ಕಥೆ -  ದೀಪಾ ಶರಣ್‌ 

ವಿವಾಹವಾಗಿ, 1 ತಿಂಗಳು ಕಳೆದದ್ದು ಶೋಭಿನಿಗೆ ಅರಿವಾಗಲೇ ಇಲ್ಲ. ಬೆಂಗಳೂರಿನ ಹೆಸರಾಂತ, ಶ್ರೀಮಂತ, ಕುಲೀನ ಮನೆತನದ ಸೊಸೆಯಾಗಿ ಬಂದುದಕ್ಕೆ ಅವಳಿಗೆ ಹೆಮ್ಮೆ ಎನಿಸಿತ್ತು. ಸಮಾರಂಭವೊಂದರಲ್ಲಿ ಅವಳನ್ನು ನೋಡಿ ಮೆಚ್ಚಿದ ಗೋಪಿನಾಥ್‌ ಮತ್ತು ಉಮಾ ಅವಳನ್ನು ಸೊಸೆಯಾಗಿ ತಂದುಕೊಳ್ಳುವ ತೀರ್ಮಾನ ಮಾಡಿದ್ದರು.

ಕುಟುಂಬದಲ್ಲಿ  ಗೋಪಿನಾಥ್‌, ಪತ್ನಿ ಉಮಾ, ಮಗ ಅಜಯ್‌, ತಮ್ಮ ರಘುನಾಥ್‌ ಹಾಗೂ ಅವರ ಪತ್ನಿ ಲತಾ ಎಲ್ಲರೂ ಒಟ್ಟಾಗಿ  ವಾಸಿಸುತ್ತಿದ್ದು, ತಮ್ಮ ಬಿಸ್‌ನೆಸ್‌ ವ್ಯವಹಾರವನ್ನು ಅಣ್ಣ ತಮ್ಮಂದಿರು ಒಟ್ಟಿಗೆ ನೋಡಿಕೊಳ್ಳುತ್ತಿದ್ದರು. ಉಮಾ ಮತ್ತು ಲತಾ ಪರಸ್ಪರ ಪ್ರೀತಿಯಿಂದ ಹೊಂದಿಕೊಂಡು ನಡೆಯುತ್ತಿದ್ದರು. ರಘುನಾಥ್‌ ಮತ್ತು ಲತಾರಿಗೆ ಮಕ್ಕಳಿರಲಿಲ್ಲ. ತಮ್ಮೆಲ್ಲ ಪ್ರೀತಿಯನ್ನು ಮನೆಯ ಏಕಮಾತ್ರ ಪುತ್ರನಾದ ಅಜಯ್‌ ಮೇಲೆಯೇ ಹರಿಸುತ್ತಿದ್ದರು.

ಅಜಯ್‌ ತನ್ನ ವಿದ್ಯಾಭ್ಯಾಸ ಮುಗಿಸಿದ ಮೇಲೆ ತಂದೆ ಮತ್ತು ಚಿಕ್ಕಪ್ಪನ ಎಕ್ಸ್ ಪೋರ್ಟ್‌ ಬಿಸ್‌ನೆಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಬಿಸ್‌ನೆಸ್‌ ಸಂದರ್ಭದಲ್ಲಿ ಇತರೆ ನಗರ ಅಥವಾ ಹೊರದೇಶಗಳಿಗೆ ಟೂರ್‌ ಹೊರಡುವ ಕೆಲಸ ಅವನದಾಗಿತ್ತು.

ವಿವಾಹವಾದ ನಂತರ ಪಾರ್ಟಿ, ಪಿಕ್ನಿಕ್‌, ಹನಿಮೂನ್‌ ಎಂದು ತಿರುಗಾಡುವಷ್ಟರಲ್ಲಿ ತಿಂಗಳು ಕಳೆದುಹೋಗಿತ್ತು. ಒಂದು ದಿನ ಆಫೀಸ್‌ನಿಂದ ಮನೆಗೆ ಬಂದ ಅಜಯ್‌ ಪತ್ನಿಗೆ ಹೇಳಿದ, ``ಮುಂದಿನ ವಾರ ನಾನು ಜರ್ಮನಿಗೆ ಬಿಸ್‌ನೆಸ್‌ ಟ್ರಿಪ್‌ ಹೋಗಬೇಕಾಗಿದೆ.''

``ನನ್ನನ್ನೂ ಕರೆದುಕೊಂಡು ಹೋಗುವಿರಾ?''

``ನಿನಗೆ ಪಾಸ್‌ಪೋರ್ಟ್‌ ಇಲ್ಲವಲ್ಲ. ಮೊದಲು ನಿನ್ನ ಪಾಸ್‌ಪೋರ್ಟ್‌ ಮಾಡಿಸೋಣ. ಮುಂದಿನ ಸಲ ಜೊತೆಯಾಗಿ ಹೋಗಬಹುದು.''

ಶೋಭಿನಿಯ ಮುಖ ಸಪ್ಪೆಯಾಯಿತು. ಮನೆಯವರೆಲ್ಲ ಅದನ್ನು ಗಮನಿಸಿದರು. ಉಮಾ ಹೇಳಿದರು, ``ಮದುವೆಯ ಓಡಾಟದಲ್ಲಿ ಪಾಸ್‌ಪೋರ್ಟ್‌ ವಿಷಯ ಜ್ಞಾಪಕವೇ ಬರಲಿಲ್ಲ. ಮುಂದಿನ ಸಲ ಹೋದರಾಯಿತು ಬಿಡು. ಅಜಯ್‌ ಟೂರ್‌ ಮಾಡುತ್ತಲೇ ಇರುತ್ತಾನೆ. ಅವನು ಇಲ್ಲದಿರುವಾಗ ನಾವೇ ಚೆನ್ನಾಗಿ ಎಂಜಾಯ್‌ ಮಾಡೋಣ.''

ಅತ್ತೆಯ ಸ್ನೇಹಪೂರ್ಣ ಮಾತುಗಳನ್ನು ಕೇಳಿ ಶೋಭಿನಿ ನಗುಮುಖ ಮಾಡಿದಳು.

ರಾತ್ರಿ ಮಲಗುವಾಗ ಅಜಯ್‌ ಪತ್ನಿಯನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದ, ``ನಿನ್ನನ್ನು ಬಿಟ್ಟು ಹೋಗುವುದಕ್ಕೆ ನನಗೂ ಮನಸ್ಸಿಲ್ಲ. ಆದರೆ ಅದು ನನ್ನದೇ ಕೆಲಸವಾದ್ದರಿಂದ ಹೋಗಲೇಬೇಕಾಗಿದೆ. ಬೇಗನೆ ಮುಗಿಸಿ ಬರಲು ಪ್ರಯತ್ನಿಸುತ್ತೇನೆ ಬೇಜಾರು ಮಾಡಿಕೊಳ್ಳಬೇಡ,'' ಎಂದ.

ಪತಿಯ ಬೆಚ್ಚನೆಯ ಸ್ಪರ್ಶ ಶೋಭಿನಿಯ ಮನಸ್ಸಿಗೆ ಮುದ ನೀಡಿತು. ಅವನ ಬಾಹುಬಂಧನದಲ್ಲಿ ಸುರಕ್ಷತೆಯ ಅನುಭವದಿಂದ ಹಾಯಾಗಿ ಮಲಗಿದಳು. ಆದರೆ ಬೆಳಗ್ಗೆ ಎದ್ದ ನಂತರ ತಾನೇ ಬೇಸರ ಆವರಿಸಿತು.

2 ದಿನಗಳ ನಂತರ ಅಜಯ್‌ ಹೊರಟಹೋದ. ಮನೆಯವರೆಲ್ಲರೂ ಇದ್ದರೂ ಶೋಭಿನಿಗೆ ಒಂಟಿತನ ಕಾಡಿತು, `ಇದೆಂತಹ ಸಂಬಂಧ ಪತಿಪತ್ನಿಯರದು! ಕೆಲವೇ ದಿನಗಳ ಹಿಂದೆ ಅಪರಿಚಿತರಾಗಿದ್ದೆವು. ಇಂದು ಅವರಿಲ್ಲದೆ ಒಂದು ನಿಮಿಷ ಕಳೆಯುವುದೂ ಕಷ್ಟವಾಗಿದೆ. ಮನಸ್ಸೆಲ್ಲ ಅವರ ಸುತ್ತಲೇ ಸುತ್ತುತ್ತಿದೆ,' ಎಂದು ಶೋಭಿನಿ ಯೋಚಿಸುತ್ತಿದ್ದಳು.

ಸೊಸೆಯ ಕಳಾಹೀನ ಮುಖವನ್ನು ನೋಡಲಾಗದೆ ಉಮಾ ಹೇಳಿದರು, ``ಶೋಭಾ, ನಿನ್ನ ತವರುಮನೆಗೆ ಹೋಗಿದ್ದು ಬಾ. ತವರುಮನೆ ಒಂದೇ ಊರಿನಲ್ಲಿದ್ದುಬಿಟ್ಟರೆ ಅಲ್ಲಿ ಹೋಗಿ ಉಳಿಯುವುದಕ್ಕೆ ಅವಕಾಶವೇ ಆಗುವುದಿಲ್ಲ. ನೀನು ಹೋದಾಗೆಲ್ಲ ಸ್ವಲ್ಪ ಹೊತ್ತು ಇದ್ದು ಬರುತ್ತಿದ್ದೆ. ಈಗ ಹೋಗಿ ನಾಲ್ಕಾರು ದಿನಗಳು ನಿನ್ನ ತಂದೆ ತಾಯಿಯರ ಜೊತೆ ಕಾಲ ಕಳೆದು ಬಾ. ನಿನಗೂ ಒಂದು ಬದಲಾವಣೆ ಆಗುತ್ತದೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ