ನನ್ನ ರಕ್ತದ ಪ್ರತಿಯೊಂದು ಹನಿ ಭಾರತ ಮಾತೆಯ ಸ್ವಾತಂತ್ರ್ಯಕ್ಕಾಗಿ. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕೆಲವು ವ್ಯಕ್ತಿತ್ವಗಳು ತಮ್ಮ ಜೀವನಕ್ಕಿಂತಲೂ ದೊಡ್ಡ ಸಂದೇಶವನ್ನು ದೇಶಕ್ಕೆ ನೀಡಿವೆ. ಅಂತಹ ಅಮರ ಕ್ರಾಂತಿವೀರರಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಹೆಸರು ಮಂಗಲ್ ಪಾಂಡೆ.

ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮವೆಂದು ಕರೆಯಲ್ಪಡುವ 1857ರ ಸಿಪಾಯಿ ದಂಗೆಯ ಮೊದಲ ಕಿಡಿಯನ್ನು ಹೊತ್ತಿಸಿದ ಯೋಧ ಎಂಬ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಬಂಡಾಯ ಎದ್ದು ನಿಂತ ಅವರ ಧೈರ್ಯವೇ ನಂತರ ದೇಶವ್ಯಾಪಿ ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್ತಿಯಾಯಿತು.


ಜನನ ಮತ್ತು ಬಾಲ್ಯ

ಮಂಗಲ್ ಪಾಂಡೆ ಅವರು 1827ರ ಜುಲೈ 19ರಂದು ಉತ್ತರ ಪ್ರದೇಶದ ಇಂದಿನ ಬಲಿಯಾ ಜಿಲ್ಲೆಯ ನಾಗ್ವಾ ಗ್ರಾಮದಲ್ಲಿ ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ದಿವಾಕರ್ ಪಾಂಡೆ ಹಾಗೂ ತಾಯಿ ಅಭಯರಾಣಿ ದೇವಿ. ಬಾಲ್ಯದಿಂದಲೇ ಧೈರ್ಯ, ಶಿಸ್ತು ಮತ್ತು ಧಾರ್ಮಿಕ ಸಂಸ್ಕಾರಗಳನ್ನು ಬೆಳೆಸಿಕೊಂಡಿದ್ದ ಮಂಗಲ್ ಪಾಂಡೆ, ದೈಹಿಕ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸದಿಂದ ಸೈನಿಕ ಸೇವೆಯತ್ತ ಆಕರ್ಷಿತರಾದರು.


ಬ್ರಿಟಿಷ್ ಸೇನೆಗೆ ಸೇರ್ಪಡೆ

ಸುಮಾರು 1849ರಲ್ಲಿ ಅವರು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ 34ನೇ ಬೆಂಗಾಲ್ ನೆಟಿವ್ ಇನ್ಫ್ಯಾಂಟ್ರಿ ಸೇನಾ ಪಡೆಯ ಸಿಪಾಯಿಯಾಗಿ ಸೇರಿದರು. ಆ ಸಮಯದಲ್ಲಿ ಭಾರತೀಯ ಸೈನಿಕರು ಬ್ರಿಟಿಷರ ಅಧೀನದಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಅವರಿಗೆ ಅನೇಕ ರೀತಿಯ ಅನ್ಯಾಯಗಳು ಎದುರಾಗುತ್ತಿದ್ದವು.

  • ಕಡಿಮೆ ವೇತನ
  • ಹುದ್ದೆಗಳಲ್ಲಿ ತಾರತಮ್ಯ
  • ಧಾರ್ಮಿಕ ಭಾವನೆಗಳಿಗೆ ಗೌರವದ ಕೊರತೆ
  • ಬ್ರಿಟಿಷ್ ಅಧಿಕಾರಿಗಳ ಅವಹೇಳನಕಾರಿ ವರ್ತನೆ

ಇವೆಲ್ಲವೂ ಭಾರತೀಯ ಸಿಪಾಯಿಗಳಲ್ಲಿ ಅಸಮಾಧಾನವನ್ನು ಹೆಚ್ಚಿಸುತ್ತಿದ್ದವು.


ಎನ್‌ಫೀಲ್ಡ್  ರೈಫಲ್ ಮತ್ತು ಕಾರ್ಟ್ರಿಡ್ಜ್  ವಿವಾದ

1856–57ರಲ್ಲಿ ಬ್ರಿಟಿಷ್ ಸೇನೆ ಹೊಸ ಎನ್‌ಫೀಲ್ಡ್ P-53 ರೈಫಲ್ ಅನ್ನು ಪರಿಚಯಿಸಿತು.

ಈ ರೈಫಲ್ ಬಳಸಲು ಮೊದಲು ಕಾರ್ಟ್ರಿಡ್ಜ್‌ನ ತುದಿಯನ್ನು ಹಲ್ಲಿನಿಂದ ಕಚ್ಚಿ ತೆರೆಯಬೇಕಾಗುತ್ತಿತ್ತು.

ಈ ಕಾರ್ಟ್ರಿಡ್ಜ್‌ಗಳಿಗೆ ಹಸು ಮತ್ತು ಹಂದಿಯ ಕೊಬ್ಬಿನಿಂದ ಗ್ರೀಸ್ ಮಾಡಲಾಗಿದೆ ಎಂಬ ಸುದ್ದಿ ಭಾರತೀಯ ಸೈನಿಕರಲ್ಲಿ ಹರಡಿತು.

  • ಹಸುವನ್ನು ಪವಿತ್ರವೆಂದು ಪೂಜಿಸುವ ಹಿಂದೂಗಳಿಗೆ ಇದು ಧರ್ಮದ ವಿರುದ್ಧವಾಗಿತ್ತು.
  • ಹಂದಿಯನ್ನು ಅಪವಿತ್ರವೆಂದು ಪರಿಗಣಿಸುವ ಮುಸ್ಲಿಮರಿಗೂ ಇದು ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿತ್ತು.

ಇದರಿಂದ ಭಾರತೀಯ ಸೈನ್ಯದಲ್ಲಿದ್ದ ಹಿಂದೂ ಮತ್ತು ಮುಸ್ಲಿಂ ಸೈನಿಕರಲ್ಲಿ ಆಕ್ರೋಶ ಉಕ್ಕಿ ಹರಿಯತೊಡಗಿತು.


ಬ್ಯಾರಕ್‌ಪೋರ್‌ನಲ್ಲಿ ನಡೆದ ಐತಿಹಾಸಿಕ ಬಂಡಾಯ

1857ರ ಮಾರ್ಚ್ 29ರಂದು ಪಶ್ಚಿಮ ಬಂಗಾಳದ ಬ್ಯಾರಕ್‌ಪೋರ್ ಸೇನಾ ಶಿಬಿರದಲ್ಲಿ ಮಂಗಲ್ ಪಾಂಡೆ ಇತಿಹಾಸ ನಿರ್ಮಿಸಿದರು.

ಅವರು ಬ್ರಿಟಿಷ್ ಅಧಿಕಾರಿಗಳ ವಿರುದ್ಧ ಶಸ್ತ್ರ ಹಿಡಿದು ಬಂಡಾಯ ಘೋಷಿಸಿದರು. ಅಂದು ನಡೆದ ಘಟನೆಯಲ್ಲಿ ಅವರು:

  • ಸರ್ಜೆಂಟ್ ಮೇಜರ್ ಜೇಮ್ಸ್ ಹೆವ್ಸನ್ (James Hewson) ಮೇಲೆ ದಾಳಿ ನಡೆಸಿದರು.
  • ಲೆಫ್ಟಿನೆಂಟ್ ಹೆನ್ರಿ ಬಾಘ್ (Henry Baugh) ಮೇಲೆ ಗುಂಡು ಹಾರಿಸಿದರು.
  • ಬ್ರಿಟಿಷ್ ಅಧಿಕಾರಿಗಳನ್ನು ಎದುರಿಸಿ ಒಬ್ಬರೇ ಹೋರಾಡಿದರು.

ಇತರ ಭಾರತೀಯ ಸೈನಿಕರೂ ಸಹಾ ತನ್ನ ಜೊತೆಗೂಡಿ, ನತಮ್ಮ ಧರ್ಮ ಮತ್ತು ಜಾತಿ ರಕ್ಷಣೆಗೆ ಹೋರಾಡಲು ಕರೆ ನೀಡಿದರು ಆದರೆ ಹೆಚ್ಚಿನ ಸೈನಿಕರು ತಕ್ಷಣವೇ ಅವರನ್ನು ಬೆಂಬಲಿಸಲು ಮುಂದೆ ಬರಲಿಲ್ಲ ಎನ್ನುವುದೇ ವಿಷಾಧನೀಯವಾದ ಸಂಗತಿ


ಬಂಧನ ಮತ್ತು  ಮರಣದಂಡನೆ

ಬ್ರಿಟಿಷರು ಅವರನ್ನು ಜೀವಂತವಾಗಿ ಬಂಧಿಸಲು ಯತ್ನಿಸಿದಾಗ ಮಂಗಲ್ ಪಾಂಡೆ ಬ್ರಿಟೀಷರ ಕೈಗೆ ಸಿಕ್ಕಿಕೊಳ್ಳಬಾರದು ಎಂದು ಸ್ವತಃ ತಮ್ಮ ಎದೆಯತ್ತ ಗುಂಡು ಹಾರಿಸಿಕೊಂಡರು. ಆದರೆ ಅವರು ಸಾವನ್ನಪ್ಪದೆ ಗಾಯಗೊಂಡ ಸ್ಥಿತಿಯಲ್ಲಿ ಬಂಧಿತರಾದರು. ಬ್ರಿಟಿಷ್ ಸೇನಾ ನ್ಯಾಯಾಲಯವು ಮಂಗಲ್ ಪಾಂಡೆ ಅವರಿಗೆ ಮರಣದಂಡನೆ ವಿಧಿಸಿತು. ಮೊದಲಿಗೆ ಏಪ್ರಿಲ್ 18ರಂದು ಗಲ್ಲು ಶಿಕ್ಷೆ ನಿಗದಿಯಾಗಿದ್ದರೂ, ಭಾರತೀಯ ಸೈನಿಕರಲ್ಲಿ ಮತ್ತಷ್ಟು ಬಂಡಾಯ ಉಂಟಾಗುವ ಭಯದಿಂದ ಶಿಕ್ಷೆಯನ್ನು ಮುಂಚಿತಗೊಳಿಸಲಾಯಿತು1857ರ ಏಪ್ರಿಲ್ 8ರಂದು, ಕೇವಲ 29ನೇ ವಯಸ್ಸಿನಲ್ಲಿಬ್ಯಾರಕ್‌ಪೋರ್‌ನಲ್ಲಿ ಅವರನ್ನು ಗಲ್ಲಿಗೇರಿಸಲಾಯಿತು. ಅವರನ್ನು ಗಲ್ಲಿಗೇರಿಸಲು ಸ್ಥಳೀಯ ಜಲ್ಲಾದರು ನಿರಾಕರಿಸಿದ್ದರಿಂದ, ವಿಶೇಷವಾಗಿ ಕಲ್ಕತ್ತಾದಿಂದ ಜಲ್ಲಾದರನ್ನು ಕರೆಸಲಾಗಿತ್ತು ಎನ್ನುವ ಉಲ್ಲೇಖಗಳು ಇತಿಹಾಸದಲ್ಲಿ ಕಂಡುಬರುತ್ತವೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ