ಮಿನಿಕಥೆ  - ಹರಿಣಿ ಸಿದ್ಧಾರ್ಥ 

ಮುಂಬೈನ ದಟ್ಟ ಟ್ರಾಫಿಕ್‌ ಮಧ್ಯೆ ಎಂಟು ವರ್ಷದ ಬಾಲಕಿಯೊಬ್ಬಳು ತನಗೆ ಎಷ್ಟು ಸಾಧ್ಯವೋ ಅಷ್ಟು ವೇಗದಿಂದ ಓಡಿ ಬರುತ್ತಿದ್ದಳು. ಹಾಗೆ ಬರುವಾಗಲೇ ದಾರಿಯಲ್ಲಿ ನಡೆದು ಬರುತ್ತಿದ್ದ ವೃದ್ಧರೊಬ್ಬರ ಕೈ ತಗುಲಿ ಬಿದ್ದು ಬಿಟ್ಟಳು. ಅವರು ಆ ಪುಟಾಣಿ ಹುಡುಗಿಯನ್ನು ಮೆಲ್ಲನೆ ಎತ್ತಿ ನಿಲ್ಲಿಸಿ,

``ಏಕೆ ಓಡಿ ಬಂದೆ?'' ಎಂದು ಕೇಳಿದರು.

ಅವಳು ಗಾಬರಿಯಿಂದ ತನ್ನ ಹಿಂದೆ ಕೈ ತೋರಿಸಿದಳು. ಅಲ್ಲಿ ಎರಡು ನಾಯಿಗಳು ಅಟ್ಟಿಸಿಕೊಂಡು ಬರುತ್ತಿದ್ದವು. ಆ ವೃದ್ಧರು ತಮ್ಮ ಕೋಲಿನಿಂದ ಅವುಗಳನ್ನು ಹೆದರಿಸಿ ಓಡಿಸಿದರು.

ಆ ಪುಟ್ಟ ಹುಡುಗಿ ತನ್ನ ಬ್ಯಾಗ್‌ನಿಂದ ನೀರಿನ ಬಾಟಲಿ ತೆಗೆದು ಕುಡಿದು ಸುಧಾರಿಸಿಕೊಂಡಳು.

``ಈಗ ಸರಿಹೋಯಿತಾ....?'' ಎಂದು ವೃದ್ಧರು ಉಪಚರಿಸುವಂತೆ ಕೇಳಿದರು.

``ಎಸ್‌ ಅಂಕಲ್.....! ನಾಯಿಗಳು ಅಟ್ಟಿಸಿಕೊಂಡು ಬಂದದ್ದರಿಂದ ನನಗೆ ಭಯವಾಗಿತ್ತು....'' ಎಂದಳು ಹುಡುಗಿ.

``ಸರಿ... ನೀನೀಗ ಎಲ್ಲಿಗೆ ಹೊರಟಿದ್ದೀಯಾ?''

``ಅಂಕಲ್, ನಾನು ಸ್ಕೂಲ್‌ಗೆ ಹೋಗಬೇಕು. ಆದರೆ ಈಗಾಗಲೇ ಶಾಲೆಯ ಸಮಯ ಮೀರಿದೆ. ನನ್ನನ್ನು ಮನೆಗೆ ಬಿಡುತ್ತೀರಾ ಪ್ಲೀಸ್‌....''

ವೃದ್ಧರು ಅವಳನ್ನು ಮನೆಗೆ ಕರೆದೊಯ್ದು ಬಿಟ್ಟರು. ದಾರಿಯಲ್ಲಿ ಸಾಗುವಾಗ ಇಬ್ಬರೂ ಪರಸ್ಪರ ಪರಿಚಯಿಸಿಕೊಂಡರು. ಆ ಪುಟಾಣಿಯ ಹೆಸರು ಉಷಾ. ಥೆರೇಸಾ ಸ್ಕೂಲ್ ‌ನಲ್ಲಿ ಮೂರನೇ ತರಗತಿ ಓದುತ್ತಿದ್ದಳು. ಅವಳ ಪೋಷಕರು ನಗರದ ರೈಲ್ವೆ ನಿಲ್ದಾಣದಲ್ಲಿ ಟೀ ಸ್ಟಾಲ್ ಇಟ್ಟುಕೊಂಡಿದ್ದರು.

ತಮಗಿದ್ದ ಏಕೈಕ ಮಗುವನ್ನು ಚೆನ್ನಾಗಿ ಓದಿಸಬೇಕೆನ್ನುವುದು ಅವರ ಇರಾದೆಯಾಗಿತ್ತು. ಹಾಗೆಂದೇ ಒಳ್ಳೆಯ ಶಾಲೆಯಲ್ಲಿ ಕಲಿಯಲೆಂದು ಥೆರೇಸಾ ಸ್ಕೂಲ್‌ಗೆ ಸೇರಿಸಿದ್ದರು. ಅವರಿಬ್ಬರೂ ಬೆಳಗ್ಗೆಯೇ ಮನೆ ಬಿಟ್ಟು ಅಂಗಡಿಗೆ ಹೋಗುತ್ತಿದ್ದರು. ಶಾಲೆಗೆ ಹೋದ ಉಷಾ ರಾತ್ರಿ ತಂದೆ ತಾಯಿ ಬರುವವರೆಗೂ ಒಬ್ಬಳೇ ಇರುತ್ತಿದ್ದಳು. ಅವಳಿಗೆ ನಿಧಾನವಾಗಿ ಒಂಟಿತನ ಕಾಡಲಾರಂಭಿಸಿತ್ತು. ಶಾಲೆಯಲ್ಲಿನ ಸ್ನೇಹಿತರೊಂದಿಗೆ ಆಡಿಕೊಂಡಿರುತ್ತಿದ್ದ ಅವಳಿಗೆ ಮನೆಗೆ ಬರುವುದೇ ಬೇಸರವಾಗುತ್ತಿತ್ತು.

ಆದರೆ ಇಂದು ಅವಳಿಗೆ ದೇಹ ಮಾತ್ರ ನೋಯುತ್ತಿರಲಿಲ್ಲ, ಮನಸ್ಸಿನಲ್ಲಿಯೂ ಭಯ ಕಾಡುತ್ತಿತ್ತು.

ಇತ್ತ ಆ ವೃದ್ಧರ ಕುರಿತು ಹೇಳುವುದಾದರೆ ಅವರ ಹೆಸರು ಚಂದ್ರಶೇಖರಯ್ಯ. ವಯಸ್ಸು ಎಪ್ಪತ್ತರ ಆಸುಪಾಸು. ಅವರ ಪತ್ನಿ ಇಹಲೋಕ ತ್ಯಜಿಸಿದ್ದರಿಂದ ಮನೆಯಲ್ಲಿ ಅವರೊಬ್ಬರೇ ಇದ್ದರು. ಇದರಿಂದ ಕೆಲವು ಬಾರಿ ಖಿನ್ನತೆಗೆ ಒಳಗಾದವರಂತೆ ಕಾಣುತ್ತಿದ್ದರು. ವೈದ್ಯರ ಬಳಿಗೆ ಹೋದಾಗೆಲ್ಲಾ, ನೀವು ಆದಷ್ಟು ಹೊರಗಡೆ ಸುತ್ತಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸ್ನೇಹಿತರೊಂದಿಗೆ ಬೆರೆತರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಸಲಹೆ ನೀಡುತ್ತಿದ್ದರು. ಆದ್ದರಿಂದ ಚಂದ್ರಶೇಖರಯ್ಯ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ವಾಕಿಂಗ್‌ ನೆಪದಲ್ಲಿ ಹೊರಬರುತ್ತಿದ್ದರು. ಸಮೀಪದಲ್ಲಿದ್ದ ಪಾರ್ಕ್‌ನಲ್ಲಿ ಕೆಲವು ಸಮಯ ಕಳೆಯುತ್ತಿದ್ದರೂ ಕೂಡ ಅವರಲ್ಲಿದ್ದ ಖಿನ್ನತೆ ಸಂಪೂರ್ಣವಾಗಿ ದೂರವಾಗಿರಲಿಲ್ಲ.

ಅವರಿಗೆ ಯಾರೊಂದಿಗಾದರೂ ಸ್ನೇಹ ಬೆಳೆಸಬೇಕೆನಿಸುತ್ತಿತ್ತು. ಆದರೆ ಯಾರೂ ಸರಿಯಾದ ವ್ಯಕ್ತಿ ಸಿಕ್ಕಿರಲಿಲ್ಲ. ಇಂತಹುದರಲ್ಲಿ ಈ ಪುಟ್ಟ ಹುಡುಗಿ ಉಷಾಳ ಪರಿಚಯ ಅವರಿಗೆ ಸಂತಸವನ್ನು ಉಂಟುಮಾಡಿತ್ತು.

ಉಷಾಳಲ್ಲಿದ್ದ ಮುಗ್ಧತೆ, ಕಣ್ಣಿನಲ್ಲಿದ್ದ ಚೆಂದದ ಕನಸು, ಮುದ್ದಾದ ಮಾತು, ನಡೆಯುವ ಶೈಲಿ ಎಲ್ಲ ಚಂದ್ರಶೇಖರಯ್ಯನವರಿಗೆ ಬಹಳ ಹಿಡಿಸಿತ್ತು. ಅಂದಿನಿಂದ ಅವರು ಪ್ರತಿದಿನ ಅವಳ ಶಾಲೆಗೆ ಹೋಗಿ ಅವಳನ್ನು ಮನೆಗೆ ಬಿಟ್ಟು ಬರುತ್ತಿದ್ದರು. ಆ ಸಮಯದಲ್ಲಿ ಉಷಾ ಅವರಿಗೆ ಶಾಲೆಯಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಘಟನೆಗಳನ್ನು, ಟೀಚರ್‌ ಹೇಳುತ್ತಿದ್ದ ಕಥೆಯನ್ನೂ ಚಾಚೂ ತಪ್ಪದೆ ಹೇಳುತ್ತಿದ್ದಳು. ಇದು ಅವರಿಗೆ ಖುಷಿ ನೀಡುತ್ತಿತ್ತು. ಇದರಿಂದ ಅವರಿಬ್ಬರಲ್ಲಿ ಆತ್ಮೀಯ ಒಡನಾಟ ಬೆಳೆಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ