ದೂರು ನೀಡುವುದು ಮೌಲಿಕ ಹಕ್ಕು

ಮನೆಯ ಸುತ್ತಮುತ್ತಲಿನ ವಾತಾವರಣ ವಾಣಿಜ್ಯೀಕರಣದಿಂದಾಗಿ ದಿನೇದಿನೇ ಕೆಡುತ್ತಿದ್ದರೆ, ಮಹಿಳೆಯರು ಹಾಗೂ ಕುಟುಂಬದವರಿಗೆ ಏನು ಹಕ್ಕು ಇರುತ್ತದೆ ಹಾಗೂ ಪೊಲೀಸ್‌ನವರ ಜವಾಬ್ದಾರಿಗಳೇನು ಎಂಬುದು, ದೆಹಲಿಯ ಸಮೀಪದ ಖಿಡಕೀ ಗ್ರಾಮದ ಆಫ್ರಿಕಾದ ಯುವಜನತೆ ಹಾಗೂ ಆಮ್ ಆದ್ಮಿ ಪಾರ್ಟಿಯ ಹೊಸ ಮಂತ್ರಿ ಸೋಮನಾಥ್‌ ಭಾರತಿ ಪೊಲೀಸರೊಂದಿಗೆ ನಡೆದುಕೊಂಡ ರೀತಿಯಿಂದ ಏನೂ ಸ್ಪಷ್ಟವಾಗುವುದಿಲ್ಲ. ಅವರು ಅಲ್ಲಿನ ಸ್ಥಳೀಕರ ದೂರು ಕೇಳಲಿಕ್ಕಾಗಿ ಖಿಡಕೀ ಕ್ಷೇತ್ರಕ್ಕೆ ಹೋದರು. ಆದರೆ ಪೊಲೀಸರು, ದೆಹಲಿ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿಲ್ಲದ ಕಾರಣ, ಏನಾದರೂ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡಿದರು.

ಮುಂದೆ ಇದೇ ವಿಷಯ ದೊಡ್ಡದಾಯಿತು. ಅವರು ಪೊಲೀಸರ ವಿರುದ್ಧ ವಿಚಾರಣೆ ನಡೆಯಲೇಬೇಕೆಂದು ಪಟ್ಟುಹಿಡಿದರು. ಆಗ ಮುಖ್ಯಮಂತ್ರಿ ಅರವಿಂಜ್‌ ಕೇಜ್ರಿವಾಲ್ ಸಹ ಅದೇ ಬೇಡಿಕೆಯನ್ನು ಮುಂದಿಟ್ಟರು. ಆದರೆ ಕೇಂದ್ರೀಯ ಗೃಹಮಂತ್ರಿ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಆಗ ಕೇಜ್ರಿವಾಲ್ ಕೊರೆಯುವ ರಾತ್ರಿಯ ಥಂಡಿಯಲ್ಲಿ ಸತತ 2 ದಿನ ಧರಣಿ ಕೂರಬೇಕಾಯಿತು. ಅರೆ ಮನಸ್ಸಿನಿಂದ ಗೃಹಮಂತ್ರಿ ಕೆಲವು ಮಾತುಗಳನ್ನು ಒಪ್ಪಿದರು. ಆದರೆ, ತಮ್ಮ ಪ್ರದೇಶಕ್ಕೆ ಬೇಜವಾಬ್ದಾರಿಯ ಜನ ನುಗ್ಗಿದಾಗ, ಅಂಥವರನ್ನು ಎದುರಿಸಲು ಕುಟುಂಬದ ಮಂದಿಗೆ ಯಾವ ಹಕ್ಕಿದೆ ಎಂಬುದು ಒಂದಿಷ್ಟೂ ಸ್ಪಷ್ಟವಾಗಲಿಲ್ಲ.

ಮನೆ ಎಂಬುದು ಸುರಕ್ಷಾ ಕವಚ ಇದ್ದಂತೆ, ಜೊತೆಗೆ ಸುತ್ತಮುತ್ತ ವಾಸಿಸುವ ಜನ ಸಹ ತಮ್ಮ ಸುರಕ್ಷತೆಗೆ ಇರುತ್ತಾರೆ ಎಂಬ ಭಾವನೆ ಇರುತ್ತದೆ. ಹಾಗಿದ್ದರೇನೇ ನಗರ ಜೀವನ ಕ್ಷೇಮಕರ ಎನಿಸುವುದು. ಇಲ್ಲದಿದ್ದರೆ ಕಾಡುವಾಸಿಗಳಂತೆ ಬೇರೆ ಬೇರೆ ಇರಬಹುದಿತ್ತಲ್ಲ? ಆದರೆ ನೆರೆಹೊರೆಯ ಸಂಬಂಧ ಕೆಟ್ಟರೆ, ಮನೆಯಿಂದ ಹೊರಗೆ ಹೊರಡುವುದೇ ಕಷ್ಟಕರವಾದರೆ, ಆಗ ದೂರು ನೀಡುವಿಕೆ ಅನಿವಾರ್ಯವಾಗುತ್ತದೆ.

ನಗರದ ಮುಕ್ತ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಮೊದಲಿನಿಂದಲೇ ಅನುಮತಿ ಇದ್ದು, ಅದು ಕ್ರಮೇಣ ಹೆಚ್ಚಲಿ ಬಿಡಲಿ, ಅಲ್ಲಿನ ಸ್ಥಳೀಕರಿಗೆ ಮಾತ್ರ ಅದರ ವಿರುದ್ಧ ದೂರು ನೀಡುವ ಹಕ್ಕೇ ಇಲ್ಲ. ಆದರೆ ಮುಕ್ತ ಪ್ರದೇಶಗಳನ್ನು ವಾಣಿಜ್ಯ ಚಟುವಟಿಕೆಗಳಿಗಾಗಿ ಮನೆ ಮಾಲೀಕರ ಮರ್ಜಿ ಮೇರೆಗೆ ಸತತ ಬಿಟ್ಟುಬಿಟ್ಟರೆ, ಇದು ಖಂಡಿತಾ ತಪ್ಪಾದೀತು. ಮುಕ್ತ ಪ್ರದೇಶಗಳಲ್ಲಿ ಮನೆ, ಗಲ್ಲಿ, ಉದ್ಯಾನ ಇತ್ಯಾದಿ ಸುರಕ್ಷಿತ ಎನಿಸಿವೆ. ಅಲ್ಲಿ ಕಸ ಸಂಗ್ರಹಣೆಯೂ ಕಡಿಮೆ. ಹೀಗಾಗಿ ಅಪರಿಚಿತರು ನುಗ್ಗುವುದು ಕಡಿಮೆ. ಅಲ್ಲಿ ಸ್ಕೂಟರ್‌, ಕಾರುಗಳು ಹೆಚ್ಚಿದರೂ ಸಹ ಪರಸ್ಪರ ಸಹಕಾರ ಇರುತ್ತದೆ. ಆದರೆ ಇಂಥ ಪ್ರದೇಶಗಳಲ್ಲಿ ಅಂಗಡಿ, ಆಫೀಸ್‌, ಹೋಟೆಲ್, ಗೆಸ್ಟ್ ಹೌಸ್‌, ನರ್ಸಿಂಗ್‌ ಹೋಮ್ ಗಳು ಹೆಚ್ಚತೊಡಗಿದರೆ ಸುತ್ತಮುತ್ತ ವಾಸಿಸುವವರ ಕಷ್ಟ ತಪ್ಪಿದ್ದಲ್ಲ. ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಯ ಸಮಸ್ಯೆ ಒಂದೆಡೆಯಾದರೆ, ವಿನಾಕಾರಣ ಬಂದುಹೋಗುವ ಅಸಂಖ್ಯಾತ ಜನರು ಅವರ ವಾಹನಗಳ ಮಾಲಿನ್ಯ ಸಹಿಸಬೇಕಾದ ಕರ್ಮ ಉಂಟಾಗುತ್ತದೆ. ವಿದ್ಯುತ್‌ ತಂತಿಗಳು ಕಡಿಮೆ ಎನಿಸುತ್ತವೆ, ಜನರೇಟರ್‌ ತಂತಾನೇ ಹೆಚ್ಚುತ್ತದೆ. ಸುತ್ತಮುತ್ತಲ ಹಸಿರು ವಾತಾವರಣ ಮಂಗಮಾಯ! ರಸ್ತೆಗಳಲ್ಲಿ ಎಲ್ಲೆಲ್ಲೂ ಸಣ್ಣಪುಟ್ಟ ಅಂಗಡಿಗಳು ಏಳುತ್ತವೆ, ಪಾರ್ಕಿಂಗ್‌ ಸಮಸ್ಯೆ ಕೇಳುವುದೇ ಬೇಡ! ಖಿಡಕೀ ಗ್ರಾಮದಲ್ಲಿ ಆಗಿದ್ದೂ ಇದೇ ಸಮಸ್ಯೆ. ಅಲ್ಲಿನ ಮನೆ ಮಾಲೀಕರು ಸ್ಥಳೀಕರಿಗೆ ಬದಲಾಗಿ ಆಫ್ರಿಕಾ ಮೂಲದ ಮಂದಿಗೆ ದುಬಾರಿ ದರದಲ್ಲಿ ಬಾಡಿಗೆಗೆ ಮನೆ ನೀಡಲಾರಂಭಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ