಿ ತಿಳಿಯೋಣ ಬನ್ನಿ.


ಬಾಬಾಬುಡನ್ ತಂದ ಏಳು ಬೀಜಗಳು

ಭಾರತದಲ್ಲಿ ಕಾಫಿ ಬೆಳೆಯುವ ಇತಿಹಾಸ 17ನೇ ಶತಮಾನದಿಂದ ಆರಂಭವಾಗುತ್ತದೆ. ಸುಮಾರು 1670ರ ಅವಧಿಯಲ್ಲಿ, ಚಿಕ್ಕಮಗಳೂರಿನ ಸೂಫಿ ಸಂತ ಹಜರತ್ ದಾದಾ ಹಯಾತ್ ಮೀರ ಖಲಂದರ್, ಜನಪ್ರಿಯವಾಗಿ ಬಾಬಾಬುಡನ್ ಎಂದು ಕರೆಯಲ್ಪಡುವವರು, ಹಜ್ ಯಾತ್ರೆಗಾಗಿ ಯೆಮೆನ್‌ನ ಮೋಖಾ (Mocha) ನಗರಕ್ಕೆ ತೆರಳಿದ್ದರು. ಆ ಸಮಯದಲ್ಲಿ ಯೆಮೆನ್ ದೇಶವು ಕಾಫಿ ವ್ಯಾಪಾರದ ಮೇಲೆ ಏಕಸ್ವಾಮ್ಯ ಹೊಂದಿತ್ತುಕಾಫಿ ಬೀಜಗಳನ್ನು ಬೇರೆ ದೇಶಗಳಿಗೆ ಕೊಂಡೊಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿತ್ತು. ಆದರೂ ಬಾಬಾಬುಡನ್ ಅವರು ಏಳು ಕಾಫಿ ಬೀಜಗಳನ್ನು ತಮ್ಮ ಉಡುಪಿನೊಳಗೆ ಅಡಗಿಸಿಕೊಂಡು ಭಾರತಕ್ಕೆ ತಂದರು ಎಂಬುದು ಜನಪ್ರಿಯ ಐತಿಹಾಸಿಕ ನಂಬಿಕೆಯಾಗಿದ್ದು  ಅವರು ಹಾಗೆ ತಂದ ಆ ಬೀಜಗಳನ್ನು ಅಂದಿನ ದತ್ತಪೀಠ (ಬಾಬಾಬುಡನ್ ಗಿರಿ) ಬೆಟ್ಟಗಳಲ್ಲಿ ನೆಟ್ಟು ಅದು ಹೆಮ್ಮರವಾಗಿ ಭಾರತದಲ್ಲಿ ಕಾಫಿ ಕೃಷಿಯ ಆರಂಭ ಆಗಿದೆ ಎಂದೇ ಪರಿಗಣಿಸಲಾಗುತ್ತದೆ.  ಆದರೆ ಇದಕ್ಕೆ ಪುರಾವೆ ಎನ್ನುವಂತಹ ಯಾವುದೇ ಐತಿಹ್ಯವಾಗಲೀ ದಾಖಲೆ ಇಲ್ಲದಿದ್ದರೂ, ಜನರ ಮನಸ್ಸಿನಲ್ಲಿ ಇದೇ ಸತ್ಯ ಎಂಬುದನ್ನು ಹೇರಲಾಗಿರುವುದು ವಿಪರ್ಯಾಸ..


ಮನೆ ಹಿತ್ತಲಿನ ಬೆಳೆಯಿಂದ ವಾಣಿಜ್ಯ ಬೆಳೆವರೆಗೆ

ಸ್ಥಳೀಯ ರೈತರು, ತಮ್ಮ ಮನೆಗಳ ಹಿತ್ತಲಿನಲ್ಲಿ, ತೋಟಗಳ ಅಂಚಿನಲ್ಲಿ, ಕಾಡಿನ ನಡುವೆ, ಸಣ್ಣ ಪ್ರಮಾಣದಲ್ಲಿ ಕಾಫಿ ಗಿಡಗಳನ್ನು ಬೆಳೆಸಿ ತಮ್ಮ ಮನೆಗೆ ಬಳಸುತ್ತಿದ್ದದ್ದಲ್ಲದೇ ಹೆಚ್ಚಾಗಿ ಉಳಿದಿದ್ದನ್ನು ಮತ್ತೊಬ್ಬರಿಗೆ ಹಂಚುವ ಇಲ್ಲವೇ ಮತ್ತೊಂದು ಪದಾರ್ಥಗಳೊಂದಿಗೆ ವಿನಿಮಯ ಮಾಡಿಕೊಳ್ಳುವ ಪದ್ದತಿ ರೂಡಿಯಲ್ಲಿತ್ತು. ಇನ್ನೂ ಹೆಚ್ಚಾದಲ್ಲಿ ಸಣ್ಣ ಪ್ರಮಾಣದಲ್ಲಿ ಮಾರಾಟ ಮಾಡುತ್ತಿದ್ದರೇ ಹೊರತು, ಕಾಫಿಗೆ ಎಂದೇ ಯಾವುದೇ ಸಂಘಟಿತ ಮಾರುಕಟ್ಟೆ ಅಥವಾ ರಫ್ತು ವ್ಯವಸ್ಥೆ ಇರಲಿಲ್ಲ.


ಕಾಫಿ ವ್ಯಾಪಾರದ ಮೇಲೆ ಪ್ಯಾರಿ ಕಂಪನಿಯ ಏಕಸ್ವಾಮ್ಯ

1823 ರಲ್ಲಿ ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್  ತಮ್ಮ ಸಂಸ್ಥಾನದಲ್ಲಿ ಬೆಳೆಯುವ ಕಾಫೀ ಬೆಳೆಗೆ ದೇಶವಿದೇಶಗಳಲ್ಲಿ ಮಾರುಕಟ್ಟೆಯನ್ನು ಒದಗಿಸುವ ಸಲುವಾಗಿ  ಸಂಸ್ಥಾನದಾದ್ಯಂತ ಬೆಳೆಯುವ ಕಾಫಿಯ ಖರೀದಿ ಮತ್ತು ರಫ್ತಿನ ಸಂಪೂರ್ಣ ಏಕಸ್ವಾಮ್ಯದ ಹಕ್ಕನ್ನು ‘ಪ್ಯಾರಿ ಕಂಪನಿ’ಯ ಜೆ.ಎಚ್. ಜಾಲಿ ಎಂಬ ಬ್ರಿಟಿಷ್ ವ್ಯಾಪಾರಿಗೆ ನೀಡಿದ್ದರು. ಇದರಿಂದಾಗಿ, ಸಾಮಾನ್ಯ ಜನರಿಗೆ ಸ್ವತಂತ್ರವಾಗಿ ಕಾಫಿ ತೋಟಗಳನ್ನು ಆರಂಭಿಸಲು ಅಥವಾ ವಿಸ್ತರಿಸಲು ಯಾವುದೇ ಪ್ರೋತ್ಸಾಹ ಸಿಗುತ್ತಿರಲಿಲ್ಲ.


ಮೈಸೂರು ಸಂಸ್ಥಾನದಲ್ಲಿ ಕಾಫಿ ಕ್ರಾಂತಿಗೆ ಕಾರಣವಾದ ಆಡಳಿತ ಬದಲಾವಣೆ

1831ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತವನ್ನು ದಸರಾ ಸಮಯದಲ್ಲಿ ದುಂದು ವೆಚ್ಚ ಮಾಡಿದರು ಎಂಬ ಆರೋಪದಡಿಯಲ್ಲಿ   ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿ ಜನರಲ್ ಲಾರ್ಡ್ ವಿಲಿಯಂ ಬೆಂಟಿಂಕ್, ಮೈಸೂರು ಸಂಸ್ಥಾನದ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಂಡ ನಂತರ, 1834ರಲ್ಲಿ ಸರ್ ಮಾರ್ಕ್ ಕಬ್ಬನ್ ಮೈಸೂರು ರಾಜ್ಯದ ಮುಖ್ಯ ಕಮಿಷನರ್ ಆಗಿ ನೇಮಕಗೊಂಡರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ