- ರಾಘವೇಂದ್ರ ಅಡಿಗ ಎಚ್ಚೆನ್.
ನೀನಾಸಂ ಸತೀಶ್ ನಟನೆಯ ದಿ ರೈಸ್ ಆಫ್ ಅಶೋಕ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಏಳೋ ಏಳೋ ಮಹಾದೇವ ಗೀತೆ ರಿಲೀಸ್ ಆಗಿದ್ದು, ಹಾಡಿನ ಬಿಡುಗಡೆ ವೇದಿಕೆಯಲ್ಲಿ ಇಡೀ ಚಿತ್ರತಂಡ ಹಾಜರಾಗಿತ್ತು.
ಈ ವೇಳೆ ನಟ ನೀನಾಸಂ ಸತೀಶ್ ಭಾವುಕವಾಗಿ ಮಾತನಾಡಿದರು. "ಅಯೋಗ್ಯ ಲೆಕ್ಕ ಅಲ್ಲಾ ನನಗೆ ಮನೇಲಿ ಮಲಗಿದ್ದರು ಜನ ಆ ಸಿನಿಮಾ ನೋಡ್ತಾರೆ. ಅಯೋಗ್ಯ ಬ್ರಾಂಡ್ ಕ್ರಿಯೇಟ್ ಮಾಡಿದೆ. ಪ್ಯಾನ್ ಇಂಡಿಯಾ ಮಾಡೋ ಹುಚ್ಚ ಅಂತಾರೆ? ಒಂದು ಕೆಜಿಎಫ್, ಒಂದು ಕಾಂತಾರ ಮಾಡಬೇಕು ಅನ್ನೋ ಆಸೆ ನನಗಿದೆ. ಒಂದು ರೂಪಾಯಿ ನಾನು ಸೈನಿಂಗ್ ದುಡ್ಡು ತಗೊಂಡಿಲ್ಲ. ನಾಳೆ ಶೂಟಿಂಗ್ ಮಾಡಬೇಕು ಅಂತ ಹೋದಾಗ ನಿರ್ದೇಶಕ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲಿಂದ ಜವಾಬ್ದಾರಿ ಜಾಸ್ತಿ ಆಯಿತು" ಎಂದಿದ್ದಾರೆ.

"ಇಷ್ಟೆಲ್ಲ ಮಾಡಿ ಈ ಸಿನಿಮಾ ಶೂಟಿಂಗ್ ಶುರು ಆದಮೇಲೆ ನನ್ನ ಅಣ್ಣಗೆ ಆಕ್ಸಿಡೆಂಟ್ ಆಗುತ್ತೆ. ಮೂರು ವರ್ಷ ರಾತ್ರಿ ಕಣ್ಣೀರು ಹಾಕಿ ಸಿನಿಮಾ ಕಂಪ್ಲೀಟ್ ಮಾಡಿದ್ದೇವೆ. ನನ್ನ ಶತ್ರುಗಳು ಈ ಸಿನಿಮಾ ನೋಡಿ ಹೆಮ್ಮೆ ಪಡ್ತಾರೆ. ಒಂದು ಸಿನಿಮಾಗೆ 50 ಲಕ್ಷ ರೂ. ತಗೊಂಡು 6 ಸಿನಿಮಾ ಮಾಡಬೋದಿತ್ತು ಮೂರು ವರ್ಷದಲ್ಲಿ, ಆದರೆ ಮಾಡಲಿಲ್ಲ ಸರ್ವಸ್ವವು ನಮಗೆ ರೈಸ್ ಆಫ್ ಅಶೋಕ ಆಗಿತ್ತು" ಎಂದಿದ್ದಾರೆ.

"ರೈಸ್ ಆಫ್ ಅಶೋಕ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ ಅಂದರೆ ಎಲ್ಲಾ ಟೆಕ್ನಿಷಿಯನ್ಸ್ ಹಾಗೂ ಕಲಾವಿದರು, ನಿರ್ಮಾಪಕರು ಹಾಗೂ ನಿರ್ದೇಶಕ ವಿನೋದ್ ದೊಂಡಾಳೆ ಅವರ ಕುಟುಂಬದ ಸಾಥ್ ಮುಖ್ಯವಾಯಿತು. ನಿರ್ದೇಶಕರು ಈ ದಿನ ನಮ್ಮ ಜೊತೆ ಇಲ್ಲ ಅನ್ನೋ ನೋವಿದೆ. ಅವರ ಕನಸಿನಂತೆ ಸಿನಿಮಾ ಮಾಡಿದ್ದೀವಿ ಅನ್ನೋ ಹೆಮ್ಮೆ ಇದೆ. ಅವರು ಮೇಲಿಂದಲೇ ನೋಡಿ ಹರಸುತ್ತಾರೆ" ಎಂದಿದ್ದಾರೆ ನೀನಾಸಂ ಸತೀಶ್.

ನೀನಾಸಂ ಸತೀಶ್ ನಟನೆಯ ದಿ ರೈಸ್ ಆಫ್ ಅಶೋಕ ಸಿನಿಮಾದ ಮೊದಲ ಹಾಡನ್ನು ಸ್ವತಂ ಸತೀಶ್ ಬರೆದಿದ್ದಾರೆ. ಬಾಲಿವುಡ್ ಗಾಯಕ ಕೈಲಾಶ್ ಖೇರ್ ಇದನ್ನ ಮನಕ್ಕೆ ಮುಟ್ಟುವ ಥರ ಹಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತವೂ ವೈಬ್ರೇಷನ್ ಕ್ರಿಯೇಟ್ ಮಾಡುತ್ತದೆ. ಮಾದೇವನ ಮೇಲೇನೆ ಈ ಹಾಡನ್ನ ಮಾಡಲಾಗಿದೆ. ನೈಟ್ ಎಫೆಕ್ಟ್ ಅಲ್ಲಿಯೇ ಇದನ್ನ ತೆಗೆಯಲಾಗಿದೆ. ಇಡೀ ಹಾಡು ಗೋಲ್ಡನ್ ಟಿಂಟ್ ಅಲ್ಲಿಯೇ ಇದೆ. ಲಿರಿಕಲ್ ವಿಡಿಯೋ ಮಧ್ಯದಲ್ಲಿ ಒಂದಷ್ಟು ವಿಡಿಯೋ ಕ್ಲಿಪ್ ಕೂಡ ಇವೆ. ಹಾಗಾಗಿಯೇ ಇದು ಇನ್ನಷ್ಟು ಇಂಟ್ರಸ್ಟಿಂಗ್ ಅನಿಸುತ್ತದೆ. ಹಾಡಿನಲ್ಲಿ ಸಪ್ತಮಿ ಗೌಡ ಬರ್ತಾರೆ. ಅವರು ಬರೋವಾಗ ಮರಾಠಿ ಸಾಲುಗಳೂ ಬರುತ್ತವೆ. ಗೀತೆಯನ್ನ ಕೈಲಾಶ್ ಕೇರ್ ಜೊತೆಯಾಗಿ ಸಾಧ್ವಿನಿ ಕೊಪ್ಪ ಹಾಗೂ ಸಿದ್ದುಸಹ ಹಡಿದ್ದಾರೆ. ಈ ಗೀತೆ ಕೇಳುವಂತೆ ಇದೆ. ಶಿವನ ಭಕ್ತಿ ಭಾವದಲ್ಲಿ ತೇಲಿ ಹೋಗುವಂತೆನೂ ಇದೆ.

ಚಿತ್ರವನ್ನು ಪ್ರಸ್ತುತ ಮನು ಶೆಡ್ದಾರ್ ನಿರ್ದೇಶಿಸಿದ್ದು ಲವಿತ್ ಚಿತ್ರದ ಛಾಯಾಗ್ರಾಹಕರಾಗಿದ್ದಾರೆ. ಚಿತ್ರಕ್ಕೆ ಸತೀಶ್ ನೀನಾಸಂ ಸಹ ಹಣ ಹೂಡಿರುವ ಕುರುತು ಮಾಹಿತಿ ಇದೆ.





