ನೀಳ್ಗಥೆ - ಚಂದ್ರಿಕಾ ಸುಧೀಂದ್ರ 

ಮಧ್ಯಮ ವರ್ಗದ ಹಿರಿಮಗಳಾಗಿ ಮೇಘನಾ ದುಡಿದು ತಾಯಿ ತಂದೆಗೆ ನೆರವಾಗಲು ಬಯಸಿದಳು.  ಆದರೆ ಅವರು ಹೇಗಾದರೂ ಮಗಳ ಮದುವೆಯನ್ನು ಮುಗಿಸಬೇಕೆಂದು ಅವಳಿಗೆ ಅನುರೂಪನಲ್ಲದ ವರನೊಂದಿಗೆ ಮದುವೆ ನಿಶ್ಚಯಿಸಿದರು. ಮುಂದೆ ಅವಳ ಬದುಕು? ಮತ್ತೆ ಒಬ್ಬಂಟಿಯಾದ ಅವಳ ಜೀವನದಲ್ಲಿ ಗೌರವ್ ಕಾಣಿಸಿದ್ದೇಕೆ? ಅವಳ ಬದುಕಲ್ಲಿ ಭರವಸೆಯ ಬೆಳಕು ಮೂಡಿತೇ...?

ಮೇಘನಾ ಆಫೀಸಿಗೆ ಹೊರಡಲು ಆತುರಾತುರವಾಗಿ ವ್ಯಾನಿಟಿ ಬ್ಯಾಗ್‌ಗೆ ಊಟದ ಡಬ್ಬಿ ಹಾಕಿಕೊಂಡು ಸಿದ್ಧವಾಗುತ್ತಿದ್ದಳು. ತನ್ನ ಮಮತೆಯ ಕುಡಿ 6 ತಿಂಗಳ ಅನಘಾಳನ್ನು ಮನೆ ಓನರ್‌ ಬಳಿ ಬಿಟ್ಟು ಹೋಗಬೇಕಲ್ಲ ಎಂದು ಕಣ್ಣು ತುಂಬಿ ಬಂದರೂ ವಿಧಿ ಇಲ್ಲದೆ ಭಾರವಾದ ಮನಸ್ಸಿನಿಂದ ಬಸ್‌ ಹತ್ತಿದಳು. ಸಮಯಕ್ಕೆ ಸರಿಯಾಗಿ ಬಸ್‌ ಬಂದು ಸೀಟು ಸಿಕ್ಕಿದ ಸಮಾಧಾನದಿಂದ ಮೇಘನಾ ಕರವಸ್ತ್ರದಿಂದ ಮುಖದ ಬೆವರೊರೆಸಿಕೊಂಡು, ಸೀಟಿಗೊರಗಿ ಕಣ್ಣು ಮುಚ್ಚಿದಳು. ಅವಳಿಗೆ ತನ್ನ ಗತ ಜೀವನದ ಎಳೆಗಳು ಕಾಡಲಾರಂಭಿಸಿತು.

ಶಂಕರಮೂರ್ತಿ ಮತ್ತು ಅಂಬುಜಮ್ಮ ದಂಪತಿಗಳಿಗೆ ಮೇಘನಾ ಹಾಗೂ ಚೈತ್ರಾ ಇಬ್ಬರೇ ಹೆಣ್ಣುಮಕ್ಕಳು. ಸಣ್ಣ ಕೆಲಸದಲ್ಲಿದ್ದ ಶಂಕರಮೂರ್ತಿಗೆ ಸ್ವಂತ ಮನೆ ಇದ್ದುದರಿಂದ ಬರುತ್ತಿದ್ದ ಕಡಿಮೆ ಸಂಬಳದಲ್ಲಿ ಮಕ್ಕಳನ್ನು ಓದಿಸುತ್ತಾ, ಹೆಚ್ಚಿನ ಆಡಂಬರವಿಲ್ಲದೆ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಿದ್ದರು.

ಮೇಘನಾ ಹಿರಿಯಳಾಗಿದ್ದು, ನೋಡಲು ಮುದ್ದಾಗಿ, ಲಕ್ಷಣವಾಗಿದ್ದಳು. ಎರಡನೇ ಮಗಳು ಚೈತ್ರಾ ನೋಡಲು ಕಪ್ಪಗಿದ್ದರೂ ಆಕರ್ಷಕವಾಗಿದ್ದಳು. ಮೇಘನಾ ಸ್ವಭಾತಃ ಮಿತ ಭಾಷಿಯಾದರೆ, ಚೈತ್ರಾ ಅಷ್ಟೇ ವಾಚಾಳಿ. ಸಾಲದ್ದಕ್ಕೆ ಚಿಕ್ಕವಳೆಂದು ಮುದ್ದು. ಇದರಿಂದ ಹಠದ ಸ್ವಭಾವ ಮೈಗೂಡಿಸಿಕೊಂಡಿದ್ದಳು. ಚೈತ್ರಾ ಆಸೆಪಟ್ಟಿದ್ದನ್ನು ಕೊಡಿಸುವವರೆಗೂ ಬಿಡುತ್ತಿರಲಿಲ್ಲ. ಯಾರೊಂದಿಗೂ ಬೇಗ ಹೊಂದಿಕೊಳ್ಳುತ್ತಿರಲಿಲ್ಲ. ಆದರೆ ಮೇಘನಾ ಅಲ್ಪತೃಪ್ತಳು. ದೊಡ್ಡ ಮಗಳಾದ ಮೇಘನಾ ಎಲ್ಲದಕ್ಕೂ ಸೋಲಬೇಕಿತ್ತು. ತಂಗಿಯ ಹಠ, ಕೋಪದ ಮುಂದೆ ಸೋತು ತ್ಯಾಗ ಮಾಡಬೇಕಾಗುತ್ತಿತ್ತು. ಸಾಲದ್ದಕ್ಕೆ ಚೈತ್ರಾ, ಮೇಘನಾಳನ್ನು ನೇರ ನಿಷ್ಠುರದ ಮಾತುಗಳಿಂದ ಮೂದಲಿಸುತ್ತಿದ್ದಳು. ಅವಳು ನಿನಗಿಂತ ಚಿಕ್ಕಳು ಅವಳ ಜೊತೆ ನಿನ್ನದೇನು ಪೈಪೋಟಿ ಎಂದು ತಂದೆ, ತಾಯಿ ಇಬ್ಬರೂ ಅವಳ ಆಸೆಯನ್ನು ಚಿವುಟುತ್ತಿದ್ದರು. ಆದ್ದರಿಂದ ಮೇಘನಾ ಆಸೆಪಟ್ಟು ತನಗಾಗಿ ಏನನ್ನೂ ಕೇಳುತ್ತಿರಲಿಲ್ಲ, ತಂದೆ ತಾಯಿಯನ್ನು ಪೀಡಿಸುತ್ತಿರಲಿಲ್ಲ. ಜೊತೆಗೆ ತಾಯಿಯ ಆರೋಗ್ಯ ಆಗಾಗ್ಗೆ ಹದಗೆಡುತ್ತಿದ್ದುದರಿಂದ ಮನೆಯ ಕೆಲಸ, ತಾಯಿ ಔಷಧೋಪಚಾರವೆಲ್ಲ ಮೇಘನಾಳೇ ನೋಡಿಕೊಳ್ಳಬೇಕಾಗಿತ್ತು. ಶಾಲೆಗೆ ಹೋಗಿ ಬರುವುದರ ಜೊತೆಗೆ ಸಂಗೀತ ಕಲಿಯಲು ಹೋಗುತ್ತಿದ್ದಳು. ಅವಳು ಕಾಲೇಜು ಸೇರಿ ಗೆಳತಿಯರ ಸಲಹೆಯ ಮೇರೆಗೆ ಸಣ್ಣಪುಟ್ಟ ಟ್ರೈನಿಂಗ್‌ಗೆ ಹೋಗಿ ಅದನ್ನು ಮಾಡಿಕೊಂಡಿದ್ದಳು.

ಶಂಕರಮೂರ್ತಿ ತಾವು ಸೇವೆಯಲ್ಲಿರುವಾಗಲೇ ಇಬ್ಬರು ಹೆಣ್ಣುಮಕ್ಕಳ ವಿದ್ಯಾಭ್ಯಾಸ ಹಾಗೂ ಮದುವೆಯ ಜವಾಬ್ದಾರಿಯನ್ನು ಮುಗಿಸುವ ಸಲುವಾಗಿ ಅಲ್ಪಸ್ವಲ್ಪ ಹಣವನ್ನು ಉಳಿತಾಯ ಮಾಡುತ್ತಿದ್ದರು. ಹೀಗಾಗಿ ಮೇಘನಾ ಅಂತಿಮ ಪದವಿಗೆ ಬರುತ್ತಿದ್ದಂತೆ ವರನ ಬೇಟೆಗಾಗಿ ಪ್ರಯತ್ನಿಸುತ್ತಾ, ಅವರ ಪರಿಚಯದವರಿಗೆಲ್ಲಾ ಅವಳ ಫೋಟೋ, ಜಾತಕವನ್ನು ಕೊಟ್ಟು ಗಂಡು ನೋಡಲು ಹೇಳಿದ್ದರು.

ಮೇಘನಾಳಿಗೆ ಈಗಲೇ ಮದುವೆಯಾಗುವ ಆಸೆ ಇರಲಿಲ್ಲ. ಓದಿ ಕೆಲಸಕ್ಕೆ ಸೇರಿ ಗಂಡು ಮಕ್ಕಳಿಲ್ಲದ ತಂದೆತಾಯಿಗೆ ಸಹಾಯ ಮಾಡುವ ಅಭಿಲಾಷೆಯಿಂದ ಮದುವೆಯ ವಿಚಾರವನ್ನು ವಿರೋಧಿಸತೊಡಗಿದಳು. ಆದರೆ ಅವಳ ಮಾತಿಗೆ ಬೆಲೆ ಕೊಡದ ತಂದೆತಾಯಿ, `ನಾವು ನಿನ್ನ ಒಳ್ಳೆಯದಕ್ಕೇ ಹೇಳುವುದು. ನಿನ್ನ ಮದುವೆ ಮಾಡಿ, ಸುಧಾರಿಸಿಕೊಳ್ಳುವ ಹೊತ್ತಿಗೆ ಚೈತ್ರಾ ಮದುವೆಗೆ ಸಿದ್ಧವಾಗುತ್ತಾಳೆ. ನಾವು ನಮ್ಮ ಜವಾಬ್ದಾರಿ ಕಳೆದುಕೊಳ್ಳುವುದು ಬೇಡವಾ....? ದೊಡ್ಡವರು ಏಕೆ ಒತ್ತಾಯಿಸುತ್ತಾರೆ ಎಂದು ಅರ್ಥ ಮಾಡಿಕೋ. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಎಂಬಂತೆ ಒಳ್ಳೆ ಸಂಬಂಧ ಬಂದಾಗ ಬೇಡವೆಂದರೆ ಒಳ್ಳೆಯ ಅವಕಾಶ ಕಳೆದುಕೊಂಡಂತಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ