ಪುರುಷನೇ ಆಗಿರಬಹುದು ಅಥವಾ ಮಹಿಳೆ, ಖಾಸಗಿ ರಸನಿಮಿಷಗಳ ಕುರಿತಂತೆ ಇಬ್ಬರಿಗೂ ವಿಭಿನ್ನ ಫ್ಯಾಂಟಸಿ ಇರುತ್ತದೆ. ಅದರ ಕುರಿತಂತೆ ಇಬ್ಬರೂ ಪರಸ್ಪರ ಚರ್ಚೆ ನಡೆಸದೇ ಇದ್ದರೆ ಸಂಬಂಧದಲ್ಲಿ ಬಿರುಕು ಮೂಡುವುದು ಸಹಜ. ಈ ಸಮಸ್ಯೆಯಿಂದ ಹೇಗೆ ಹೊರಬರುವುದು ಸ್ವಲ್ಪ ತಿಳಿದುಕೊಳ್ಳಿ.

ದೈಹಿಕ ಸಂಬಂಧದಲ್ಲಿ ಅನವಶ್ಯಕವಾಗಿ ಸಹಿಸಿಕೊಳ್ಳುವುದು ಅಥವಾ ಭವಿಷ್ಯದಲ್ಲಿ ಸುಧಾರಣೆ ಆಗುತ್ತದೆ ಎಂದು ಹಾಗೆಯೇ ದಿನ ದೂಡುವುದು ಸರಿಯಾದುದಲ್ಲ. ಅದು ಸಂಬಂಧದಲ್ಲಿನ ಸಹಜ ಆನಂದವನ್ನು ಕಡಿಮೆಗೊಳಿಸುತ್ತದೆ. ಕೆಲವು ಮಹಿಳೆಯರಿಗೆ ತಮ್ಮ ಪತಿಯ ಆಕ್ರಮಣಕಾರಿ ನೀತಿ ಇಷ್ಟವಾಗುವುದಿಲ್ಲ ಎಂದು ಹೇಳುತ್ತಾರೆ. ಆದರೆ ಸಂಕೋಚದ ಕಾರಣದಿಂದ ಆ ಬಗ್ಗೆ ಹೇಳುವುದು ತಮಗೆ ಸರಿ ಎನಿಸುವುದಿಲ್ಲ ಎಂದೂ ಹೇಳುತ್ತಾರೆ. ಮತ್ತೆ ಕೆಲವು ಮಹಿಳೆಯರು ತಮಗೆ ಏನು ಇಷ್ಟವಾಗುತ್ತದೆ, ಏನು ಇಷ್ಟ ಆಗುವುದಿಲ್ಲ ಎನ್ನುವುದನ್ನು ಪತಿ ತಿಳಿದುಕೊಳ್ಳಬೇಕು ಎನ್ನುತ್ತಾರೆ. ಈ ಆಸಕ್ತಿ ಅನಾಸಕ್ತಿಯ ಯಾವುದೇ ನಿಶ್ಚಿತ ಮಾನದಂಡಗಳೇನೂ ಇಲ್ಲ, ಅದು ಅವರಿಗೆ ತಂತಾನೇ ಅರ್ಥವಾಗಬೇಕು, ತಕ್ಷಣವೇ ಹೆಚ್ಚೆಚ್ಚು ಆನಂದ ಸಿಗಬೇಕು ಎಂದು ಅಪೇಕ್ಷಿಸುವ ಹಾಗಿಲ್ಲ.

ಒಬ್ಬ ಮಹಿಳೆ ಹೇಳಿದ್ದೇನೆಂದರೆ, ಆಕೆಯ ಪತಿ ಮೊದಲ ರಾತ್ರಿಯಿಂದಲೇ ಅಶ್ಲೀಲ ವಿಡಿಯೋ ತೋರಿಸಿ ಅವಳ ಜೊತೆ ಅನೈಸರ್ಗಿಕ ಸಂಬಂಧ ಬೆಳೆಸುತ್ತಿದ್ದ. ಈ ಪ್ರಕ್ರಿಯೆ ಹಲವು ವರ್ಷಗಳ ತನಕ ಹಾಗೆಯೇ ಮುಂದುವರಿದಿತ್ತು. ಒಂದು ವೇಳೆ ಅವಳು ಅದನ್ನು ವಿರೋಧಿಸಿದರೆ ಗಂಡ ಅವಳಿಗೆ ಬೆದರಿಕೆ ಹಾಕುತ್ತಿದ್ದ. ನಾಚಿಕೆ, ಸಂಕೋಚದ ಕಾರಣದಿಂದ ಅವಳು ಈ ವಿಷಯವನ್ನು ತನ್ನ ತಂದೆತಾಯಿಯ ಮುಂದೆ ಹೇಳಲು ಸಾಧ್ಯವಾಗುತ್ತಿರಲಿಲ್ಲ. ಈ ಮಧ್ಯೆ ಅವಳ ದೇಹದಲ್ಲಿ ಹಲವು ಬಗೆಯ ತೊಂದರೆಗಳು ಕಾಣಿಸಿಕೊಂಡವು. ಅನೈಸರ್ಗಿಕ ಸಂಬಂಧದಿಂದ ಉಂಟಾಗುವ ತೊಂದರೆಗಳ ಬಗ್ಗೆ ಪತಿಯ ಮುಂದೆ ಹೇಳಿದಾಗ ಆತ ಅದನ್ನು ನಂಬಲು ಕೂಡ ತಯಾರಿರಲಿಲ್ಲ. ಆದರೂ ಅವನು ಅದನ್ನು ಮುಂದುವರಿಸಿದ್ದ. ದೂರು ಹೇಳಲು ನೋಡಿದಾಗ ಅವಳ ಮೇಲೆ ಕೈ ಎತ್ತುತ್ತಿದ್ದ. ಆ ಮಹಿಳೆಯ ಪ್ರಕಾರ, ಉಳಿದ ಸಮಯದಲ್ಲಿ ಅವನು ಸಾಮಾನ್ಯನಂತೆ ಇರುತ್ತಿದ್ದ. ಆದರೆ ಸಮಾಗಮದ ಸಮಯದಲ್ಲಿ ಮಾತ್ರ ರಾಕ್ಷಸನಂತೆ ವರ್ತಿಸುತ್ತಿದ್ದ. ಅವಳು ಅನಿವಾರ್ಯವಾಗಿ ಗಂಡನ ವಿರುದ್ಧ ಪೊಲೀಸ್‌ ಠಾಣೆಗೆ ದೂರು ಕೊಡುವ ಸ್ಥಿತಿ ಬಂತು.

ಭಾವನಾ ಈ ಕುರಿತಂತೆ ಹೀಗೆ ಹೇಳುತ್ತಾರೆ, ``ನಾನು ಕೆಲವು ದಿನಗಳವರೆಗೆ ಗಂಡನ ಆಕ್ರಮಣಕಾರಿ ಧೋರಣೆಯನ್ನು ಸಹಿಸಿಕೊಂಡೆ. ಹನಿಮೂನ್‌ ಬಳಿಕ ಹೇಳೋಣ ಅಂದುಕೊಂಡೆ. ಆದರೆ ಧೈರ್ಯ ಸಾಲಲಿಲ್ಲ. ಆದರೆ ಕ್ರಮೇಣ ಅದೇ ಪ್ರವೃತ್ತಿ ಮುಂದುವರಿದಾಗ ನಾನು ಆ ಬಗ್ಗೆ ಮಾತನಾಡಲೇಬೇಕಾಯಿತು. ನಾನು ಮಾತನಾಡಿದ್ದು ಅವರಿಗೆ ಹಿಡಿಸಲಿಲ್ಲ. ನಮ್ಮ ಸಂಬಂಧ ಕೆಲವು ದಿನಗಳರೆಗೆ ಪ್ರಭಾವಿತವಾಗಿತ್ತು. ಪತಿ ಈ ಕುರಿತಂತೆ ನನ್ನನ್ನು ತೆಗಳುತ್ತಿದ್ದ. ನಾನು ಸಕಾಲದಲ್ಲಿ ಈ ಬಗ್ಗೆ ಹೇಳಿರದಿದ್ದರೆ ಆ ಪರಿಸ್ಥಿತಿಯೇ ಉದ್ಭವಿಸುತ್ತಿರಲಿಲ್ಲ.''

ರಮಾ ಈ ಬಗ್ಗೆ ಹೇಳುತ್ತಾರೆ, ``ನಾನು ಮೊದಲ ರಾತ್ರಿಯೇ ಪತಿಗೆ ನಿಮ್ಮ ಆ ಅನೈಸರ್ಗಿಕ ಅಭ್ಯಾಸ ನನಗೆ ಇಷ್ಟವಿಲ್ಲ ಎಂದೆ ಪತಿ ಈ ಬಗ್ಗೆ ಕ್ರಮೇಣ ಅಭ್ಯಾಸ ಆಗುತ್ತದೆ ಎಂದು ಹೇಳುತ್ತಿದ್ದ. ಆದರೆ ನಾನು ಸ್ಪಷ್ಟವಾಗಿ ನಾವು ಮನುಷ್ಯರು, ಪ್ರಾಣಿಗಳಲ್ಲ ಎಂದು ಹೇಳಿದೆ. ಆ ಬಳಿಕ 4-5 ದಿನಗಳಲ್ಲಿ ಪರಿಸ್ಥಿತಿ, ಸರಿಹೋಯಿತು. ಆ ಬಗೆಯ ಆಕ್ರಮಣಕಾರಿ ಪ್ರವೃತ್ತಿಯನ್ನು ಸಹಿಸಿಕೊಳ್ಳುವುದು ಎಷ್ಟು ಕಷ್ಟಕರ ಎನ್ನುವುದು ನನಗೆ ಗೊತ್ತಿತ್ತು. ಅದರಿಂದ ಸಮಾಗಮ ಪ್ರಕ್ರಿಯೆಯೇ ಒಂದು ಹೊರೆ ಎನಿಸುತ್ತದೆ. ಮುಕ್ತವಾಗಿ ಮಾತನಾಡುವುದರಿಂದ ಕೇವಲ ಅಪ್ರಿಯ ಪರಿಸ್ಥಿತಿಗಳಷ್ಟೇ ಸುಧಾರಣೆಯಾಗುವುದಿಲ್ಲ, ಒಳ್ಳೆಯ ಪರಿಸ್ಥಿತಿಗೆ ಒಳ್ಳೆಯ ವಾತಾವರಣ ಕೂಡ ಸೃಷ್ಟಿಯಾಗುತ್ತದೆ.''

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ