ಕಥೆ - ಪಲ್ಲವಿ ಸುಧೀಂದ್ರ

ಎಷ್ಟೋ ದಿನಗಳಿಂದ ಒಂದೇ ವಿಷಯ ಮನದಲ್ಲಿ ಗುಂಗಿ ಹುಳುವಿನಂತೆ ಕೊರೆಯುತ್ತಿತ್ತು. ನಾವು ಮಾಡಿದ ಪಾಪಕ್ಕೆ ಇನ್ಯಾವಾಗಲೋ ಶಿಕ್ಷೆ ಎಂಬುದು ಗೊತ್ತಿಲ್ಲ. ಈ ಜನ್ಮದಲ್ಲಿ ಮಾಡಿದ ತಪ್ಪುಗಳಿಗೆ ಸಾಯುವುದಕ್ಕೆ ಮುನ್ನ ಶಿಕ್ಷೆ ಅನುಭವಿಸಲೇಬೇಕಾಗುತ್ತದೆ ಎಂಬುದು ಇದರರ್ಥ. ನಾನು ಟಿ.ವಿಯ. ರೆಗ್ಯುಲರ್‌ ಕ್ರೈಂ ಮತ್ತು ಭಕ್ತಿಪ್ರಧಾನ ಕಾರ್ಯಕ್ರಮ ನೋಡಿ ಮಾತನಾಡುತ್ತಿದ್ದೇನೆ, ಪ್ರಭಾವಿತನಾಗಿದ್ದೇನೆ ಎಂದೇನಲ್ಲ. ಧಾರ್ಮಿಕ ಗ್ರಂಥ ಓದಿ, ಪ್ರವಚನಗಳನ್ನು ಕೇಳಿಸಿಕೊಂಡು ಹೇಳುತ್ತಿರುವ ಮಾತೂ ಇದಲ್ಲ. ಯಾವುದೇ ಸ್ವಾಮೀಜಿ, ಬಾಬಾಗಳ ಬೋಧನೆಗೆ ಒಳಗಾಗಿಯೂ ಅಲ್ಲ. ಪಶ್ಚಾತ್ತಾಪದ ಭಾವನೆಯಿಂದ ಬಡಬಡಿಸುತ್ತಿದ್ದೇನೆ ಎಂದೂ ಭಾವಿಸಬೇಡಿ.

ಅಸಲಿಗೆ ವಿಷಯ ಇಷ್ಟೆ. ಇತ್ತೀಚೆಗೆ ನನ್ನ ಮಗಳು ಸ್ವಾತಿ ತನ್ನ ಸಹೋದ್ಯೋಗಿ ರಮಣ್‌ ಜೊತೆ ತುಂಬಾನೇ ಕ್ಲೋಸ್‌ ಎಂದು ಗೊತ್ತಾಯಿತು. ಎಲ್ಲಕ್ಕೂ ದೊಡ್ಡ ಚಿಂತೆ ಕಾಡಿದ್ದು ಎಂದರೆ ರಮಣ್‌ ಈಗಾಗಲೇ ವಿವಾಹಿತ ಎಂಬುದು.

ಸ್ವಾತಿ ಒಂದು ಖ್ಯಾತ ಖಾಸಗಿ ಬ್ಯಾಂಕ್‌ನಲ್ಲಿ ಮ್ಯಾನೇಜರ್‌. ಅದೇ ಬ್ಯಾಂಕಿನಲ್ಲಿ ರಮಣ್‌ ಸೀನಿಯರ್‌ ಮ್ಯಾನೇಜರ್‌. ನನ್ನ ಮಗಳು ಸ್ವಾತಿ ತನ್ನ ಕೆಲಸ ಕಾರ್ಯದಲ್ಲಿ ಬಹಳ ಶ್ರದ್ಧೆಯುಳ್ಳವಳು. ಆದರೆ ಹೋಗಿ ಹೋಗಿ ರಮಣ್‌ನಂಥ ಪ್ರೌಢ ವ್ಯಕ್ತಿಯಲ್ಲಿ ಅವಳು ವಹಿಸುತ್ತಿರುವ ಸ್ನೇಹ, ಸಲಿಗೆ ನನ್ನಲ್ಲಿ ಗಾಬರಿ ಹುಟ್ಟಿಸುತ್ತಿದೆ. ನನ್ನ ಪತ್ನಿ ಶೋಭಾ ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ನೆಲೆಸಿರುವ ನಮ್ಮ ಮಗನ ಬಳಿ ಹೋಗಿದ್ದಾಳೆ.

ಅವಳ ಅನುಪಸ್ಥಿತಿಯಲ್ಲಿ ಈ ಬೆಳವಣಿಗೆಗಳು ಇಲ್ಲಿ ಹೀಗೆ ನಡೆದಿವೆ. ಈಗ ಅವರಿಬ್ಬರಿಗೂ ಫೋನ್‌ ಮಾಡಿ ಈ ವಿಷಯವನ್ನು ಏನೆಂದು ವಿವರಿಸಲಿ? ಅವಳು ಮರಳುವಷ್ಟರಲ್ಲಿ ಈ ಪರಿಸ್ಥಿತಿಯನ್ನು ನಾನೇ ಹೇಗಾದರೂ ಸರಿದೂಗಿಸಬೇಕಿತ್ತು. ಇಂಥದೇ ಸ್ಥಿತಿಯ ಸಂಧಿಗ್ಧ ಹಿಂದೊಮ್ಮೆ ನನಗೆ ಎದುರಾಗಿತ್ತು......

ಆಗ ನನ್ನ ತರಬೇತಿ ಮುಗಿದ ನಂತರ ಮೊದಲ ಪೋಸ್ಟಿಂಗ್‌ ಮುಂಬೈನಲ್ಲೇ ಆಗಿತ್ತು. ನಮ್ಮ ಮನೆಯವರೆಲ್ಲ ಬೆಂಗಳೂರಿನಲ್ಲೇ ಇದ್ದರು. ಮನೆಯ ಬಿಸ್‌ನೆಸ್‌ಗಿಂತ ನನಗೆ ಎಂ.ಬಿ.ಎ. ದೊರಕಿಸಿಕೊಟ್ಟ ನೌಕರಿಯೇ ಪ್ರಧಾನವಾಗಿತ್ತು. ಹೀಗಾಗಿ ಮದುವೆ ಆಗಿದ್ದರೂ, ತಕ್ಷಣ ಶೋಭಾಳನ್ನು ಜೊತೆಗೆ ಕರೆದೊಯ್ಯಲಿಲ್ಲ. ಅಲ್ಲಿ ಹೋಗಿ ಮನೆ ಸರಿಪಡಿಸಿಕೊಂಡು ನಂತರ ಕರೆಸೋಣ ಎಂದುಕೊಂಡೆ. ತವರಿಗೆ ಹೋಗಿದ್ದ ಶೋಭಾ ತಾನು ಗರ್ಭವತಿ ಎಂದು ಫೋನ್‌ ಮಾಡಿದ್ದಳು. ಒಳ್ಳೆಯದಾಯಿತು, ಹೆರಿಗೆ ಆಗಿ ಮಗುವಿಗೆ 4-5 ತಿಂಗಳಾಗಲಿ, ನಂತರ ಕಾಣದ ದೇಶ ಮುಂಬೈಗೆ ಕರೆಸಿಕೊಳ್ಳುವುದೆಂದು ಸುಮ್ಮನಾದೆ. 2-3 ವರ್ಷಗಳಲ್ಲಿ ನನಗೆ ಹೇಗೂ ಬೆಂಗಳೂರಿಗೆ ವರ್ಗ ಆಗುವುದಿತ್ತು.

ಬಾಂಧ್ರಾದಲ್ಲೇ ನಾನೊಂದು ಪುಟ್ಟ ಫ್ಲಾಟ್‌ ಬುಕ್‌ ಮಾಡಿಕೊಂಡೆ. ಅಲ್ಲಿಂದ ನನ್ನ ಬ್ಯಾಂಕ್‌ ಕೇವಲ 15 ಕಿ.ಮೀ. ದೂರವಷ್ಟೆ. ಮುಂಬೈನಲ್ಲಿ ದಿನನಿತ್ಯ 30 ಕಿ.ಮೀ. ಓಡಾಟ ಏನೇನೂ ಅಲ್ಲ.

ನಮ್ಮ ಫ್ಲೋರ್‌ಗೆ ಮತ್ತೊಂದು ಹೊಸ ಪರಿವಾರ ಬಂದು ಸೇರಿತು. ಒಬ್ಬ ಹೆಂಗಸು, 3ನೇ ಕ್ಲಾಸ್‌ ಕಲಿಯುವ ಇಬ್ಬರು ಅವಳಿ ಗಂಡು ಮಕ್ಕಳು ಅಷ್ಟೇ ಇದ್ದರು. ಅದೇ ಫ್ಲಾಟ್‌ನಲ್ಲಿ ನಮ್ಮ ಬ್ಯಾಂಕಿನ ಸೀನಿಯರ್‌ ಸಹೋದ್ಯೋಗಿ ರಮೇಶ್‌ ಬಾಬು ಇದ್ದರು. ಅವರಿಂದಲೇ ನನಗೆ ಈಕೆಯ ಬಗ್ಗೆ ತಿಳಿದದ್ದು. ಮರಾಠಿಗರ ಕುಟುಂಬದ ಈಕೆ ವಿಧವೆ. ಈಕೆಯ ಪತಿ ಸಹ ನಮ್ಮ ಬ್ಯಾಂಕಿನಲ್ಲೇ ಕೆಲಸದಲ್ಲಿದ್ದರಂತೆ, ಅವರ ಕೆಲಸವನ್ನೇ ಇನ್ನೂ ಜೂನಿಯರ್‌ ಲೆವೆಲ್‌ನಲ್ಲಿ ಈಕೆಗೆ ನೀಡಲಾಗಿದೆ ಎಂದು ತಿಳಿಯಿತು. ಇಷ್ಟು ದಿನ ತನ್ನ ತವರುಮನೆಯಲ್ಲಿದ್ದವಳು ಈಗ ನೌಕರಿ ಸಿಕ್ಕ ನಂತರ ಮತ್ತೆ ಮುಂಬೈಗೆ ಮರಳಿದ್ದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ