ಸತ್ಯವತಿ ವಸಂತಕುಮಾರ್

ನಾನು ಇವರನ್ನು ಭೇಟಿ ಮಾಡಲು ಹೋಗಿದ್ದೆ. ಅಲ್ಲಿಗೆ ಬಂದ ಅಭಿಮಾನಿಯೊಬ್ಬರು, `ಆಂಟಿ ನೀವು ಆ ಸೀರಿಯ್‌ನಲ್ಲಿ ಎಷ್ಟು ಕ್ರೂಯೆಲ್ ಆಗಿ ಪಾತ್ರ ನಿರ್ವಹಿಸಿರುವಿರಿ. ಇಲ್ಲಿ ಇಷ್ಟು ಸೌಮ್ಯ…. ವಾವ್‌ ಗ್ರೇಟ್‌!' ಎನ್ನುತ್ತಿದ್ದರು.

ನನಗೋ ಸೀರಿಯಲ್ ನೋಡೋ ಹವ್ಯಾಸವೇ ಇಲ್ಲ. ಅತ್ತೆ ನೋಡುತ್ತಿದ್ದಾಗ ವಿಧಿಯಿಲ್ಲದೆ ದೃಶ್ಯಗಳು ಕಣ್ಣಿಗೆ ಬೀಳುತ್ತಿದ್ದವು. ಹಿಂದೊಮ್ಮೆ ಬರುತ್ತಿದ್ದ ರಾಧಾಕಲ್ಯಾಣದಲ್ಲಿನ ಇವರ ಪಾತ್ರ, ಅಲ್ಲಿನ ನಟನೆ ಅಮೋಘ. ಪಾಪ ರಾಧೆಗೆ ಈ ಅಜ್ಜಿಯ ಕಾಟ, ಮಗದೊಬ್ಬ ಮೊಮ್ಮಗಳ ಮೇಲಿನ ಅತೀ ಪ್ರೀತಿ, ರಾಧೆಯನ್ನು ಗೋಳಾಡಿಸುತ್ತಿದ್ದ ಪರಿ..... ನೋಡಿದಾಗ ನಟನೆಯನ್ನು ಪರಿಪೂರ್ಣವಾಗಿ ಮೈಗೂಡಿಸಿಕೊಂಡಿದ್ದಾರೆ ಎನಿಸುತ್ತಿತ್ತು. ಹೌದು. ಇವರೇ ಹಿರಿಯ ಕಲಾವಿದೆ ಸತ್ಯವತಿ ವಸಂತಕುಮಾರ್‌.

ನಾಟಕ ಮಂಡಳಿಗಳ ಕಾಲವದು. ಆಗ ಕರ್ನಾಟಕದ ಮನೆಮಾತಾಗಿದ್ದ ಬಹಳ ಜನಪ್ರಿಯವಾಗಿದ್ದ ಗುಬ್ಬಿ ನಾಟಕ ಮಂಡಳಿಯ ಮುಖೇನ ಕಲಾಕ್ಷೇತ್ರಕ್ಕೆ ಬಂದ ಪ್ರತಿಭೆಗಳು, ಆ ಗರಡಿಯಲ್ಲಿ ಪಳಗಿ ಜನಪ್ರಿಯಗೊಂಡ ನಟನಾ ಶಿರೋಮಣಿಗಳು ಅನೇಕರು. ತಮ್ಮ ಹವ್ಯಾಸಗಳಿಂದ ಇಂದಿಗೂ ಜನಮನದಲ್ಲಿ ನಿಂತು ತಮ್ಮ ಕಲೆಯನ್ನು ಮುಂದುವರಿಸುತ್ತಿರುವ ಪ್ರತಿಭೆಗಳಲ್ಲಿ ಸತ್ಯವತಿ ವಸಂತಕಮಾರ್‌ ಸಹ ಒಬ್ಬರು. ಹಲವಾರು ಸಿನಿಮಾ, ನಾಟಕ, ಧಾರಾವಾಹಿಗಳಲ್ಲಿ ನಟಿಸುತ್ತ ಜನರ ಅಭಿಮಾನಕ್ಕೆ ಪಾತ್ರರಾಗಿರುವರು.

ತಮ್ಮ 6ನೇ ವಯಸ್ಸಿನಲ್ಲಿ ತಾಯಿ ಸಾವಿತ್ರಮ್ಮನವರ ಪ್ರೋತ್ಸಾಹದಿಂದ ಸೋದರಿಯರಾದ ನಾಗರತ್ನಾ ಹಾಗೂ ಚಂದ್ರಾರ ಪ್ರೇರಣೆಯಿಂದ ನಟನಾ ಕ್ಷೇತ್ರಕ್ಕೆ ಬಾಲನಟಿಯಾಗಿ ಪಾದಾರ್ಪಣೆ ಮಾಡಿದರು. ಅವರ ಹೆಸರಾಂತ ನಾಟಕಗಳಾದ ರಾಜಾ ಗೋಪಿಚಂದ್‌, ಕೃಷ್ಣಲೀಲೆ, ಸಾಹುಕಾರ, ಅಡ್ಡದಾರಿ ನಾಟಕಗಳಲ್ಲಿ ಬಾಲನಟಿಯಾಗಿ ಪಾತ್ರ ವಹಿಸುತ್ತಿದ್ದರು. ಈ ಕ್ಷೇತ್ರದಲ್ಲಿ ತಪ್ಪು ಹೆಜ್ಜೆ ಇಟ್ಟಾಗ, ತೊದಲು ನುಡಿಗಳನ್ನಾಡಿದಾಗ, ತಿದ್ದಿತೀಡಿ ನಟನೆಯನ್ನು ಕಲಿಸಿ, ಕಲಾವಿದೆಯನ್ನಾಗಿ ರೂಪಿಸಿದವರು ಗುಬ್ಬಿ ವೀರಣ್ಣನವರ ಪುತ್ರಿಯರಾದ ಸ್ವರ್ಣಮ್ಮ ಹಾಗೂ ಮಾಲತಮ್ಮನವರು (ಈಗಿನ ಹೆಸರಾಂತ ಕಲಾವಿದೆ ಬಿ. ಜಯಶ್ರೀಯವರ ತಾಯಿ). ಒಟ್ಟಿನಲ್ಲಿ ಇವರಿಂದ ಪ್ರಾರಂಭವಾದ ರಂಗ ಪಯಣ ಇಲ್ಲಿಯವರೆವಿಗೂ ಸಾಗುತ್ತಲೇ ಇದೆ. ಅವರಿಗೆ ನನ್ನ ಕೃತಜ್ಞತಾ ಪೂರ್ವಕ ನಮನಗಳು ಎನ್ನುತ್ತಾರೆ.

ನಂತರ ಅವಕಾಶಗಳು ಅರಸಿ ಬಂದವು. ಸುಬ್ಬಯ್ಯನಾಯ್ಡುರವರ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿಯಲ್ಲಿ ಅವರ ಪ್ರಸಿದ್ಧ ನಾಟಕಗಳಾದ ಹರಿಶ್ಚಂದ್ರ, ವಸಂತಸೇನೆ, ಕೃಷ್ಣಲೀಲೆ, ಬೇಡರ ಕಣ್ಣಪ್ಪ, ಭಕ್ತ ಅಂಬರೀಶ ಮತ್ತು ಭೂಕೈಲಾಸ ನಾಟಕಗಳಲ್ಲಿ ಬಾಲನಟಿಯಾಗಿ ನಟಿಸುತ್ತಿದ್ದರು. ಆಗೆಲ್ಲ ಜೊತೆಗಿದ್ದವರು ಹೆಸರಾಂತ ನಾಮಧೇಯರಾದ ಸುಬ್ಬಯ್ಯನಾಯ್ಡು ಮತ್ತು ಲಕ್ಷ್ಮೀಬಾಯಿ, ಲೀಲಾವತಿ, ರಾಮಚಂದ್ರಶಾಸ್ತ್ರಿ,  ಕೃಷ್ಣಶಾಸ್ತ್ರಿಗಳು ಮುಂತಾದವರು. ಇನ್ನು ಗುಬ್ಬಿ ಕಂಪನಿಯಲ್ಲಿದ್ದಾಗ ಡಾ. ರಾಜ್‌ ಹಾಗೂ ಅವರ ತಂದೆಯವರು, ಜಿ.ವಿ. ಅಯ್ಯರ್‌, ಬಾಲಕೃಷ್ಣ, ನರಸಿಂಹರಾಜು, ಬಿ. ಜಯಮ್ಮ ಹೀಗೆ ಇವರೆಲ್ಲ ಜೊತೆ ಇರುತ್ತಿದ್ದರು. ಇವರೊಟ್ಟಿಗೆ ಪಾತ್ರ ನಿರ್ವಹಿಸುತ್ತಿದ್ದ ನಾನೇ ಭಾಗ್ಯವಂತಳು. ನಿಜ ಅಲ್ವಮ್ಮಾ ಎಂದರು! ಇವರಿಗೆಲ್ಲ ನಾನೆಂದರೆ ಇಷ್ಟ! ಹೇಳಿಕೊಡುತ್ತಿದ್ದ ಸಂಭಾಷಣೆ, ನಟನೆ ಕ್ಷಣ ಮಾತ್ರದಲ್ಲಿ ಒಪ್ಪಿಸಿಬಿಡುತ್ತಿದ್ದೆ. ಶಹಭಾಷ್‌, ಸತ್ಯಾ ಚೂಟಿಯಿದ್ದಾಳೆ. ಮುಂದೆ ಒಳ್ಳೆ ಕಲಾವಿದೆಯಾಗುತ್ತಾಳೆ. ಹೆಸರುವಾಸಿಯಾಗು ಎಂದು ಹರಸುತ್ತಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ