ಸಂದರ್ಶಕರು: ಭಾರ್ಗವಿ ಜಿ. ಆರ್. (ಪತ್ರಿಕೋದ್ಯಮ ವಿದ್ಯಾರ್ಥಿ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ)
ಸಂದರ್ಶನ ಪಡೆದವರು: ಲೋಲಾಕ್ಷಿ ಎಂ. (ಶಿಕ್ಷಕಿ, ವಯಸ್ಸು: 51 ವರ್ಷ)
ಪೀಠಿಕೆ:
ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸಾಧನೆ ಮಾಡಿರುವ ಲೋಲಾಕ್ಷಿ ಎಂ. ಅವರು ಭುವನೇಶ್ವರಿ ಶಾಲೆಯನ್ನು ಸತತ 25 ವರ್ಷಗಳಿಂದ ತಮ್ಮ ಶ್ರಮಕ್ಕೂ ಮೀರಿ ನಡೆಸುತ್ತಾ ಬಂದಿದ್ದಾರೆ. 51 ವರ್ಷದ ಮಹಿಳೆಯಾಗಿದ್ದರೂ, ಮೂಲತಃ ಭದ್ರಾವತಿ ತಾಲೂಕಿನ ಅರದೋಟ್ಲು ಗ್ರಾಮದಲ್ಲಿ ವಾಸವಾಗಿದ್ದುಕೊಂಡು ಈ ಸಾಧನೆ ಮಾಡಿದ್ದಾರೆ. ಅವರೊಂದಿಗಿನ ಸಂದರ್ಶನದ ವಿವರ ಇಲ್ಲಿದೆ:
1) ಪ್ರಶ್ನೆ: ಶಿಕ್ಷಣ ವೃತ್ತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಲೋಲಾಕ್ಷಿ ಎಂ.: ಶಿಕ್ಷಕ ವೃತ್ತಿಯು ಸಮಾಜ ಸೇವಾ ಕೆಲಸವು ಮತ್ತು ಉತ್ತಮ ಪ್ರಜೆಗಳನ್ನು ತಯಾರಿಸುವ ಹಾಗೂ ಮನಸ್ಸಿಗೆ ಸಂತೋಷವನ್ನು ನೀಡುವ ವೃತ್ತಿಯಾಗಿರುತ್ತದೆ. ಯಾವುದೇ ಭೇದ-ಭಾವವಿಲ್ಲದೆ ಮುಗ್ಧ ಮನಸುಗಳೊಂದಿಗೆ ಕಳೆಯುವ ಕ್ಷಣವು ಜೀವನದ ಎಲ್ಲ ಸಂಕಷ್ಟಗಳನ್ನು ಕಳೆದುಹಾಕಿ ಬಿಡುತ್ತದೆ. ವಯಸ್ಸಿನ ಮಿತಿಯನ್ನು ಮೀರಿ ಸೇವೆ ಸಲ್ಲಿಸಬಹುದಾದ ಒಂದು ಸೇವೆ ಇದಾಗಿದೆ.
2) ಪ್ರಶ್ನೆ: ಪ್ರಸ್ತುತದಲ್ಲಿರುವ ಶಿಕ್ಷಣದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಲೋಲಾಕ್ಷಿ ಎಂ.: ಹಿಂದಿನ ಶಿಕ್ಷಣಕ್ಕಿಂತ ಇಂದಿನ ಶಿಕ್ಷಣದಲ್ಲಿ ಅನೇಕ ಬದಲಾವಣೆ ಕಾಣಬಹುದಾಗಿದೆ. ವಿದ್ಯಾರ್ಥಿ ಹಾಗೂ ಗುರುಗಳ ನಡುವಿನ ನಡವಳಿಕೆ - ಬಾಂಧವ್ಯ ಎಲ್ಲವೂ ಭಿನ್ನವಾಗಿ ಸಾಗುತ್ತಿದೆ. ಮೌಲ್ಯಯುತ ಹಾಗೂ ಸಾಮಾಜಿಕವಾಗಿ ಬೇಕಾದ ವಿಷಯಗಳನ್ನಾಧರಿಸಿ ಹೇಳಿಕೊಡುತ್ತಿದ್ದ ಶಿಕ್ಷಣಕ್ಕಿಂತ ವಿಭಿನ್ನವಾಗಿ ಇದೀಗ ತಂತ್ರಜ್ಞಾನದ ಅಳವಡಿಕೆ ಹೆಚ್ಚಾಗುತ್ತಿದೆ.
3) ಪ್ರಶ್ನೆ: ಒಬ್ಬ ಹೆಣ್ಣುಮಗಳಾಗಿ ಸ್ವತಃ ಶಾಲೆಯನ್ನು ಪ್ರಾರಂಭಿಸುವಾಗ ಪ್ರೇರಣೆಯಾಗಿ ಅಥವಾ ಯಾವ ರೀತಿಯ ಸವಾಲುಗಳನ್ನು ಎದುರಿಸಿದ್ದೀರಿ?
ಲೋಲಾಕ್ಷಿ ಎಂ.: ಪ್ರೇರಣೆ ಎಂದರೆ - ವಕೀಲ ವೃತ್ತಿಯಲ್ಲಿ ಕೆಲಸ ಮಾಡಬೇಕೆಂದು ಬಯಸಿದ್ದ ನನಗೆ ಅನಿವಾರ್ಯ ಕಾರಣಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಬರಲಾಯಿತು. ಅನೇಕ ಸವಾಲುಗಳ ಬಳಿಕ ಈ ಸೇವೆಯಲ್ಲಿಯೇ ನನ್ನನ್ನು ಗುರುತಿಸಿಕೊಳ್ಳಬೇಕೆಂಬ ನಿರೀಕ್ಷೆಯಿಂದ ಮುಂದುವರೆದೆ. ಪ್ರಾರಂಭದಲ್ಲಿ ಈ ಗ್ರಾಮದ ಮಕ್ಕಳ ಮೇಲೆ ಗುಲಾಮಗಿರಿತನ ಹಾಗೂ ಜೀತಪದ್ಧತಿಯಿಂದ ಮಕ್ಕಳನ್ನು ಶಿಕ್ಷಣದಿಂದ ದೂರ ಉಳಿಸಿದ್ದರು.
4) ಪ್ರಶ್ನೆ: ಸವಾಲುಗಳು ಯಾವುವು?
ಲೋಲಾಕ್ಷಿ ಎಂ.: ಮಕ್ಕಳನ್ನು ಗುರುತಿಸಿ ವಿದ್ಯಾಭ್ಯಾಸ ನೀಡಲು ಪ್ರಾರಂಭಿಸಿದೆ. ಅನೇಕ ಅಸಮಾನತೆಯ ವಾತಾವರಣದಿಂದ ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಜೀವನದಲ್ಲಿ ಬದಲಾವಣೆ ಕಂಡಿತು. ಒಬ್ಬಂಟಿ ಮಹಿಳೆ ಶಾಲೆಯನ್ನು ಪ್ರಾರಂಭಿಸುವುದು ಸಾಮಾನ್ಯವಾಗಿರಲಿಲ್ಲ. ಜೀವನವನ್ನು ಭಯ, ಒಂಟಿತನ ಮತ್ತು ಸಾಧಿಸಲೇ ಬೇಕೆಂಬ ಛಲದಿಂದ ಮುಂದುವರೆದೆ.
5) ಪ್ರಶ್ನೆ: ಇದುವರೆಗೂ ನೀವು ಪಡೆದ ಗೌರವಗಳು ಅಥವಾ ಪ್ರಶಸ್ತಿಗಳು ಯಾವುವು?
ಲೋಲಾಕ್ಷಿ ಎಂ.: 2021-22 ನೇ ಸಾಲಿನಲ್ಲಿ ಖಾಸಗಿ ಒಕ್ಕೂಟ ಹಾಗೂ ಸರ್ಕಾರಿ ಶಿಕ್ಷಕರ ಸಂಘದಿಂದ 'ಉತ್ತಮ ಶಿಕ್ಷಕಿ ಪ್ರಶಸ್ತಿ' ಲಭಿಸಿದೆ. ಸಂಸ್ಥೆಯ ಮಹಿಳಾ ಉಸ್ತುವಾರಿಯಾಗಿದ್ದರಿಂದ ತಾಲೂಕು ಮಟ್ಟದ 'ಶಿಕ್ಷಣ ರತ್ನ ಪ್ರಶಸ್ತಿ', 'ಕೀರ್ತಿ ಪ್ರಕಾಶನ ಪ್ರಶಸ್ತಿ', 'ಕೀರ್ತಿ ವಿಕಾಸ ಪ್ರಶಸ್ತಿ' ಹೀಗೆ ಒಟ್ಟು 8 ಕ್ಕೂ ಅಧಿಕ ಪ್ರಶಸ್ತಿಗಳು ಲಭಿಸಿವೆ.
6) ಪ್ರಶ್ನೆ: ಮಹಿಳೆಯ ಸಾಧನೆಗೆ ಕುಟುಂಬದ ಪ್ರೋತ್ಸಾಹದ ಬಗ್ಗೆ ನಿಮ್ಮ ಅಭಿಪ್ರಾಯವೇನು?





