ವಕೀಲರು ಮ್ಯಾಜಿಸ್ಟ್ರೇಟರ ಮುಂದೆ ಫೈಲ್ ಇರಿಸುತ್ತಾ ಹೇಳಿದರು, ``ಸರ್, ಇದರಲ್ಲಿ ನನ್ನ ಕಕ್ಷೀದಾರರು ನಿರ್ದೋಷಿ ಎಂದು ಸಾಬೀತುಪಡಿಸುವ 8-10 ಸಾಕ್ಷಿಗಳಿವೆ... ದಯವಿಟ್ಟು ಪರಿಶೀಲಿಸಬೇಕು,'' ಎಂದ.
ಅವರು ಫೈಲ್ ತೆರೆದು ನೋಡಿದಾಗ, 500/ ರೂ.ಗಳ ಹೊಚ್ಚ ಹೊಸ 10 ನೋಟುಗಳಿದ್ದವು. ``ಸಾಕ್ಷಿಗಳೇನೋ ಸರಿ, ಆದರೆ ಇವಿಷ್ಟು ಸಾಕಾಗುವುದಿಲ್ಲ. ಇನ್ನೂ 8-10 ಇದ್ದರೆ ಮಾತ್ರ ನಿಮ್ಮ ಕಕ್ಷೀದಾರರ ನಿರ್ದೋಷಿತ್ವ ಸಾಬೀತಾಗುತ್ತದೆ,'' ಎನ್ನುವುದೇ?
ಸುಮಂತನಿಗೆ ತನ್ನ ನಾಯಿ ಮಾರಬೇಕಿತ್ತು. ಅವನು ತನ್ನ ಎಲ್ಲಾ ಗೆಳೆಯರಿಗೂ sms ಕಳುಹಿಸಿದ. `ನಿಮ್ಮಲ್ಲಿ ಯಾರಿಗೆ ಯಾವಾಗ ನಾಯಿ, ಬೇಕಾದರೂ ಕೂಡಲೇ ನನ್ನನ್ನು ನೆನಪಿಸಿಕೊಳ್ಳಿ.'
ಪತ್ರಕರ್ತರನ್ನು ನೋಡುತ್ತಲೇ ಮಂತ್ರಿ ಮಹೋದಯರ ಜವಾನ ಹೇಳಿದ, ``ಮಂತ್ರಿ ಸಾಹೇಬರ ಅಂಗೈನಲ್ಲಿ ದೊಡ್ಡ ಗಾಯ ಆಗಿದೆ. ಇಂದು ಅವರು ನಿಮ್ಮೊಂದಿಗೆ ಮಾತುಕಥೆಗೆ ಕೂರುವುದು ಕಷ್ಟ... ತಾವಿನ್ನೂ....''
ಆಗ ಪತ್ರಕರ್ತರು ತಕ್ಷಣ ಹೇಳಿದರು, ``ನಾವು ಅವರೊಂದಿಗೆ ಮಾತನಾಡುತ್ತಾ ಸಂದರ್ಶನ ತೆಗೆದುಕೊಳ್ಳಬೇಕಷ್ಟೇ, ಅದು ಬಿಟ್ಟು ಅವರೆದುರು ಕೂತು ಪಂಜಾ ಆಡಬೇಕೇ?''
ಭಾರತದ ಸ್ವಚ್ಛತಾ ಅಭಿಯಾನದ ಕುರಿತು ನೆನಪಿಸಿಕೊಂಡ ಮಂತ್ರಿಯೊಬ್ಬರು ಹಾದಿಬೀದಿ ಗಮನಿಸುತ್ತಾ ನಗರಪಾಲಿಕೆಯ ಸಿಬ್ಬಂದಿಯನ್ನು ವಿಚಾರಿಸಿದರು, ``ಇಂದು ರಸ್ತೆ ಪೂರ್ತಿ ಯಾಕೆ ಅಷ್ಟೊಂದು ಕಾಗದ ಹರಡಿದೆ? ಏನೂ ಕ್ಲೀನ್ಮಾಡಲಿಲ್ಲವೇ?''
ಸಿಬ್ಬಂದಿ ಥಟ್ ಅಂತ ವಿವರಣೆ ನೀಡಿದರು, ``ಸಾರ್, ಇದು ನಮ್ಮ ಪ್ರಧಾನಮಂತ್ರಿಯವರು ಜನತೆಗೆ ನಿಮ್ಮ ಪರಿಸರ ಸ್ವಚ್ಛವಾಗಿಡಿ ಎಂದು ಸಂದೇಶ ನೀಡಿದ ಕರಪತ್ರಗಳು ಹರಡಿರೋದಷ್ಟೆ. ಅದು ಬೇರೇನೂ ಗಲೀಜಲ್ಲ ಬಿಡಿ.....''
ಟೀಚರ್ ಹೊಸ ರ್ಷದ ಮೊದಲ ದಿನ ವಿದ್ಯಾರ್ಥಿಗಳಿಗೆ ಹೇಳಿದರು, ``ನಿಮ್ಮಲ್ಲಿ ಯಾರು ದೊಡ್ಡ ಸೋಮಾರಿ ಸ್ವಲ್ಪ ಎದ್ದು ನಿಲ್ಲಿ. ಅವರಿಗೆ ಬಹುಮಾನ ಸಿಗಲಿದೆ....''
ಅವರ ಮಾತು ಕೇಳಿ ಎಲ್ಲರೂ ಎದ್ದು ನಿಂತರು. ಆದರೆ ಗುಂಡ ಮಾತ್ರ ಇನ್ನೂ ಹಾಗೇ ಕುಳಿತಿದ್ದ.
ಟೀಚರ್ : ಗುಂಡ ನೀನೇ ಇಂದಿನ ವಿಜೇತ! ಎಲ್ಲರಿಗಿಂತ ದೊಡ್ಡ ಸೋಮಾರಿ ಎಂದು ಎದ್ದು ನಿಲ್ಲದೆ ನಿರೂಪಿಸಿರುವೆ. ಈ ಬಹುಮಾನ ತಗೋ ಬಾ...
ಗುಂಡ (ಆಕಳಿಸುತ್ತಾ) : ಅಯ್ಯೋ... ಅದನ್ನು ಯಾರ ಕೈಲಾದ್ರೂ ನನ್ನ ಡೆಸ್ಕಿಗೆ ಕಳುಹಿಸಿ ಟೀಚರ್.....
ಕ್ಲಾಸಿನಲ್ಲಿ ಟೀಚರ್ ಪಾಠ ಮಾಡುತ್ತಾ, ಅದನ್ನು ವಿವರಿಸುವಾಗ ಇಡೀ ತರಗತಿಯಲ್ಲಿ ಓಡಾಡುತ್ತಾ ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆ ಎಂದು ಗಮನಿಸುತ್ತಿದ್ದರು. ಗುಂಡನ ಬಳಿ ಬಂದು ನೋಡುತ್ತಾರೆ, ಅವನಿನ್ನೂ ಮೊದಲನೇ ಪಾಠವನ್ನೇ ಓದುತ್ತಿದ್ದ.
ಟೀಚರ್ : ಇದೇನೋ ಗುಂಡ, ನಾನು 5ನೇ ಪಾಠ ಮಾಡ್ತಿದ್ದೀನಿ, ನೀನಿನ್ನೂ ಮೊದಲನೇ ಪಾಠದಲ್ಲೇ ಕೂತಿದ್ದಿ?
ಗುಂಡ : ಏನು ಮಾಡಲಿ ಟೀಚರ್, ನಾನಿದನ್ನು ಮುಗಿಸೋಣ ಅಂತ ಕೊನೆಯ ಪುಟಕ್ಕೆ ಹೋಗ್ತೀನಿ, ಅದರಲ್ಲಿ `ರೀಡ್ ಅಗೇನ್' ಅಂತ ಸೂಚನೆ ಇದೆ.
ಪ್ರಕಾಶ್ ಹಳ್ಳಿಯಲ್ಲಿ ಶಾಲೆ ಮುಗಿಸಿ ಬೆಂಗಳೂರಿನ ಕಾಲೇಜಿನಲ್ಲಿ ಓದಲು ಸೇರಿ ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದ. ಅವನ ಸಹಪಾಠಿ ಸತೀಶ್ ಪ್ರಕಾಶ್ನನ್ನು ಹುಡುಕುತ್ತಾ ಅವನ ಹಾಸ್ಟೆಲ್ಗೇ ಬಂದ.
ಪ್ರಕಾಶ್ : ಇದೇನಪ್ಪ ಈ ಮಹಾನಗರದ್ದು ವಿಚಿತ್ರ ಕಾಯಿಲೆ! 1-2 ದಿನ ಪರಿಚಿತರಾದವರು ಸಹ ಮಾರನೇ ದಿನವೇ ರೂಂ ಹುಡುಕಿಕೊಂಡು ಬಂದು 100/ ರೂ. ಸಾಲ ಕೊಡು ಅಂತಾರೆ....