ಮೊದಲಿನಿಂದಲೂ ಕಷ್ಟದಲ್ಲಿಯೇ ಬೆಳೆದಿದ್ದ ರಶ್ಮಿ, ತಾನು ಬಯಸಿದ್ದನ್ನು ಪಡೆಯಲು ಆಗಲಿಲ್ಲ. ಮದುವೆಯಿಂದಲೂ ಸುಖ ಕಾಣಲಾರದೆ ಒಂಟಿಯಾದ ಅವಳು ಮುಂದೆ ತನ್ನ ಜೀವನವನ್ನು ಸಾರ್ಥಕಪಡಿಸಿಕೊಂಡದ್ದು ಹೇಗೆ.......?

ಉತ್ತಮ ಲೇಖಕರು, ಖ್ಯಾತ ವಿಮರ್ಶಕರು ಆದ ಶ್ರೀಮತಿ ರಶ್ಮಿಯರನ್ನು ಸನ್ಮಾನಿಸಲು ಸಂತೋಷವಾಗುತ್ತಿದೆ. ಇವರು ನಮ್ಮ ನಾಡಿನ ಹೆಮ್ಮೆಯ ಪುತ್ರಿ. ಇವರು ಕನ್ನಡ ನಾಡು ನುಡಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಇಂದು ಇವರಿಗೆ `ರಾಜ್ಯೋತ್ಸವ ಪ್ರಶಸ್ತಿ'ಯನ್ನು ನೀಡಿ ಗೌರವಿಸಲಾಗುತ್ತಿದೆ. ಕನ್ನಡ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕನ್ನಡಿಗರೆಲ್ಲರ ಪರವಾಗಿ ನಾನು ಇವರನ್ನು ಅಭಿನಂದಿಸುತ್ತೇನೆ. ಇವರ ಸೇವೆಯು ಕನ್ನಡ ನಾಡಿಗೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಲಭ್ಯವಾಗಲಿ ಎಂದು ಆಶಿಸುತ್ತೇನೆ, ಎಂದೆಲ್ಲಾ ಮಾನ್ಯ ಮುಖ್ಯ ಮಂತ್ರಿಗಳು ಮಾತನಾಡಿದ್ದರು.

ತನ್ನ ಮಗಳು ಒಂಟಿ ಬಾಳು ಬಾಳಬೇಕಾಯಿತಲ್ಲ ಎಂದು ಸದಾ ತಲ್ಲಣಿಸುವ ತಾಯಿ ಕೂಡ ಸಮಾರಂಭವನ್ನು ನೋಡಿ ಸಂಭ್ರಮಿಸಿದ್ದಳು. ನಿನ್ನಂಥ ಮಗಳನ್ನು ಪಡೆದದ್ದು ಸಾರ್ಥಕವಾಯಿತು, ಎಂದು ಅಪ್ಪ ಹೇಳಿದರು. ಅಭಿನಂದನೆ ತಿಳಿಸಿದ ಅಣ್ಣನಿಗೆ,  ನಾನೇನು ಸಾಧಿಸಿದ್ದರೂ ಅದು ನಿಮ್ಮೆಲ್ಲರ ಸಹಕಾರದಿಂದ ಎಂದು ವಿನಮ್ರವಾಗಿ ನುಡಿದಿದ್ದೆ.

ಸಮಾರಂಭದ ಗುಂಗಿನಲ್ಲಿಯೇ ಹಾಸಿಗೆ ಮೇಲುರುಳಿದವಳಿಗೆ ಗಂಟೆ ಹನ್ನೊಂದಾದರೂ ನಿದ್ರೆ ಬರತ್ತಿಲ್ಲ. ಎದ್ದು ಬಚ್ಚಲಿಗೆ ಹೋಗಿ ಬಂದು, ಒಂದು ಲೋಟ ನೀರು ಕುಡಿದು ಮಲಗಿದೆ. ಮನಸ್ಸು ಮೂವತ್ತಾರು ವರ್ಷಗಳ ಹಿಂದಕ್ಕೆ ಓಡಿತು. ಜುಲೈ ತಿಂಗಳ ಕೊನೆಯ ವಾರ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಫಲಿತಾಂಶ ಬಂದಿತ್ತು. ಮಾರ್ಚ್‌ ನಲ್ಲಿ ನಡೆದ ಪರೀಕ್ಷೆಯಲ್ಲಿ ಒಂದು ಸಬ್ಜೆಕ್ಟ್ ಫೇಲಾಗಿದ್ದರಿಂದ ಜುಲೈನಲ್ಲಿ ಮತ್ತೆ ಪರೀಕ್ಷೆ ಬರೆದಿದ್ದೆ. ಫಲಿತಾಂಶ ನೋಡಿ ಬಂದ ಅಣ್ಣ ಉತ್ತೀರ್ಣಳಾಗಿರುವುದಾಗಿ ತಿಳಿಸಿದ್ದ. ಆಗಲೇ ಡಿಗ್ರಿ ತರಗತಿಗಳು ಆರಂಭವಾಗಿದ್ದವು. ಪೂರಕ ಪರೀಕ್ಷೆ ತೆಗೆದುಕೊಂಡ ಅಭ್ಯರ್ಥಿಗಳಿಗೆ ಮಾತ್ರ ದಾಖಲಾತಿಗೆ ಅವಕಾಶವಿತ್ತು. ನಾಳೆಯೇ ಹೋಗಿ ಕಾಲೇಜಿಗೆ ಸೇರಬೇಕು. ಸ್ನೇಹಿತೆಯರೆಲ್ಲ ಮಹಿಳಾ ಕಾಲೇಜಿಗೆ ಸೇರಿದ್ದಾರೆ. ನಾನು ಅಲ್ಲಿಯೇ ಸೇರಿಕೊಳ್ಳಬೇಕು ಎಂದೆಲ್ಲಾ ಕನಸುಗಳ ಸಾಮ್ರಾಜ್ಯದಲ್ಲಿ ಮುಳುಗಿದ್ದವಳಿಗೆ ನಿದ್ದೆ ಬಂದಿದ್ದೆ ಗೊತ್ತಾಗಿರಲಿಲ್ಲ.

ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ತಿಂಡಿ ತಿಂದು ಹಾಸನಕ್ಕೆ ಹೊರಟೆ. ಹಳೇ ಬಸ್‌ ನಿಲ್ದಾಣದಲ್ಲಿ ಇಳಿದಾಗ ಮೊದಲಿನ ಗಲಾಟೆ ಗಡಿಬಿಡಿ ಇಲ್ಲದೆ ಶಾಂತವಾಗಿದೆ ಎನಿಸಿತು. ಅಲ್ಲೊಂದು ಇಲ್ಲೊಂದು ಹಳ್ಳಿಗೆ ಹೋಗುವ ಬಸ್ಸುಗಳು ನಿಂತಿದ್ದವು. ಸರ್ರನೆ ಬಂದು ಜನರನ್ನು ಹತ್ತಿಸಿಕೊಂಡು ಭರ್ರನೆ ಸಾಗುವ ನವಯುವತಿಯರಂತೆ ಸಿಂಗಾರಗೊಂಡ ಹೊಸ ನಗರ ಸಾರಿಗೆ ಬಸ್ಸುಗಳು, ಟಿಕೆಟ್ ಕೊಡುವ ಮಿಷನ್‌ ಕೈಲಿ ಹಿಡಿದ ಕಂಡಕ್ಟರ್‌ ಗಳು, ಕಾಫಿ ಕುಡಿಯಲೆಂದೋ, ಸಿಗರೇಟ್‌ ಸೇದಲೆಂದೋ ಅಥವಾ ಅಡಕೆ ಪುಡಿ ಅಗಿಯಲೆಂದೋ ಬಸ್ಸಿನಿಂದ ಇಳಿದು ಹೋಗಿ ಬರುವ ಡ್ರೈವರ್‌ ಗಳು, ಬಸ್‌ ಸ್ಟಾಂಡ್‌ ನಿಂದ ಹೊರಬಂದರೆ ಅಲ್ಲಲ್ಲಿ ನಿಂತು ಬೀಡಿ ಸೇದುವವರು, ಬಸ್‌ ನಿಲ್ದಾಣದಲ್ಲಿ ಬೀಡಿ ಸೇದಿದರೆ ದಂಡ ವಿಧಿಸುತ್ತಾರೆಂದು ಬಸ್‌ ನಿಲ್ದಾಣದಿಂದ ಹೊರಗೆ ಬಂದು ಬೀಡಿ ಸೇದುವವರ ಬೀಡಿ ಹೊಗೆಯನ್ನು ದಾಟಿಕೊಂಡು ಮುಂದೆ ನಡೆದೆ. ಕ್ಯಾಂಟೀನ್‌ ಗಳಿಂದ ಬರುವ ಬಜ್ಜಿ, ಬೋಂಡಾಗಳ ಪರಿಮಳವನ್ನು ಆಸ್ವಾದಿಸುತ್ತಾ ಮಹಾವೀರ ವೃತ್ತದ ಬಳಿ ಬಂದೆ. ಶಾಲಾ ಕಾಲೇಜಿನ ಹಾಗೂ ಆಫೀಸಿನ ಸಮಯವಾದ್ದರಿಂದ ಬರ್ರೋ..... ಎಂದು ಸಾಗುವ ವಾಹನಗಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ