ಹೊಸ ವರ್ಷದ ಉತ್ಸವವನ್ನು ಆಚರಿಸಲು ನೀವು ದುಬಾರಿ ಪ್ರವಾಸಿ ಸ್ಥಳಗಳಿಗೆ ಹೋಗಬೇಕೆಂದಿಲ್ಲ. ಭಾರತ ಹಾಗೂ ವಿದೇಶಗಳಲ್ಲಿಯೂ ಹೊಸ ವರ್ಷ ಆಚರಿಸಬಹುದಾದಂತಹ ಅಗ್ಗದ ನಗರಗಳೂ ಇವೆ. ಎಲ್ಲಾ ಕಡೆಗಳಿಂದಲೂ ಪ್ರವಾಸಿಗಳನ್ನು ತಮ್ಮತ್ತ ಆಕರ್ಷಿಸುವ ಅಂತಹ ಮನೋರಂಜಕ ಸ್ಥಳಗಳ ಬಗ್ಗೆ ತಿಳಿದುಕೊಳ್ಳಿ.

ಓರ್ಛಾದ ಮಂಟಪಗಳು

ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದ ಎಲ್ಲೆಗಳಲ್ಲಿರುವ ಓರ್ಛಾದ ಪುರಾತನ ಅರಮನೆಗಳು ಮತ್ತು ಭವನಗಳನ್ನು ನೋಡಬಹುದು. ಇಲ್ಲಿನ ರಾಜರುಗಳ ಸ್ಮೃತಿಯ ರೂಪದಲ್ಲಿ ಮಂಟಪಗಳನ್ನು ನಿರ್ಮಿಸಿದ್ದು, ಅವು ಇಂದಿಗೂ ನೋಡುಗರ ಆಕರ್ಷಣೀಯ ಪ್ರಮುಖ ಕೇಂದ್ರವಾಗಿದೆ.

ಓರ್ಛಾದಲ್ಲಿ ರಾಜರುಗಳ ನೆನಪಲ್ಲಿ ನಿರ್ಮಿತವಾದ 14 ಮಂಟಪಗಳು ಬೇತ್ವಾ ನದಿಯ ದಡದಲ್ಲಿ ಕಂಚನ್‌ ಘಾಟ್‌ನಲ್ಲಿ ಇವೆ. 1800ರಲ್ಲಿ ನಿರ್ಮಿಸಲಾದ ಗಾಜಿನ ಅರಮನೆ ಹೆರಿಟೇಜ್‌ ಹೋಟೆಲ್ ‌ಆಗಿ ಬದಲಾಗಿದೆ. ಓರ್ಛಾ ಝಾನ್ಸಿಯಿಂದ ಅರ್ಧ ಗಂಟೆ ದೂರದಲ್ಲಿದೆ. ಜಹಾಂಗೀರ್‌ ಮಹಲ್ ಇಲ್ಲಿನ ಪ್ರಮುಖ ಅರಮನೆ. ಇದರ ಪ್ರವೇಶದ್ವಾರದಲ್ಲಿ 2 ಬಾಗವಾಗಿರುವ ಆನೆಗಳನ್ನು ನಿರ್ಮಿಸಲಾಗಿದೆ. ತೀನ್‌ ಮಂಜಿಲಾ ಈ ಅರಮನೆಯ ವಾಸ್ತುಕಲೆಯ ಅದ್ಭುತ ನಮೂನೆಯಾಗಿದೆ. ಇದಲ್ಲದೆ ಪ್‌ಬಾಗ್‌, ಸುಂದರ ಮಹಲ್ ಮತ್ತು ರಾಯ್‌ ಪ್ರಾಣ್‌ ಮಹಲ್ ಕೂಡ ನೋಡಲು ಚೆನ್ನಾಗಿರುತ್ತದೆ.

ಇಲ್ಲಿನ ಮಾರುಕಟ್ಟೆಗಳಲ್ಲಿ ಲೋಹದ ತುಂಡುಗಳಿಂದ ಮಾಡಿದ ವಸ್ತುಗಳನ್ನು ಖರೀದಿಸಬಹುದು. ಓರ್ಛಾದ ಅತ್ಯಂತ ಸಮೀಪದ ವಿಮಾನ ನಿಲ್ದಾಣ ಖಜುರಾಹೋ ಮತ್ತು ಗ್ವಾಲಿಯರ್‌. ಹತ್ತಿರದ ರೇಲ್ವೆ ಸ್ಟೇಷನ್‌ ಝಾನ್ಸಿ. ದಿಗೀ ಮುಂಬೈ ಮತ್ತು ದಿಗೀ ಚೆನ್ನೈ ಹೈವೇ ಝಾನ್ಸಿಗೆ ಹೋಗಿ ತಲುಪುತ್ತದೆ. ಓರ್ಛಾಗೆ ಹತ್ತಿರದ ಎಲ್ಲ ನಗರಗಳಿಂದ ಬಸ್‌ ಸೌಲಭ್ಯವಿದೆ.

ಮುನ್ನಾರ್ ಮುಟ್ಟುಪೆಟ್ಟಿ ಸರೋವರ

ದಕ್ಷಿಣ ಭಾರತದ ಕೇರಳ ರಾಜ್ಯದಲ್ಲಿರುವ ಮುನ್ನಾರ್‌ ಪ್ರವಾಸಿ ಸ್ಥಳ ಎಲ್ಲರಿಗೂ ಪರಿಚಿತವಾಗಿದೆ. ಇದು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿದೆ. ಇದು ದಕ್ಷಿಣ ಭಾರತದ ಪರ್ವತ ಪ್ರದೇಶಗಳ ಪ್ರಮುಖ ಪ್ರವಾಸಿ ತಾಣವಾಗಿದೆ. ಇಲ್ಲಿನ ಪ್ರಮುಖ ಆಕರ್ಷಣೆ 12 ಸಾವಿರ ಹೆಕ್ಟೇರುಗಳಲ್ಲಿ ಹರಡಿದ ಸುಂದರ ಟೀ ತೋಟಗಳು. ಪ್ರತಿವರ್ಷ ಇಲ್ಲಿ ಸಾವಿರಾರು ಪ್ರವಾಸಿಗಳು ಟೀ ಸಂಗ್ರಹಾಲಯ ಮತ್ತು ಟೀ ಪ್ರೋಸೆಸಿಂಗ್‌ ನೋಡಲು ಬರುತ್ತಾರೆ. ಟೀ ತೋಟಗಳಲ್ಲದೆ, ಮುನ್ನಾರ್‌ನಿಂದ 15 ಕಿ.ಮೀ. ದೂರದಲ್ಲಿ ಎರ್ನಾಕುಲಂ ರಾಷ್ಟ್ರೀಯ ಉದ್ಯಾನವನ ಇದೆ. ಇದು ದೇವಕುಲಂನಲ್ಲಿದೆ. ನೀಲಗಿರಿ ಕಾಡುಕುರಿಗಳ ರಕ್ಷಣೆಗಾಗಿ ಇದನ್ನು ನಿರ್ಮಿಸಲಾಗಿತ್ತು. ಪ್ರವಾಸಿಗಳಿಗೆ ಇಲ್ಲಿ ಟ್ರೆಕ್ಕಿಂಗ್‌ನ ಸೌಲಭ್ಯ ಇದೆ.

ಟೀ ತೋಟಗಳಲ್ಲದೆ ಪ್ರವಾಸಿಗಳು ಮುಟ್ಟುಪೆಟ್ಟಿ ಸರೋವರವನ್ನೂ ನೋಡಬಹುದು. ಇಲ್ಲಿ ಪ್ರವಾಸಿಗಳು ಪಿಕ್ನಿಕ್‌ ಮಾಡಲು ಬರುತ್ತಾರೆ. ಮುಟ್ಟುಪೆಟ್ಟಿ ಸಮುದ್ರ ಮಟ್ಟದಿಂದ 1700 ಮೀಟರ್‌ ಎತ್ತರದಲ್ಲಿದೆ. ಮುಟ್ಟುಪೆಟ್ಟಿಯ ಕಾಡುಗಳಲ್ಲಿ ವಿಭಿನ್ನ ರೀತಿಯ ಪಕ್ಷಿಗಳ ನಿವಾಸಗಳಿವೆ. ಮುಟ್ಟುಪೆಟ್ಟಿಯ ಜೊತೆಜೊತೆಗೆ ಅಥುಕಡ್‌ ಫಾಲ್ಸ್ ನ್ನೂ ನೋಡಬಹುದು. ಈ ಝರಿ ಮುನ್ನಾರ್‌ನಿಂದ 8 ಕಿ.ಮೀ. ದೂರದಲ್ಲಿ ಕೋಗಿ ರೋಡ್‌ನಲ್ಲಿ ಗಾಢವಾದ ಘಾಟ್‌ನಲ್ಲಿ ಇದೆ. ಅಥುಕಡ್‌ ಫಾಲ್ಸ್ ಅಲ್ಲದೆ ಚೀಯೂಪರಾ ಮತ್ತು ವಾರ್ ಫಾಲ್ಸ್ ಕೂಡ ನೋಡಲು ಯೋಗ್ಯವಾಗಿದೆ. ಮುನ್ನಾರ್‌ಗೆ ಬರುವ ಪ್ರವಾಸಿಗಳು ಚಿನ್ನಾರ್‌ ವನ್ಯಜೀವಿ ಅಭಯಾರಣ್ಯವನ್ನೂ ನೋಡಬಹುದು. ಅದು ಇಲ್ಲಿಂದ 60 ಕಿ.ಮೀ. ದೂರದಲ್ಲಿ ಕೇರಳ ತಮಿಳುನಾಡು ಬಾರ್ಡರ್‌ನಲ್ಲಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ