ಅತ್ತ ಅಲ್ಲೂ ಸಲ್ಲದ, ಇತ್ತ ಇಲ್ಲೂ ಸಲ್ಲದರು

ಅಮೆರಿಕಾದಿಂದ ಅಕ್ರಮ ರೀತಿಯಲ್ಲಿ ಒಳಬಂದ ನುಸುಳುಕೋರರನ್ನು ಮಿಲಿಟರಿ ಪ್ಲೇನುಗಳ ಮುಖಾಂತರ ಟೆಕ್ಸಾಸ್‌ ನಿಂದ ಪಂಜಾಬ್‌ ನ ಅಮೃತಸರ ಮೂಲೆಗೆ ರವಾನಿಸಿದಾಗ, ಭಾರತ ಸರ್ಕಾರ ಮೌನವಾಗಿದ್ದದ್ದನ್ನು ಅರ್ಥೈಸಿಕೊಳ್ಳಬಹುದು. ಇಂಥ ನುಸುಳುಕೋರರು ವೀಸಾರಹಿತರಾಗಿ, ಕಾನೂನುಬಾಹಿರ ವಿಧಾನಗಳಿಂದ, ವಿಶ್ವದ ಅನೇಕ ದೇಶಗಳನ್ನು ಹಾದು, ಕಾಡುಮೇಡು ಅಲೆದು, ಅಂತೂ ಅಮೆರಿಕಾ ತಲುಪಿಬಿಡುತ್ತಾರೆ. ವಿಶ್ವಗುರು ಭಾರತ ಬಿಟ್ಟು ಈ ಧನಭೂಮಿಗೆ ಬಂದುಬಿಟ್ಟೆಲ್ಲ ಎಂದು ಹಿರಿ ಹಿರಿ ಹಿಗ್ಗುತ್ತಾರೆ. ಗುಲಾಮರಾಗಿದ್ದರೂ ಈ ನಾಡೇ ಸ್ವರ್ಗ ಎಂದು ಭಾವಿಸುತ್ತಾರೆ.

ರಾಜಮಾರ್ಗದಲ್ಲಿ ಭಾರತದಿಂದ ಅಮೆರಿಕಾ ತಲುಪಲು ಲಕ್ಷಾಂತರ ರೂ. ಖರ್ಚಾಗುತ್ತದೆ. ಅದೇ ಕಳ್ಳ ಮಾರ್ಗದಲ್ಲಿ ವೀಸಾ ರಹಿತರಾಗಿ ಕಾನೂನುಬಾಹಿರವಾಗಿ ಹೊರಟರೆ ಖರ್ಚು ಎಷ್ಟೋ ಕಡಿಮೆ ಆಗುತ್ತದೆ. ಒಂದು ವರದಿಯ ಪ್ರಕಾರ, ಕಳೆದ ಕೆಲವೇ ವರ್ಷಗಳಲ್ಲಿ 20-30 ಸಾವಿರ ಭಾರತೀಯರಿಗೆ, ವರ್ಕ್‌ ವೀಸಾ ಸಿಗದ ಕಾರಣ, ಬೇರೆ ದೇಶದ ಕಾಡುಮೇಡು ಅಲೆದು, ಜೀವವನ್ನು ಅಂಗೈಲಿ ಹಿಡಿದು, ಅಮೆರಿಕಾ ತಲುಪಿದ್ದಾರಂತೆ! ಟ್ರಂಪಣ್ಣ ಸುಮ್ಮನೇ ಬಿಟ್ಟಾನಾ? ಇವರ ಮೇಲೆ ಹದ್ದಿನಂತೆ ಹರಿಹಾಯ್ದು, ನಿಷ್ಕರುಣೆಯಿಂದ ಅವರನ್ನು ಹಿಡಿದು, ಭಾರತ ಅಥವಾ ಎಲ್ಲಿಂದ ಬಂದಿದ್ದರೋ ಅಲ್ಲಿಗೆ ರವಾನೆ ಮಾಡುತ್ತಿದ್ದಾರೆ.

ಭಾರತವಂತೂ ಈ ರೀತಿ ಅಸಂಖ್ಯಾತ ಬಾಂಗ್ಲಾದೇಶಿಗಳು, ಬರ್ಮಾ, ಶ್ರೀಲಂಕಾ, ನೇಪಾಳದಂಥ ಕಾನೂನುಬಾಹಿರ ನುಸುಳುಕೋರರನ್ನು, ಉಗುಳಲಾರದೆ ನುಂಗಲಾರದೆ ಬಿಸಿ ತುಪ್ಪವಾಗಿ ಸಹಿಸುತ್ತಿದೆ. ಅದರಲ್ಲೂ ಹೀಗೆ ಬಂದ ಮುಸ್ಮಾನರ ಸಂಖ್ಯೆ ಅತಿ ಹೆಚ್ಚು. ವೋಟ್‌ ಬ್ಯಾಂಕಿಂಗ್‌ ಗಾಗಿ ಅನಾದಿಕಾಲದಿಂದಲೂ ಇವರನ್ನು ಸಹಿಸಲಾಗುತ್ತಿದೆ.

ಅಮೆರಿಕಾ ಇಂಥವರನ್ನು ಹೀಗೆ ನಡೆಸಿಕೊಳ್ಳುತ್ತಿರುವುದು, ಅವರ ಕಾನೂನಿನ ಪ್ರಕಾರ ಸರಿ ಇರಬಹುದು, ಆದರೆ ಮಾನವೀಯತೆ ಅಂತೂ ಅಲ್ಲ. ಇಂಥ ನುಸುಳುಕೋರರು ಯಾವ ದೇಶದವರೇ ಆಗಿರಲಿ, ಅಮೆರಿಕಾದ ಎಂಥ ಹೀನಾಯ ಕೆಲಸವನ್ನೇ ಆಗಲಿ, ಅತಿ ನಿಷ್ಠೆಯಿಂದ ಅತಿ ಕಡಿಮೆ ಸಂಬಳಕ್ಕೆ ಮಾಡಿಕೊಡುತ್ತಾರೆ. ತಮ್ಮ ದೇಶದ ಕೈಲಾಗದ ಸರ್ಕಾರಕ್ಕಿಂತ ವಾಸಿ ಎಂದು ಅಲ್ಲಿ ನೆಲೆ ನಿಲ್ಲುತ್ತಾರೆ. ಯಾವ ಯಾವ ದೇಶದಿಂದ ಪ್ರಜೆಗಳು ಇಷ್ಟು ಅಪಾಯ ಎದುರಿಸಿಯಾದರೂ ಅಲ್ಲಿಯವರೆಗೆ ತಲುಪಿದ್ದಾರೋ, ಅಲ್ಲಿನ ಸರ್ಕಾರ ಮೋಜು ಉಡಾಯಿಸುತ್ತಿದ್ದರೆ, ಸಾಮಾನ್ಯ ಪ್ರಜೆಗಳು ಕಷ್ಟ ಅನುಭವಿಸುತ್ತಿದ್ದಾರೆ!

ಈಗ ಇಲ್ಲಿಂದ ಅಲ್ಲಿಗೆ ಹೀಗೆ ಅಪಾಯ ಎದುರಿಸಿ ಹೋಗಬಯಸುವ ಯುವಜನತೆ, ಇಡೀ ಜೀವಮಾನ ಸವೆಸಿ ಮನೆಯವರು ಕೂಡಿಟ್ಟಿರುವ ಹಣ, ಮನೆಯವರನ್ನೆಲ್ಲ ಶಾಶ್ವತವಾಗಿ ತೊರೆದು ಅಲ್ಲಿಗೆ ಹೋಗಬೇಕಾಗುತ್ತದೆ. ಹೀಗೆ ನುಸುಳಿ ಬಂದವರು ಹೆಜ್ಜೆ ಹೆಜ್ಜೆಗೂ ಅಪಾಯ ಎದುರಿಸುತ್ತಿರುತ್ತಾರೆ. ಇಷ್ಟೆಲ್ಲ ಗೊತ್ತಿದ್ದರೂ, ಇಲ್ಲಿನ ನಿರುದ್ಯೋಗದ ಬವಣೆಗಿಂತ ಅಲ್ಲಾದರೂ ನೆಮ್ಮದಿ ಕಾಣಲಿ, ಎಂದು ಮನೆಯವರು ಬಯಸುತ್ತಾರೆ.

ಹೀಗೆ ಅಲ್ಲಿಗೆ ಹೊರಟ ಪ್ರತಿ ನುಸುಳುಕೋರರೂ, ತಮ್ಮ ಮನೆಯವರ ದೈನೇಸಿತನ ನೋಡಲಾಗದೆ ಈ ನಿರ್ಧಾರಕ್ಕೆ ಬಂದಿರುತ್ತಾರೆ. ಹಾಗೆ ಹೊರಡುವವರು ಒಂದು ರೀತಿ ಯುದ್ಧಕ್ಕೆ ಹೊರಟ ಸೈನಿಕನಂತೆಯೇ, ಜೀವದೊಂದಿಗೆ ಬಂದರೂ ಬರಬಹುದು, ಇಲ್ಲದಿದ್ದರೆ ಇಲ್ಲ! ದೇಶ/ಧರ್ಮಕ್ಕಾಗಿ ಯುದ್ಧ ನಡೆಯುತ್ತದೆ. ಆದರೆ ಇಲ್ಲಿ ಇವರ ಸಂಘರ್ಷ ತಮಗಾಗಿ, ತಮ್ಮ ಪರಿವಾರಕ್ಕಾಗಿ ನಡೆಯುತ್ತಿದೆ. ಅಲ್ಲಿಗೆ ಹೋದವರು ತಮ್ಮ ಮನೆಯವರಿಗೆ ಯಾವುದೋ ರೂಪದಲ್ಲಿ ಸಂಪಾದಿಸಿದ ಹಣ ಕಳುಹಿಸುತ್ತಾರೆ, ಆ ಆಸೆಯಿಂದಲೇ ಅವರನ್ನು ಮನೆಯವರು ಕಳಿಸಿಕೊಡುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ