ಆ ಸಂಬಂಧವನ್ನು ದಿನದಿನಕ್ಕೆ ಬಲಯುತಗೊಳಿಸಲು ನೀವು ವಿವಾಹ ಸಂಬಂಧಿತ ಈ ವಿಷಯಗಳನ್ನು ಅರಿತುಕೊಳ್ಳಿ.

ವಾಟ್ಸ್ಆ್ಯಪ್‌ನಲ್ಲಿ ವಿವಾಹವನ್ನು ಕುರಿತಾದ ಈ ಜೋಕ್‌ ಪ್ರಚಲಿತಾಗಿದೆ. “ಹೆಚ್ಚು ಯೋಚಿಸದೆ ಮದುವೆ ಮಾಡಿಕೊಂಡರು ತಮ್ಮ ಮುಂದಿನ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಆದರೆ ಬಹಳಷ್ಟು ಯೋಚನೆ ಮಾಡಿ ಮದುವೆಯಾದವರು ಏನು ಪಡೆಯುತ್ತಾರೆ?

”ತಮಾಷೆಯಾಗಿ ತೋರಿದರೂ ಈ ಜೋಕ್‌ ಮದುವೆಯ ಬಗೆಗಿನ ವಾಸ್ತವವನ್ನು ಬಯಲು ಮಾಡುತ್ತದೆ. ವಿವಾಹವೆಂಬುದು ಒಂದು ಜೂಜಿನಂತೆ, ನಿಮ್ಮ ಆಯ್ಕೆ ಸರಿಯಾಗಬಹುದು ಅಥವಾ ಆಗದಿರಬಹುದು. ನೀವಂತೂ ಮಾಂಗಲ್ಯ ತಂತುವಿನಲ್ಲಿ ಒಂದಾಗಿ, ಸಪ್ತಪದಿ ತುಳಿಯುವ ಮತ್ತು ಪರಸ್ಪರ ಸಿಹಿ ತಿನ್ನಿಸುವ ಸಂಭ್ರಮದ ಕನಸು ಕಾಣುತ್ತಿರಬಹುದು. ಅದಕ್ಕೆ ಮೊದಲು ಈ `ಪೋಸ್ಟ್ ಮ್ಯಾರೇಜ್‌ ಚೇಂಜ್‌’ ನಿಮಗೇನೂ ತಿಳಿಹೇಳುವುದಿಲ್ಲ. ಇದನ್ನು ಓದಿ ಅರ್ಥ ಮಾಡಿಕೊಂಡಿದ್ದರೆ ಮುಂದೆ ನೀವು, `ನಮ್ಮ ಸಂಬಂಧಕ್ಕೆ ಏನಾಗಿದೆ. ನಮ್ಮ ಗಾಡಿ ಹಳಿ ತಪ್ಪಿ ಹೋಗುವಂತಾಗಲು ನಮ್ಮಿಬ್ಬರಲ್ಲಿ ಯಾರು ಕಾರಣ?’ ಎಂದು ಚಿಂತಿಸುವುದು ತಪ್ಪಬಹುದು.

ಜಸ್ಟ್ ಚಿಲ್‌, ಯೋಚಿಸಬೇಡಿ,, ಇದೆಲ್ಲ ನಾರ್ಮಲ್ ವಿವಾಹಾನಂತರದ ಒಂದು ಸಾಮಾನ್ಯ ಘಟ್ಟ ಅಷ್ಟೆ.

ನಿಮ್ಮ ಪಾರ್ಟ್‌ನರ್‌ ಆಕರ್ಷಕ ವ್ಯಕ್ತಿಯಾಗಿ ಉಳಿದಿಲ್ಲಿವೆಂದ ಮಾತ್ರಕ್ಕೆ ನಿಮ್ಮ ಪ್ರೀತಿ ಮುಕ್ತಾಯವಾಯಿತು ಎಂದು ಅರ್ಥವಲ್ಲ. ವಾಸ್ತವವಾಗಿ ಇದು ಸಮಯದೊಂದಿಗೆ ಸರಿದುಹೋಗುವ ಒಂದು ಘಟ್ಟವಷ್ಟೇ…….?

ಪ್ರೀತಿಗೆ ಪ್ರಥಮ ಸ್ಥಾನ ನೀಡಿ

ಪತಿ-ಪತ್ನಿಯರ ನಡುವೆ ಸಂಘರ್ಷ ಉಂಟಾದಾಗ ವೈವಾಹಿಕ ಜೀವನದ ಬುನಾದಿ ಅಲುಗಾಡುತ್ತದೆ. ಈಗೋ ಎಂಬುದು ಅಡ್ಡವಿಲ್ಲದಿದ್ದರೆ ದಾಂಪತ್ಯ ಜೀವನ ಸುಗಮವಾಗಿ ಸಾಗುತ್ತದೆ. ಅಪೇಕ್ಷೆಗಳು ಹೆಚ್ಚಾಗಿದ್ದರೆ, ಅವು ಪೂರ್ಣಗೊಳ್ಳದಿದ್ದಾಗ ದಿನ ಒಂದೊಂದು ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಆದ್ದರಿಂದ ಪರಿಸ್ಥಿತಿ ಎಷ್ಟೇ ಪ್ರತಿಕೂಲವಾಗಿದ್ದರೂ ಪತಿ-ಪತ್ನಿಯರ ನಡುವೆ ಸದಾ ಪ್ರೀತಿ ಮನೆ ಮಾಡಿದ್ದರೆ ವೈವಾಹಿಕ ಜೀವನ ಸಫಲವಾಗುತ್ತದೆ. ಪತಿ ಪತ್ನಿಯರು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಆದ್ದರಿಂದ ಇಬ್ಬರು ತಮ್ಮ ಅಹಂ ಡಿಕ್ಕಿ ಹೊಡೆಯದಂತೆ ನೋಡಿಕೊಂಡು ಪ್ರೀತಿಯ ಮಂತ್ರವನ್ನು ಜಪಿಸುತ್ತಿರಬೇಕು. ದಾಂಪತ್ಯ ಜೀವನ ಯಶಸ್ವಿಯಾಗಿಲ್ಲದಿದ್ದರೆ ಕೌಟುಂಬಿಕ ಜೀವನ ಸಮಸ್ಯೆಯ ಸುಳಿಗೆ ಸಿಕ್ಕಿಕೊಳ್ಳುತ್ತದೆ.

ರೂಪಾ ಪಾಂಡೆ ಗ್ಲೋಬಲ್ ಅಂಬಾಸಿಡರ್‌, ಯು.ಎನ್‌.ಎ.ಸಮಸ್ಯೆಗೆಲ್ಲ ಮದುವೆಯೇ ಪರಿಹಾರವಲ್ಲ.

ನಮ್ಮ ಸಮಾಜದಲ್ಲಿ ವಿವಾಹವನ್ನು ವಿಜೃಂಭೀಕರಿಸಿ, `ಯಾವುದೇ ಸಮಸ್ಯೆಗೂ ಮದುವೆಯೇ ರಾಮಬಾಣ,’ ಮದುವೆಯ ನಂತರ ಎಲ್ಲ ತನ್ನಷ್ಟಕ್ಕೇ ಸರಿಹೋಗುವುದು ಎಂದು ನಂಬಿಸಲಾಗಿದೆ. ಹೀಗಾಗಿ ಮದುಮಗಳು ಆಸೆ ತುಂಬಿದ ಕಣ್ಣುಗಳಿಂದ ಮುಂದಿನ ಜೀವನದ ಬಗ್ಗೆ ಕನಸು ಕಾಣುತ್ತಾ ಹೊನ್ನಿನಂತಹ ಹಗಲು, ಬೆಳದಿಂಗಳಂತಹ ರಾತ್ರಿಯ ನಿರೀಕ್ಷೆಯಲ್ಲಿರುತ್ತಾಳೆ. ತನ್ನ ಪ್ರಿನ್ಸ್ ಚಾರ್ಮಿಂಗ್‌ ತನ್ನನ್ನು ರಾಜಕುಮಾರಿಯಂತೆ ನೋಡಿಕೊಳ್ಳುವನು ಎಂದು ಭಾವಿಸುತ್ತಾಳೆ. ಸ್ವಲ್ಪ ಮಟ್ಟಿಗೆ ಇದು ಸರಿಯೇ. ಹೊಸತರಲ್ಲಿ ಬಾಳು ಸಂತಸಮಯವಾಗಿರುತ್ತದೆ. ಆದರೆ ಕಾಲ ಬದಲಾಗುತ್ತದೆ ಎಂಬುದನ್ನು ಮರೆಯಬೇಡಿ. ಮದುವೆಯು ನಿಮ್ಮ ಬಾಳಿನ ಕೊರತೆಯನ್ನೆಲ್ಲ ಪೂರೈಸುತ್ತದೆಂದು ಎಣಿಸಬೇಡಿ. ನಿಮಗೆ ಪತಿ ಎಂಬ ವ್ಯಕ್ತಿ ದೊರೆಯುತ್ತಾನೆಯೇ ಹೊರತು ಅಲ್ಲಾವುದ್ದೀನನ ಮಾಯಾಲಾಂದ್ರವಲ್ಲ.

ಎರಡು ದೇಹ ಒಂದೇ ಪ್ರಾಣ

ಇದು ಹೇಳಲು, ಕೇಳಲು ಮತ್ತು ಹಾಡಲು ಬಹಳ ರೊಮ್ಯಾಂಟಿಕ್‌ ಮತ್ತು ರಂಜನೀಯವಾಗಿರುತ್ತದೆ. ಆದರೆ ವಾಸ್ತವವಾಗಿ ಇಬ್ಬರು ವಿಭಿನ್ನ ವ್ಯಕ್ತಿಗಳು ತಮ್ಮ ಸಂಬಂಧವನ್ನು ಜೀವಂತವಾಗಿ ಮತ್ತು ಯಶಸ್ವಿಯಾಗಿ ಉಳಿಸಿಕೊಳ್ಳಲು ಒಟ್ಟಾಗಿ ಹಾಗೂ ಸಮಾನವಾಗಿ ಪ್ರಯತ್ನಪಟ್ಟಾಗ ಮಾತ್ರ ಅದು ಸಕ್ಸೆಸ್‌ಫುಲ್ ಮ್ಯಾರೇಜ್‌ ಎನಿಸಿಕೊಳ್ಳುತ್ತದೆ. ಬಾಯಿಮಾತಿನಲ್ಲಿ `ನಿನ್ನ ಹೆಸರು ಹೇಳುತ್ತಾ ಬೆಳಕು ನೋಡಿ ನಿನ್ನ ಹೆಸರು ಹೇಳುತ್ತಲೇ ರಾತ್ರಿ ಮುಗಿಸುವೆ,’ ಎಂದು ಹೇಳುವುದು, ಹಾಡುವುದೆಲ್ಲ ಈಗ ವಿವಾಹ ಜೀವನವನ್ನು ನಡೆಸುವ ಔಟ್‌ಡೇಟೆಡ್‌ ವಿಧಾನವಾಗಿದೆ.

ಸುಂದರ ಪಾರ್ಟ್‌ನರ್‌ನ ನಿರೀಕ್ಷೆ ಬೇಡ

ಮದುವೆಯ ನಂತರ ನೀವು ಮಾನಸಿಕ ಹಾಗೂ ಭಾವನಾತ್ಮಕ ಸ್ತರದಲ್ಲಿ ಪರಸ್ಪರ ಹೊಂದಿಕೊಂಡು ವಿಶ್ವಾಸದಿಂದ ಬಾಳುತ್ತಿರುತ್ತೀರಿ. ಆದರೆ ನಿಮ್ಮ ನಡುವೆ ಫಿಸಿಕಲ್ ಅಟ್ರಾಕ್ಷನ್‌ ಕಡಿಮೆ ಆಗಬಹುದು. ಅಂದರೆ ಮೊದಲು ನಿಮ್ಮ ಪತಿ ಹೃತಿಕ್‌ ರೋಷನ್‌ನಂತೆ ಆಕರ್ಷಕವಾಗಿದ್ದು, ಅವರ ಡ್ಯಾಶಿಂಗ್‌ ಪರ್ಸನಾಲಿಟಿ ನಿಮ್ಮ ದೃಷ್ಟಿಯನ್ನು ಸೆಳೆಯುತ್ತಿದ್ದದ್ದು ಈಗ ಆಕರ್ಷಕರಹಿತರಾಗಿ ತೋರಬಹುದು.’ ಇದಕ್ಕೆ 2 ಕಾರಣಗಳಿರುತ್ತವೆ. ಮೊದಲನೆಯದೆಂದರೆ ಶಾರೀರಿಕ ಬದಲಾವಣೆ ಅಂದರೆ ಸ್ಥೂಲಕಾಯ. ಹೊಟ್ಟೆಯ ಮೂಲಕ ಪತಿಯ ಹೃದಯವನ್ನು ಗೆಲ್ಲಬೇಕು ಎನ್ನುವ ಸೂತ್ರವನ್ನು ನೀವು ಅನುಸರಿಸಿ. ಅವರು ಬಲೂನಿನಂತೆ ಊದಲು ನೀವೇ ಕಾರಣರಾಗಿರಬಹುದು. ಎರಡನೆಯದು ಮಾನಸಿಕ ಬದಲಾವಣೆ, ಅಂದರೆ ಸದಾ ಜೊತೆಯಲ್ಲಿದ್ದು ಯಾವುದೇ ವಿಶೇಷತೆ ಗಮನಕ್ಕೆ ಬಾರದಿರುವುದು. ನಿಮ್ಮ ಪಾರ್ಟ್‌ನರ್‌ ಆಕರ್ಷಕವಾಗಿಲ್ಲವೆಂದರೆ, ನಿಮ್ಮ ಪ್ರೀತಿ ಬತ್ತಿಹೋಗಿದೆ ಎಂದರ್ಥವಲ್ಲ. ಇದೊಂದು ಬದಲಾವಣೆಯ ಘಟ್ಟ, ದಿನಕಳೆದಂತೆ ಅದೂ ಬದಲಾಗುವುದು.

ಪ್ರೀತಿಯಲ್ಲಿ ಮುಳುಗುವಿಕೆ ಶಾಶ್ವತವಲ್ಲ

ಹನಿಮೂನ್‌ ಫೇಸ್‌ ಎಂದರೆ ಲವ್ ಫಾರ್‌ ಎವರ್‌ ಎನ್ನುವ ಸ್ಥಿತಿಯ ಬಗ್ಗೆ ನಮಗೆಲ್ಲ ತಿಳಿದಿದೆ. ಈ ಫೀಲಿಂಗ್‌ ಶಾಶ್ವತವಾಗಿರುವುದಿಲ್ಲ. ಮದುವೆಯಾದ ಸ್ವಲ್ಪ ಸಮಯದ ಬಳಿಕ ಪ್ರೀತಿಯ ಅನುಭವವಿರಲಿ, “ಅಯ್ಯೋ ನಾನು ಇವರನ್ನು ಅಥವಾ ಇವಳನ್ನು ಏನೆಂದು ಮದುವೆಯಾದೆ? ಯಾವ ವಿಶೇಷವನ್ನು ಕಂಡೆ?” ಎಂದೆನಿಸುತ್ತದೆ.

ನಿಮಗೂ ಹೀಗೆ ಅನಿಸಿರಬಹುದು. ರಿಲ್ಯಾಕ್ಸ್…. ಪ್ರತಿ ದಂಪತಿಗೂ ಒಮ್ಮೆ ಇಂತಹ ಅನುಭವವಾಗಿರುತ್ತದೆ. ಕಾಲ ಕಳೆದಂತೆ, ನೀವು ಪರಸ್ಪರರನ್ನು ಅರ್ಥ ಮಾಡಿಕೊಂಡಾಗ ನಿಮ್ಮ ಶುಷ್ಕ ಜೀವನದ ಮರುಭೂಮಿಯಲ್ಲಿ ಶುದ್ಧ ಪ್ರೀತಿಯ ಪುಷ್ಪ ಅರಳಿ ಅದರ ಪರಿಮಳದಿಂದ ನಿಮ್ಮ ಬಾಳು ಮಧುರವಾಗುತ್ತದೆ.

ಸಂಗಾತಿ ಎಂದರೆ ಬೇಸರವೇ?

ನಿಮ್ಮ ಪಾರ್ಟ್‌ನರ್‌ ಬಗ್ಗೆ ನಿಮಗೆ ಬೇಸರ ಅಥವಾ ಅಸಹನೆ ಉಂಟಾಗುವ ಸ್ಥಿತಿ ಬರಬಹುದು. ಅವರ ಯಾವ ಅಂಶವನ್ನು ಮೆಚ್ಚಿ ಜೀವನ ಸಂಗಾತಿಯನ್ನಾಗಿ ಆರಿಸಿಕೊಂಡಿದ್ದಿರೋ ಆ ಮೆಚ್ಚುಗೆಯ ಅಂಶವೇ ಈಗ ನಿಮಗೆ ಅಸಹನೆಯುಂಟು ಮಾಡಬಹುದು. ಉದಾ : ಅವರ ಸೆನ್ಸ್ ಆಫ್‌ ಹ್ಯೂಮರ್‌. ಪ್ರೆಸೆನ್ಸ್ ಆಫ್‌ ಮೈಂಡ್‌, ಎಲ್ಲರ ನೆರವಿಗೆ ಮುಂದಾಗುವ ಗುಣ ಅಥವಾ ಕ್ರಿಕೆಟ್‌, ಫುಟ್‌ಬಾಲ್‌ ಬಗೆಗಿನ ಗೀಳು ಇತ್ಯಾದಿ…

ಅವರ ಗುಣಗಳನ್ನು ಬದಲಾಯಿಸುವ ಪ್ರಯತ್ನವನ್ನು ಎಂದಿಗೂ ಮಾಡಬೇಡಿ. ನಿಮ್ಮ ಸಂಗಾತಿ ಹೇಗಿದ್ದಾರೋ ಹಾಗೆಯೇ ಸ್ವೀಕರಿಸಿ. ಅವರ ಈ ಗುಣಗಳನ್ನು ಮೆಚ್ಚಿಯೇ ನೀವು ಅವರನ್ನು ಆರಿಸಿಕೊಂಡಿದ್ದು ಎಂಬುದನ್ನು ನೆನಪಿಡಿ.

ಪಾರ್ಟ್‌ನರ್‌ಗೆ ಸರ್‌ಪ್ರೈಸ್‌ ಟ್ರೀಟ್‌

ಹೆಣ್ಣಿಗೆ ಒಂದು ಸಾಮಾನ್ಯ ಬಯಕೆ ಎಂದರೆ ಪತಿ ತನ್ನೊಂದಿಗೆ ರೊಮ್ಯಾಂಟಿಕ್‌ ಹೀರೋನಂತೆ ವರ್ತಿಸಲಿ, ಸದಾ ಪ್ರೀತಿಯ ಡೈಲಾಗ್‌ ಹೇಳುತ್ತಿರಲಿ, ಆಗಾಗ ರೆಡ್‌ ರೋಸಸ್‌ ಕೊಡುತ್ತಿದ್ದು, ಮಿಡ್‌ನೈಟ್‌ ಸರ್‌ಪ್ರೈಸ್‌ ಪ್ಲಾನ್‌ ಮಾಡಲಿ ಎಂದು.

ವಾಸ್ತವವೆಂದರೆ, ನಿಮ್ಮ ವಿವಾಹ ಜೀವನದಲ್ಲಿ ರೊಮ್ಯಾನ್ಸ್ ನ್ನು ಉಳಿಸಿಕೊಳ್ಳಬೇಕಾದರೆ, ನೀವು ನಿಮ್ಮ ಪತಿಯಿಂದ ಏನನ್ನು ನಿರೀಕ್ಷಿಸುವಿರೋ ಅದೇ ರೀತಿ ಅವರೊಂದಿಗೆ ವರ್ತಿಸಿ. ನೀವು ಬಯಸುವಂತೆ ಅವರಿಗೂ ನೀವು ಸರ್‌ಪ್ರೈಸ್‌ ಮಾಡಿ, ಕ್ಯಾಂಡಲ್ ಲೈಟ್‌ ಡಿನ್ನರನ್ನು ಅರೇಂಜ್‌ ಮಾಡಿ. ನೀವು ನಿರೀಕ್ಷಿಸುವ ಗುಡ್‌ ಮಾರ್ನಿಂಗ್‌ ಕಿಸ್‌ನ್ನು ನೀವು ಅವರಿಗೆ ಕೂಡಿ. ಇದೆಲ್ಲ ಅವರಿಗೆ ಅಭ್ಯಾಸವಾದಾಗ ನಿಮಗೂ ರಿಟರ್ನ್‌ಟ್ರೀಟ್‌ ದೊರೆಯುವುದು ಖಂಡಿತ.

ನಿಮ್ಮ ವೈವಾಹಿಕ ಜೀವನದಲ್ಲಿ ರೊಮ್ಯಾನ್ಸ್ ಕಾಪಾಡಿಕೊಳ್ಳಬೇಕೆಂದರೆ ನೀವು ಪತಿಯಿಂದ ಏನನ್ನು ಬಯಸುವಿರೋ ಅದನ್ನು ಅವರಿಗೂ ನೀಡಿ…… ಪರಸ್ಪರರ ಭಾವನೆ ಅರ್ಥ ಮಾಡಿಕೊಳ್ಳಿ.

ಪತಿ ಪತ್ನಿಯರು ಯಾವಾಗಲೂ ಜೊತೆಯಾಗಿ ಕ್ವಾಲಿಟಿ ಟೈಮ್ ಕಳೆಯಲು ಪ್ರಯತ್ನಿಸಬೇಕು. ಅವರು ಸ್ವಲ್ಪ ಸಮಯ ಜೊತೆಯಾಗಿ ಕುಳಿತು ಮಾತನಾಡುವುದೂ ಅವಶ್ಯಕ. ಪರಸ್ಪರರ ಭಾವನೆಗಳನ್ನು ಅರ್ಥ ಮಾಡಿಕೊಂಡು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಬೇಕು. ಜೊತೆಗೆ ನಿಮ್ಮ  ಇಂಡಿವಿಜುಯೆಲ್ ಐಡೆಂಟಿಟಿಯನ್ನೂ ಮೇಂಟೇನ್‌ ಮಾಡಿಕೊಳ್ಳಿ. ಸಂಗಾತಿಯನ್ನು ನಿಮ್ಮಂತೆಯೇ ಆಗಿಸುವ ಪ್ರಯತ್ನ ಖಂಡಿತ ಬೇಡ. ಜೀವನದ ಪ್ರಮುಖ ವಿಷಯಗಳನ್ನು ಒಟ್ಟಾಗಿ ಕುಳಿತು ನಿರ್ಧರಿಸಿ.

ಡಾ. ಗೌರವ್ ಗುಪ್ತ, ಮನೋವಿಜ್ಞಾನಿ ವಿವಾಹ ಜೀವನ ಹೂವಿನ ಹಾಸಿಗೆಯಲ್ಲ

ನೀವು ಪರಸ್ಪರ ಅರ್ಥ ಮಾಡಿಕೊಂಡು ಪ್ರೀತಿಯಿಂದ ಬಾಳುತ್ತಿದ್ದರೂ, ಒಮ್ಮೊಮ್ಮೆ ಕೆಲವು ಪರಿಸ್ಥಿತಿಗಳಲ್ಲಿ ಒಮ್ಮತದಿಂದಿರಲು ಸಾಧ್ಯವಾಗುವುದಿಲ್ಲ. ಆದರೆ ನೀವು ಇಂತಹ ಪರಿಸ್ಥಿತಿಗಳನ್ನು ಡೀಲ್‌ ಮಾಡುವುದನ್ನು ಕಲಿಯಲೇಬೇಕು. ಕೆಲವೊಮ್ಮೆ ಅವರ ಮಾತುಗಳು ನಿಮ್ಮನ್ನು ಚಕಿತಗೊಳಿಸುತ್ತವೆ. ನನ್ನಿಷ್ಟದಂತೆಯೇ ನಡೆಯಬೇಕು ಎನ್ನುವ ಅವರ ಭಾವನೆ ನಿಮಗೆ ಬೇಸರವನ್ನು ಉಂಟುಮಾಬಹುದು. ಏನೇ ಆದರೂ ನೀವು ಸಹನೆಯಿಂದ ಇರಬೇಕಾಗುತ್ತದೆ. ನೀವು ಸ್ವಲ್ಪ ತಗ್ಗಿ ನಡೆಯಿರಿ, ಕಾಲ ಅವರನ್ನು ತಗ್ಗಿಸುತ್ತದೆ. ನಿಮ್ಮ ಈಗೋವನ್ನು ಮಧ್ಯೆ ತರಬೇಡಿ. ಸಮಸ್ಯೆ ಎಂತಹದೇ ಇರಲಿ, ಪರಿಹಾರ ಇದ್ದೇ ಇರುತ್ತದೆ.

ವಿವಾಹವಾದ ಕೆಲವು ಸಮಯದ ನಂತರ ಪತಿಪತ್ನಿಯರಲ್ಲಿ ಕಲಹ, ವೈಮನಸ್ಯ ಉಂಟಾದಾಗ ಕುಟುಂಬದ ಹಿರಿಯರು, ಅದರಲ್ಲೂ ಅಜ್ಜಿಯರು ಸಾಮಾನ್ಯವಾಗಿ ಕೊಡುವ ಗೋಲ್ಡನ್‌ ಅಡ್ವೈಸ್‌ ಎಂದರೆ `ಹ್ಯಾವ್‌ ಎ ಕಿಡ್‌ ಅಂಡ್‌ ಸೇವ್ ಯುವರ್‌ ಮ್ಯಾರೇಜ್‌.’ ಅಂದರೆ `ಒಂದು  ಮಗುವಾದರೆ ಎಲ್ಲ ಸರಿಹೋಗಬಹುದು,’ ಎಂಬುದು. ಆದರೆ  ಸಲಹೆ ನಿಜಕ್ಕೂ ಪ್ರಾಕ್ಟಿಕಲ್ ಅಲ್ಲ. ಇದು ಸಮಸ್ಯೆಗೆ ಪರಿಹಾರ ಅಲ್ಲ. ಬದಲಾಗಿ ಸಮಸ್ಯೆಯನ್ನು ಸಂರ್ಕೀಣಗೊಳಿಸುವ ವಿಧಾನ. ಇಂತಹ ಸಮಯದಲ್ಲಿ ಮಗುವಿನ ಆಗಮನ ಬೇಸರವನ್ನು ಹೆಚ್ಚಿಸುತ್ತದೆ. ಮಗುವಿಗೆ ಜನ್ಮ ಕೊಡುವುದು ಒಂದು ಜವಾಬ್ದಾರಿಯುತ ಕೆಲಸ. ಪತಿಪತ್ನಿಯರು ಅದರ ಪಾಲನೆ ಪೋಷಣೆಗೆ ಸಂಪೂರ್ಣ ಸಿದ್ಧರಾದಾಗ ಮಾತ್ರ ಈ ನಿರ್ಣಯ ತೆಗೆದುಕೊಳ್ಳಬೇಕು.

ಎಲ್ಲ ಪ್ರಶ್ನೆಗಳಿಗೂ ಮದುವೆಯೇ ಉತ್ತರವಲ್ಲ ಎಂಬುದೇ ಸತ್ಯಸಂಗತಿ. ಇದೊಂದು ಒಗಟಿನಂತೆ. ಪತಿಪತ್ನಿಯರು ತಮ್ಮ ಸ್ವಾರ್ಥ ತ್ಯಾಗ ಮಾಡಿ ಒಂದಾಗಿಯೇ ಇದಕ್ಕೆ ಸೂಕ್ತ ಪರಿಹಾರ ಕಾಣಲು ಸಾಧ್ಯ.

– ನಿರ್ಮಲಾ ಪ್ರಸಾದ್‌

ವಿವಾಹ ಸಂಬಂಧಿತ ವಾಸ್ತವಾಂಶಗಳು

ವಿವಾಹವೆಂಬುದು ಒಂದು ಬಿಗಿಯಾದ ಬಂಧನವಾಗಿದ್ದು, ಸಪ್ತಪದಿ ತುಳಿದ ಇಬ್ಬರು ವ್ಯಕ್ತಿಗಳು ಅದರಲ್ಲಿ ಒಂದಾಗುತ್ತಾರೆ. ಈ ಬಂಧನ ನಿಜವಾಗಿಯೂ ಶಕ್ತಿಶಾಲಿಯೇ? ಅಥವಾ ನಿಮಗೆ ಆ ಬಗ್ಗೆ ಅರಿವಿಲ್ಲವೇ? ಬನ್ನಿ, ಇದಕ್ಕೆ ಸಂಬಂಧಿಸಿದ ಕೆಲವು ವಾಸ್ತವಗಳನ್ನು ನಿಮಗೆ ತಿಳಿಸಿಕೊಡುತ್ತೇವೆ.

– ಉದ್ಯೋಗ, ಮಕ್ಕಳು, ಟಿ.ವಿ, ಇಂಟರ್‌ನೆಟ್‌, ಹಾಬೀಸ್‌ ಹಾಗೂ ಕೌಟುಂಬಿಕ ಜವಾಬ್ದಾರಿಗಳಿಂದಾಗಿ ದಂಪತಿ ದಿನದಲ್ಲಿ ಕೇವಲ 4-5 ನಿಮಿಷಗಳಷ್ಟು ಸಮಯವನ್ನು ಮಾತ್ರ ಏಕಾಂತವಾಗಿ ಕಳೆಯಲು ಸಾಧ್ಯವಾಗುತ್ತದೆ.

– ಹುಡುಗರು 25 ವರ್ಷ ವಯಸ್ಸಿಗೆ ಮುಂಚೆಯೇ ಮದುವೆಯಾದರೆ ವಿಚ್ಛೇದನದ ಅಪಾಯ ಹೆಚ್ಚಾಗಿರುತ್ತದೆ. ಮಹಿಳೆಯು ಪುರುಷನಿಗಿಂತ ಹಿರಿಯಳಾಗಿದ್ದರೂ, ವಿಚ್ಛೇದನದ ಸಂಭವ ಹೆಚ್ಚು. ಅದೇ ಪುರುಷ ಹಿರಿಯನಾಗಿದ್ದರೆ ಈ ಸಂಭವ ಕಡಿಮೆ ಇರುತ್ತದೆ.

– ಒಬ್ಬ ವ್ಯಕ್ತಿಯು ಮದುವೆಯಾದ ವಯಸ್ಸಿನ ಮೇಲೆ ಅವನ ಶೈಕ್ಷಣಿಕ ಸ್ತರ ನಿರ್ಧರಿತವಾಗುತ್ತದೆ. ಹೆಚ್ಚು ವಿದ್ಯಾಭ್ಯಾಸ ಮಾಡಿದವರು ವಯಸ್ಸು ಮೀರಿದ ಮೇಲೆ ಮದುವೆಯಾಗುತ್ತಾರೆ. ಅದೇ ಕಡಿಮೆ ವಿದ್ಯೆ ಪಡೆದವರು ಬೇಗನೇ ಮದುವೆಯಾಗುತ್ತಾರೆ.

– ಒಂದು ಅಧ್ಯಯನದಿಂದ ತಿಳಿದು ಬಂದಿರುವ ಅಂಶವೆಂದರೆ, ಯಾವ ಮನೆಗಳಲ್ಲಿ ಕೆಲಸ ಕಾರ್ಯಗಳು ವಿಭಜಿಸಲ್ಪಟ್ಟಿದ್ದು, ಪತಿಯು ತನ್ನ ಪಾಲಿನ ಕೆಲಸಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದರೆ, ಅಂತಹ ಮನೆಯ ಮಹಿಳೆಯರು ಹೆಚ್ಚು ಸಂತೋಷ ಸಮಾಧಾನಗಳಿಂದ ಕೂಡಿರುತ್ತಾರೆ. ಇಲ್ಲವಾದರೆ ಮಹಿಳೆಯರಿಗೆ ಈ ಬಗ್ಗೆ ತಮ್ಮ ಪತಿಯ ಮೇಲೆ ಬೇಸರವಿರುತ್ತದೆ.

– 15 ವರ್ಷಗಳ ಒಂದು ದೀರ್ಘ ಅಧ್ಯಯನ ತಿಳಿಸುವುದೇನೆಂದರೆ, ಒಬ್ಬ ವ್ಯಕ್ತಿಯ ವಿವಾಹಪೂರ್ವ ಪ್ರಸನ್ನತೆಯ ಸ್ತರ ವಿವಾಹಾನಂತರದ ಅವನ ಸಫಲ ಮತ್ತು ಸುಖೀ ಜೀವನವನ್ನು ಸೂಚಿಸುತ್ತದೆ. ಅಂದರೆ, ವಿವಾಹ ಒಬ್ಬ ವ್ಯಕ್ತಿಯ ಪ್ರಸನ್ನತೆಗೆ ಕಾರಣವಾಗುವುದಿಲ್ಲ.

– ಬರ್ತ್‌ ಆರ್ಡರ್ ಸಹ ಕೆಲವೊಮ್ಮೆ ನಿಜವಾಗುವ ಸಾಫಲ್ಯಕ್ಕೆ ಕಾರಣವಾಗುತ್ತದೆ. ಹುಡುಗನಿಗೆ ಹಿರಿಯ ಮಗಳ ಜೊತೆಗೆ ಹಾಗೂ ಹುಡುಗಿಗೆ ಕಿರಿಯ ಮಗನ ಜೊತೆಗೆ ಮಾಡಿದ ಮದುವೆಗಳು ಹೆಚ್ಚು ಸಫಲವಾಗುತ್ತವೆ. ಮೊದಲ ಸಂತಾನದ ಗಂಡು ಹೆಣ್ಣುಗಳ ನಡುವೆ ನಡೆದ ಮದುವೆಯು ದೀರ್ಘಕಾಲ ನಿಲ್ಲಲಾರವು.

– ಮದುವೆ ಮತ್ತು ನಿಶ್ಚಿತಾರ್ಥಗಳಲ್ಲಿ ಉಂಗುರವನ್ನು ಎಡಗೈನ ನಾಲ್ಕನೆಯ ಬೆರಳಿಗೆ ತೊಡಿಸಲಾಗುತ್ತದೆ. ಈ ಬೆರಳಿನಲ್ಲಿರುವ ಒಂದು ವಿಶೇಷ ಹೃದಯವನ್ನು ಮುಟ್ಟತ್ತದೆಂದು ರೋಮನ್ನರು ನಂಬುತ್ತಾರೆ.

– ನ್ಯೂಯಾರ್ಕ್‌ ಯೂನಿವರ್ಸಿಟಿಯಲ್ಲಿ ನಡೆದ ಒಂದು ಸಂಶೋಧನೆಯ ಪ್ರಕಾರ ಗಿಡ್ಡ ವ್ಯಕ್ತಿಗಳು ವೈವಾಹಿಕ ಜೀವನವನ್ನು ಹೆಚ್ಚು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾರೆ. ಅಲ್ಲದೆ, ತಮ್ಮ ಗಿಡ್ಡತನವನ್ನು ಕಾಂಪೆನ್‌ಸೇಟ್‌ ಮಾಡಲು ಹೆಚ್ಚು ದುಡಿದು ಸಂಪಾದಿಸುತ್ತಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ