ಜವಾಬ್ದಾರಿ ಇಲ್ಲದ ಗಂಡನೊಂದಿಗೆ ಬಾಳಲಾಗದೆ ಸೀತಾ ಅನಿವಾರ್ಯವಾಗಿ ಮಕ್ಕಳೊಂದಿಗೆ ಬೇರೆ ಇರಬೇಕಾಯಿತು. ಕಷ್ಟಪಟ್ಟು ಮಕ್ಕಳನ್ನು ಒಂದು ದಡ ಸೇರಿಸುವಷ್ಟರಲ್ಲಿ, ಬೇರಾವುದೋ ರೂಪದಲ್ಲಿ ಮತ್ತೆ ಶನಿಕಾಟ ಆರಂಭವಾಗುವುದರಲ್ಲಿತ್ತು. ಸೀತಾಳಿಗೆ ಸಮಾಜ ಕಟ್ಟಿದ ಪರಿತ್ಯಕ್ತೆಯ ಪಟ್ಟ ಎಷ್ಟು ಸರಿ.......?

``ನೋಡಿ ಅತ್ತಿಗೆ..... ನಾನು ನಿಮ್ಮ ಮೈದುನ ಅಷ್ಟೇ ಅಲ್ಲ, ಹಿತೈಷಿಯೂ ಸಹ.... ಅಣ್ಣನಿಂದ ನಿಮೆಗೆಲ್ಲಾ ಎಷ್ಟು ತೊಂದರೆ ಆಗಿದೆ ಎನ್ನುವುದು ನನಗೆ ಗೊತ್ತಿದೆ. ಆದರೆ ಒಮ್ಮೆ ಯೋಚಿಸಿ, ನೀವು ಹಠ ಹಿಡಿಯುವುದರಿಂದ ಏನಾಗಬಹುದು ಎಂದು. ನೀವು ವಿವೇಚನೆ ಇರುವವರು ಎಂದೇ ನಾನು ಅಣ್ಣನ ಮಾತುಗಳನ್ನು ನಿಮಗೆ ತಲುಪಿಸುತ್ತಿದ್ದೇನೆ. ಹಾಗಲ್ಲ ಎಂದರೆ ಇದರಲ್ಲಿ ನಮಗ್ಯಾವ ಲಾಭವೂ ಇಲ್ಲ ಅಲ್ಲವೇ.....? ಅವನೀಗ ಸುಧಾರಿಸಿದ್ದಾನೆ ಇನ್ನು ನಿಮ್ಮಿಷ್ಟ,'' ಎಂದು ಅತ್ತಿಗೆಯ ಮುಖ ನೋಡುತ್ತಾ ಅಭಿಪ್ರಾಯಕ್ಕಾಗಿ ಕಾದ ನಾರಾಯಣ.

``ನೋಡೂ..... ಇದು ಸಣ್ಣ ವಿಷಯಲ್ಲ ಹಾಗೂ ನನ್ನೊಬ್ಬಳ ನಿರ್ಧಾರವಲ್ಲ. ಶಾಂಭವಿ ಬಂದ ಮೇಲೆ ಅವಳೊಂದಿಗೆ ಮಾತನಾಡಿದ ನಂತರವಷ್ಟೇ ನಾನು ಉತ್ತರ ಕೊಡಬಲ್ಲೆ....'' ಎಂದರು ಸೀತಾ.

ಈಗ ಕೊಂಚ ಅಸಮಾಧಾನದಲ್ಲಿ ತುಸು ಧ್ವನಿ ಏರಿಸಿದ ನಾರಾಯಣ, ``ಅಲ್ಲಾ ಅತ್ತಿಗೇ.... ಇದು ಮಕ್ಕಳನ್ನು ಕೇಳುವ ವಿಷಯವೇ? ನಿಮಗೆ ನೋವಾಗಬಾರದು ಎಂದು ಇಷ್ಟು ಹೊತ್ತೂ ನಾನು ಹೇಳಿರಲಿಲ್ಲ. ಕಳೆದ ವಾರ ಕಮಲಾಳೊಂದಿಗೆ ಅಮ್ಮ ನಮ್ಮಲ್ಲಿಗೆ ಬಂದು, ವಾರವಿದ್ದು ನಿನ್ನೆಯಷ್ಟೇ ಹಿಂತಿರುಗಿದ್ದು ನಿಮಗೆ ಗೊತ್ತಾ.....?'' ಎಂದ.

ಅಚ್ಚರಿ ತುಂಬಿದ ಭಾವನೆಯಲ್ಲಿ ಸೀತಾ ಇಲ್ಲ ಎಂಬಂತೆ ತಲೆ ಅಲ್ಲಾಡಿಸಿದಾಗ, ``ಹ್ಞೂಂ ನಿಮಗಿದು ಗೊತ್ತಿರಲಿಕ್ಕಿಲ್ಲ. ನಾನೇನೋ ಅಮ್ಮ ಹಾಗೂ ಕಮಲಾಗೆ ನಿಮ್ಮಲ್ಲಿ ಒಮ್ಮೆ ಭೇಟಿ ಕೊಡಿ. ಇಲ್ಲದೇ ಹೋದರೆ, ಅತ್ತಿಗೆಗೆ ತಿಳಿದರೆ ಬೇಸರವಾಗುತ್ತದೆ ಎಂದ. ಆದರೆ ಅಮ್ಮ, ಯಜಮಾನನಿಲ್ಲದ ಮನೆ, ದೇವರಿಲ್ಲದ ಗುಡಿಯಂತೆ ಎಂದು ನಿರಾಕರಿಸಿದರು. ಅವರ ಪ್ರೀತಿಯ ಹಿರಿ ಸೊಸೆ ನೀವಾಗಿದ್ದರೂ, ಅವರದೇ ಈ ಅಭಿಪ್ರಾಯ ಎಂದರೆ, ಮಿಕ್ಕವರು ನಿಮ್ಮ ಬಗ್ಗೆ ಏನು ಮಾತಾಡಿಯಾರು.... ಎಂದು ಯೋಚಿಸಬೇಕಲ್ಲವೇ....?''  ಎಂದು ಹೇಳಿ ಮಾರ್ಮಿಕವಾಗಿ ಸೀತಾಳನ್ನು ನೋಡುತ್ತಾ ಕುಳಿತಾಗ, ಅವಳ ದುಃಖದ ಕಟ್ಟೆ ಒಡೆಯಲಾರಂಭಿಸಿತು.

ಈಗೇನು ಮಾಡಲಿ? ಹೇಗಿದ್ದ ನನ್ನ ಬಾಳು ಹೇಗಾಗಿ ಹೋಯಿತು. ಅತ್ತೆಯ ಅಚ್ಚುಮೆಚ್ಚಿನ ಹಿರಿ ಸೊಸೆ, ನಾದಿನಿ ಕಮಲಾಳ ಪ್ರೀತಿಯ ಅತ್ತಿಗೆ ನಾನು ಎಂಬುದು ಈಗ ಇತಿಹಾಸವಾಗುತ್ತಾ ಇದೆಯೇ...? ತನ್ನದು ಹಾಗಿರಲಿ, ತನ್ನ ನಿರ್ಧಾರ ತಪ್ಪಾದರೆ, ಮಕ್ಕಳಿಗೆ ಅದರಲ್ಲೂ ಮದುವೆಗೆ ಬಂದ ಮಗಳು ಶಾಂಭವಿಗೆ ಮುಳುವಾದರೆ? ತೊಳಲಾಟ ಶುರುವಾಗಿ, ಕಣ್ಣೀರು ಒರೆಸಿಕೊಳ್ಳುತ್ತಿದ್ದಾಗ ಸ್ಪಷ್ಟ ಧ್ವನಿಯಲ್ಲಿ ಬಂದಿತ್ತು ಉತ್ತರ.

``ಜನ ಏನನ್ನುತ್ತಾರೆ ಎಂದು ಕೇಳಿದಿರಲ್ಲವೇ ಚಿಕ್ಕಪ್ಪಾ.... ಪರಿತ್ಯಕ್ತೆ ಎನ್ನುತ್ತಾರೆ, ಇನ್ನೂ ನಿಮ್ಮದೇ ಭಾಷೆಯಲ್ಲಿ ಹೇಳುವುದಾದರೆ ಗಂಡ ಬಿಟ್ಟವಳು ಅನ್ನುತ್ತಾರೆ ಎಂದು ಹೇಳಲು ನಿಮಗೆ ಕಷ್ಟವಾಗಬಹುದೆಂದು ನಾನೇ ಹೇಳುತ್ತೇನೆ. ಅಂದಹಾಗೆ, ಏನಂದಿರಿ.....? ದೇವರಿಲ್ಲದ ಗುಡಿಯಂತೆ ಯಜಮಾನನಿಲ್ಲದ ಮನೆ ಅಂದಿರಲ್ಲವೇ.....? ನಿಮ್ಮ ಅಣ್ಣ ಯಜಮಾನರಂತಿದ್ದರೆ, ಹಾಗೆ ಅವರನ್ನು ಇರಲು ಕೆಲವರು ಬಿಟ್ಟಿದ್ದರೆ, ಇಂದು ನೀವು ಈ ಮಾತನ್ನು ಆಡುತ್ತಿರಲಿಲ್ಲ ಅಲ್ವಾ.....?'' ಎಂದ ಶಾಂಭವಿಯ ಕಡೆಯ ಮಾತು ಮೊನಚಾಗಿಯೇ ಬಂದು ನಾರಾಯಣನನ್ನು ಚುಚ್ಚಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ