ಮದುವೆ ಎನ್ನುವುದು ಗಂಡು ಮತ್ತು ಹೆಣ್ಣು ಹೊಸದೊಂದು ಪ್ರಪಂಚಕ್ಕೆ ಕಾಲಿಡುವ ಘಟ್ಟ. ಯೋಚಿಸಿ ನಿರ್ಧಾರ ಮಾಡಿ ಮದುವೆಯಾಗಿದ್ದರೆ ಯಾವುದೇ ಸಮಸ್ಯೆ ಉಂಟಾಗದು. ಆದರೆ ಬಹುಬೇಗ ಅಂದರೆ ಕಡಿಮೆ ವಯಸ್ಸಿನಲ್ಲಿ ಮದುವೆಯಾದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಮದುವೆಯ ಕಾರಣದಿಂದ ನಮ್ಮ ಜೀವನವೇ ಬದಲಾಗಿ ಬಿಡುತ್ತದೆ. ಹಾಗಾಗಿ ಅದರ ನಿರ್ಣಯ ಕೈಗೊಳ್ಳುವ ಮುಂಚೆ ಆತುರ ತೋರಿಸುವುದು ಸರಿಯಲ್ಲ. ಎಳೆಯ ವಯಸ್ಸು ಅಂದರೆ ಕಡಿಮೆ ತಿಳಿವಳಿಕೆ ಹಾಗೂ ಕಡಿಮೆ ಅನುಭವ. ಅದು ನಮ್ಮ ಮುಂದಿರುವ ಜೀವನದಲ್ಲಿ ಅದೆಂಥ ಘೋರ ವಿಷವನ್ನು ಬೆರೆಸುತ್ತದೆಂದರೆ, ವೈವಾಹಿಕ ಜೀವನ ಸಿಹಿಯಿಂದ ಕೂಡಿರದೆ ಕಹಿ ಅನುಭವಗಳನ್ನು ನೀಡುತ್ತದೆ. ಮದುವೆ ಕೇವಲ ಪ್ರೀತಿಸುವ ಎರಡು ಹೃದಯಗಳ ಬಂಧನವಲ್ಲ. ಅದು ಎಂತಹ ಎರಡು ವ್ಯಕ್ತಿಗಳನ್ನು ವೈವಾಹಿಕ ಬಂಧನದಲ್ಲಿ ಬಂಧಿಸುತ್ತದೆಂದರೆ, ಅವರ ಪಾಲನೆ ಪೋಷಣೆ, ವ್ಯಕ್ತಿತ್ವ, ಭಾವನೆಗಳು ಶಿಕ್ಷಣ ಹಾಗೂ ಒಮ್ಮೊಮ್ಮೆ ಮದುವೆ ಎರಡು ವಿಭಿನ್ನ ಸಂಸ್ಕೃತಿಗಳನ್ನು ಒಗ್ಗೂಡಿಸುತ್ತದೆ.

ಇಂತಹ ಬಂಧನಕ್ಕೆ ಬಂಧಿತಳಾಗುವ ಮುನ್ನ ಪರಸ್ಪರರ ಆಸಕ್ತಿ ಅನಾಸಕ್ತಿ, ಜೀವನದ ಗುರಿಗಳು, ಪರಸ್ಪರರ ಕುಟುಂಬಗಳ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಸಮಯ ಬೇಕಾಗುತ್ತದೆ. ನಿಮ್ಮನ್ನು ವರಿಸಲಿರುವ ವರನ ಬಗ್ಗೆ ತಿಳಿದುಕೊಳ್ಳುವುದರಲ್ಲಿಯೇ ನಿಮ್ಮ ಜಾಣತನ ಅಡಗಿದೆ. ಮದುವೆಯ ಬಂಧನಕ್ಕೆ ಸಿಲುಕುವ ಮುಂಚೆ ಸಂಗಾತಿಯ ಸಕಾರಾತ್ಮಕ ಹಾಗೂ ನಕಾರಾತ್ಮಕ ಸಂಗತಿಗಳನ್ನು ಚೆನ್ನಾಗಿ ಆಲೋಚಿಸಿ ನೋಡಬೇಕು.

ಮದುವೆಯಾಗಲು ಸೂಕ್ತ ಕಾರಣಗಳು

ಮದುವೆಗೆ ಒಪ್ಪಿಗೆ ಕೊಡುವ ಮುನ್ನ ನಾನೇಕೆ ಒಪ್ಪಿಗೆ ಕೊಡುತ್ತಿದ್ದೇನೆ ಎಂಬುದರ ಬಗ್ಗೆ ಒಮ್ಮೆ ಯೋಚಿಸಿ. ಮನೆಯವರು ಒತ್ತಾಯ ಮಾಡುತ್ತಿದ್ದಾರೆಂದು ನೀವು ಒಪ್ಪಿಗೆ ಕೊಡುತ್ತಿದ್ದೀರಾ? ಮದುವೆ ವಯಸ್ಸು ಮೀರಿ ಹೋಗಬಾರದು ಎಂಬ ಕಾರಣಕ್ಕೆ ಹ್ಞಾಂ ಎಂದು ಹೇಳ್ತಿದೀರಾ? ನಿಮ್ಮ ಗೆಳತಿಯರೆಲ್ಲ ಮದುವೆಯಾಗಿ ಬಿಟ್ಟರು ಎಂಬ ಕಾರಣಕ್ಕೆ ಒಪ್ಪಿಗೆ ಸೂಚಿಸಿದಿರಾ ಎಂಬ ಸಂಗತಿ ನಿಮ್ಮ ಗಮನದಲ್ಲಿರಲಿ. ಈ ಹೊಸ  ಸಂಬಂಧವನ್ನು ನಿಭಾಯಿಸುವವರು ನೀವೇ ಹೊರತು ಬೇರಾರೂ ಅಲ್ಲ, ಹೀಗಾಗಿ ಯೋಚಿಸಿ ನಿರ್ಧಾರಕ್ಕೆ ಬರುವುದು ಒಳ್ಳೆಯದು.

ಶರ್ಮಿಳಾ ಈಗಲೂ ತನ್ನ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಪಡುತ್ತಾಳೆ. ಕಾಲೇಜಿನಲ್ಲಿ ಬಳೆಗಳನ್ನು ಧರಿಸಿ ಹೋಗಬೇಕೆಂಬ ಆತುರ ಅವಳನ್ನು ಒಂದು ರೀತಿಯ ಶಿಕ್ಷೆಗೆ ಗುರಿ ಮಾಡಿತು. ಬಳೆಯನ್ನೇನೋ ಧರಿಸಿದ್ದಳು. ಆದರೆ ಅರ್ಹನಲ್ಲದ ವ್ಯಕ್ತಿಯ ಜೊತೆ ಮದುವೆ ಮಾಡಿಕೊಂಡು ಒಂದು ರೀತಿಯಲ್ಲಿ ಪಶ್ಚಾತ್ತಾಪ ಪಡುವಂತೆ ಮಾಡಿತು. ಆ ವಯಸ್ಸಿನಲ್ಲಿ ಅವಳು ತನ್ನ ಶಿಕ್ಷಣದ ಬಗ್ಗೆ ಗಮನ ಕೊಡಬೇಕಿತ್ತು. ಆ ವಯಸ್ಸಿನಲ್ಲಿ ತೆಗೆದಕೊಂಡು ತಪ್ಪು ನಿರ್ಧಾರದ ಕಾರಣದಿಂದ ಅವಳು ಸ್ವಾವಲಂಬಿಯಾಗಲು ಸಾಧ್ಯವಾಗಲಿಲ್ಲ. ಈಗ ಕಟ್ಟಿಕೊಂಡ ಗಂಡನ ಜೊತೆ ಅವನು ಹೇಳಿದಂತೆ ಕೇಳಿಕೊಂಡು ಇರಬೇಕಾದ ಅನಿವಾರ್ಯ ಸ್ಥಿತಿ.

ಆರ್ಥಿಕ ಪರಿಸ್ಥಿತಿ ಗಮನಿಸಿ : 18 ತುಂಬುತ್ತಲೇ ರಚನಾ ತನ್ನದೇ ಆದ ಸಂಗೀತದ ಗುರುವಿನ ಜೊತೆ ಓಡಿ ಹೋಗಿ ಮದುವೆಯನ್ನೇನೋ ಮಾಡಿಕೊಂಡಳು. ಆದರೆ ಆ ಪ್ರೇಮಿಗಳ ರೋಮಾನ್ಸ್ ಅಲ್ಪಾಯುಷಿ ಎಂದು ಸಾಬೀತಾಯಿತು. ಏನು ಕಾರಣ? ಆ ಸಂಗೀತ ಶಿಕ್ಷಕ ಇವಳಿಗೊಬ್ಬಳಿಗೆ ಸಂಗೀತ ಹೇಳಿಕೊಡುತ್ತಿದ್ದ. ಹಣದ ಮುಗ್ಗಟ್ಟಿನಿಂದ ಗಂಡ ಹೆಂಡತಿ ನಡುವೆ ವೈಮನಸ್ಸು ಉಂಟಾಗಿ ಸಂಗೀತವೇ ಅವರ ಮಧ್ಯದಿಂದ ಮರೆಯಾಯಿತು. ಗೃಹಸ್ಥ ಜೀವನದ ಹೊರೆ ಬಿದ್ದು ಇಬ್ಬರೂ ತಮ್ಮ ನಿರ್ಣಯದ ಬಗ್ಗೆ ಪಶ್ಚಾತ್ತಾಪ ಪಟ್ಟುಕೊಂಡರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ