ಸಾಮಗ್ರಿ : 3-4 ಬೆಂದ ಆಲೂ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು. 2-3 ಹಸಿ ಮೆಣಸು, ಪುದೀನಾ, ಕರಿಬೇವು, ಶುಂಠಿ, ಬೆಳ್ಳುಳ್ಳಿ, 2 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾ ಪುಡಿ, ಅಮ್ಚೂರ್ ಪುಡಿ, ಗರಂಮಸಾಲ, ಕರಿಯಲು ಎಣ್ಣೆ, 1 ಕಪ್ ಬ್ರೆಡ್ ಕ್ರಂಬ್ಸ್.
ಹೂರಣದ ಸಾಮಗ್ರಿ : ಅರ್ಧರ್ಧ ಕಪ್ ಚೀಸ್ ಸ್ಪ್ರೆಡ್ ಮೈದಾ, ತುಸು ತುರಿದ ಪನೀರ್.
ವಿಧಾನ : ಬೆಂದ ಆಲೂ ಸಿಪ್ಪೆ ಸುಲಿದು ಮಸೆದಿಡಿ. ಇದಕ್ಕೆ ಹೆಚ್ಚಿದ ಎಲ್ಲಾ ಪದಾರ್ಥ, ಉಳಿದ ಸಾಮಗ್ರಿ, ಉಪ್ಪು, ಖಾರ ಸೇರಿಸಿ ಪಕೋಡ ಹಿಟ್ಟಿನ ಹದಕ್ಕೆ ಕಲಸಿಡಿ. ಅದೇ ತರಹ ಹೂರಣದ ಸಾಮಗ್ರಿ ಚೆನ್ನಾಗಿ ಮಸೆದು ಚಿಟಕಿ ಉಪ್ಪು, ಖಾರ ಹಾಕಿ ಮಿಶ್ರಣ ಕಲಸಿಡಿ. ಆಲೂ ಮಿಶ್ರಣದ ದೊಡ್ಡ ಉಂಡೆ, ಪನೀರ್ನ ಸಣ್ಣ ಉಂಡೆ ಆಗುವಂತೆ ಸಮಾನವಾಗಿ ಮಾಡಿಕೊಳ್ಳಿ. ಆಲೂ ಮಿಶ್ರಣದಲ್ಲಿ ರಂಧ್ರ ಮಾಡಿ 1-1 ಪನೀರ್ ಉಂಡೆ ಇರಿಸಿ, ನೀಟಾಗಿ ಕ್ಲೋಸ್ ಮಾಡಿ, ಬ್ರೆಡ್ ಕ್ರಂಬ್ಸ್ ನಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಟೊಮೇಟೊ ಕೆಚಪ್ ಜೊತೆ ಇದನ್ನು ಬಿಸಿ ಬಿಸಿಯಾಗಿ ಸವಿಯಲು ಕೊಡಿ. ಹಬೆಯಾಡುವ ಕಾಫಿ /ಟೀ ಇರಲಿ.

ಉದ್ದಿನ ಪಕೋಡ
ಸಾಮಗ್ರಿ : 1 ಕಪ್ ಉದ್ದಿನ ಬೇಳೆ, ಅರ್ಧರ್ಧ ಕಪ್ ಕಡಲೆ ಹಿಟ್ಟು, ಅಕ್ಕಿಹಿಟ್ಟು, ಒಂದಿಷ್ಟು ತುರಿದ ಮೂಲಂಗಿ, ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು, ಕೊ.ಸೊಪ್ಪು, ಕರಿಬೇವು, ಬೇಯಿಸಿ ಮಸೆದ 2 ಆಲೂ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಗರಂಮಸಾಲ, ಪುದೀನಾ ಚಟ್ನಿ, ಕರಿಯಲು ಎಣ್ಣೆ.
ವಿಧಾನ : 3-4 ತಾಸು ಬೇಳೆ ನೆನೆಸಿ ತರಿ ತರಿಯಾಗಿ ರುಬ್ಬಿಕೊಳ್ಳಿ. ಇದಕ್ಕೆ ಹೆಚ್ಚಿದ ಸಾಮಗ್ರಿ, ಮೇಲೆ ಹೇಳಿದ ಉಳಿದೆಲ್ಲ ಪದಾರ್ಥ ಹಾಕಿ ಪಕೋಡ ಮಿಶ್ರಣದ ಹದಕ್ಕೆ ಕಲಸಿಡಿ. ನಂತರ ಎಣ್ಣೆ ಕಾಯಿಸಿ, ಇದರಿಂದ ತುಸು ಮಿಶ್ರಣ ಹಾಕುತ್ತಾ, ಗರಿಗರಿ ಪಕೋಡ ಕರಿಯಿರಿ. ಸಲಾಡ್ ಆಗಿ ತುರಿದ ಮೂಲಂಗಿ, ಜೊತೆಗೆ ಪುದೀನಾ ಚಟ್ನಿ, ಬಿಸಿ ಬಿಸಿ ಕಾಫಿ/ಟೀ ಇರಲಿ.

ಕಡಲೆಬೇಳೆ ಶಂಕರಪೋಳಿ
ಸಾಮಗ್ರಿ : 1 ಕಪ್ ಕಡಲೆಬೇಳೆ, ಅರ್ಧರ್ಧ ಕಪ್ ಅಕ್ಕಿಹಿಟ್ಟು, ಮೈದಾ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ಅರಿಶಿನ, ಓಮ, ಜೀರಿಗೆ, ಸೋಂಪು, ನೈಲಾನ್ ಎಳ್ಳು, ಕರಿಯಲು ಎಣ್ಣೆ.
ವಿಧಾನ : ಮೊದಲು ಕಡಲೆಬೇಳೆಯನ್ನು 1 ಗಂಟೆ ಕಾಲ ನೆನೆಸಿ, ಒಂದು ಸೀಟಿ ಬರುವಂತೆ ಬೇಯಿಸಿ. ನಂತರ ಚೆನ್ನಾಗಿ ಆರಿದ ನಂತರ ಕನಿಷ್ಠ ನೀರು ಬಳಸಿ ನುಣ್ಣಗೆ ಅರೆಯಿರಿ. ನಂತರ ಇದಕ್ಕೆ ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿ, ಚಪಾತಿ ಹಿಟ್ಟಿನ ಹದಕ್ಕೆ ಮಿಶ್ರಣ ಕಲಸಿಡಿ. ಇದರಿಂದ 2-3 ಉಂಡೆ ಮಾಡಿ, ಎಣ್ಣೆ ಸವರುತ್ತಾ, ದಪ್ಪ ಚಪಾತಿ ಲಟ್ಟಿಸಿ ನಂತರ ಅದರಿಂದ ಚಿತ್ರದಲ್ಲಿರುವಂತೆ ವಜ್ರಾಕಾರದಲ್ಲಿ ಶಂಕರಪೋಳಿ ಕತ್ತರಿಸಿ, ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಬರುವಂತೆ ಕರಿಯಿರಿ. ಗಾಳಿಯಾಡದ ಡಬ್ಬಕ್ಕೆ ತುಂಬಿರಿಸಿ, ಬೇಕಾದಾಗ ಟೊಮೇಟೊ ಕೆಚಪ್, ಬಿಸಿ ಕಾಫಿ/ಟೀ ಜೊತೆ ಸೇವಿಸಿ.





