``ನಮಗೆ ಗೊತ್ತಿರುವ ಕಲೆಯಲ್ಲಿ ನಮಗೆ ವಿಶ್ವಾಸವಿರಬೇಕು. ನಾನು ಅದನ್ನು ಚೆನ್ನಾಗಿ ಮಾಡ್ತೀನಿ ಎಂಬ ಧೈರ್ಯ ನಮಗಿರಬೇಕು,'' ಎಂದು ಸಹನಾ ವಿಶ್ವಾಸಪೂರ್ವಕವಾಗಿ ಹೇಳುತ್ತಾರೆ.

ಸಹನಾ ಪಿಂಜಾರ್‌...... ಅಂದು ಬೀದಿ ನಾಟಕಗಳಲ್ಲಿ ಅರಳು ಹುರಿದಂತಹ ಮಾತುಗಳಿಂದ ಗಮನಸೆಳೆಯುತ್ತಿದ್ದ ಪುಟ್ಟ ಹುಡುಗಿ ಇಂದು ಕಲಾವಿದರು ಹೇಗೆ ನಟಿಸಬೇಕು, ರಂಗ ವೇದಿಕೆ ಹೇಗಿರಬೇಕು, ಬೆಳಕಿನ ವಿನ್ಯಾಸ ಹೇಗಿರಬೇಕು, ಧ್ವನಿ ಹೇಗಿದ್ದರೆ ಚೆನ್ನ ಎಂದು ಕರಾರುವಾಕ್ಕಾಗಿ ಹೇಳಿಕೊಡು ತಜ್ಞೆ.

ಕಡುಬಡತನದಿಂದ ಬಂದ ಈ ಹುಡುಗಿಗೆ ಇಷ್ಟೆಲ್ಲ ಸಾಧನೆ ಮಾಡಲು ಹೇಗೆ ಸಾಧ್ಯವಾಯಿತು? ಇದರ ಹಿನ್ನೆಲೆಯ ಬಗ್ಗೆ ತಡಕಾಡಿದಾಗ ಸದಾ ಹೊಸದನ್ನು ತಿಳಿದುಕೊಳ್ಳಬೇಕೆಂಬ ಹಂಬಲ, ಏನನ್ನಾದರೂ ವಿಶಿಷ್ಟವಾದುದನ್ನು ಮಾಡಿ ತೋರಿಸಬೇಕೆಂಬ ಛಲವೇ ಆಕೆಯನ್ನು ಇಂದು ಈ ಮಟ್ಟದಲ್ಲಿ ತಂದು ನಿಲ್ಲಿಸಿದೆ.

ರಂಗ ದೀಕ್ಷೆ

04

ಸಹನಾಳ ಹುಟ್ಟೂರು ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲ್ಲೂಕಿನ ಎಚ್‌. ವೀರಾಪುರ. ತಂದೆ ಬಾಲೇಸಾಬ್‌, ತಾಯಿ ಗೌರಿಬೀ. ಊರೂರಿಗೆ ಅಲೆದಾಡಿ ಗಾದಿ ಹಾಕಿಕೊಡು ಕೈಕಸುಬು ಹೊಂದಿದ ಕುಟುಂಬ. ಸಹನಾ ಬಹುಶಃ ಅಲ್ಲಿಯೇ ಇದ್ದಿದ್ದರೆ ಆಕೆ ಸಾಧಾರಣ ಹುಡುಗಿಯಾಗಿಯೇ ಉಳಿಯುತ್ತಿದ್ದರೋ ಏನೋ!

ಸಹನಾರ ತಾಯಿಯ ಊರು ಹೊಸಪೇಟೆ. ತಾಯಿಯ ತಮ್ಮ ಅಂದರೆ ಸೋದರಮಾವ ಅಬ್ದುಲ್ ‌ಪಿಂಜಾರ್‌ ರಂಗಕರ್ಮಿ. ತಮ್ಮ ಮನೆತನದ ಮೂಲ ಉದ್ಯೋಗ ಗಾದಿ ತಯಾರಿಸಿಕೊಡುವುದರ ಜೊತೆಗೆ ಅವರು ಬೀದಿ ನಾಟಕಗಳಿಂದ ಜನಜಾಗೃತಿ ಮಾಡುವುದರಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅಕ್ಕನ ಮಕ್ಕಳು ಚೆನ್ನಾಗಿ ಓದಿ ಸಮಾಜದಲ್ಲಿ ಏನನ್ನಾದರೂ ಸಾಧಿಸಬೇಕೆಂಬುದು ಅವರ ಮಹತ್ವಾಕಾಂಕ್ಷೆಯಾಗಿತ್ತು. ಹೀಗಾಗಿ ಸಹನಾ ಸೇರಿದಂತೆ ಆಕೆಯ ಮೂವರು ಸೋದರರನ್ನೂ ಹೊಸಪೇಟೆಯ ತಮ್ಮ ಮನೆಗೆ ಕರೆತಂದು ಓದಿಸಿದರು.

ಸಹನಾ ಚಿಕ್ಕವರಿದ್ದಾಗಿನಿಂದಲೇ ಬಲು ಮಾತುಗಾತಿ. ಆಕೆಯನ್ನು ತಮ್ಮ ಬೀದಿ ನಾಟಕಗಳಲ್ಲಿ ತೊಡಗಿಸುವುದರ ಮೂಲಕ ಪಿ. ಅಬ್ದುಲ್ ‌ಅವರು ತಮ್ಮ ಸಾಮಾಜಿಕ ಚಟುವಟಿಕೆಗಳನ್ನು ವಿಸ್ತರಿಸುತ್ತ ಹೋದರು. `ಹುಡುಗಿ ಓದಲೇಬೇಕು' ಎಂಬ ಬೀದಿ ನಾಟಕದ ಮೂಲಕ ಈ ಪುಟ್ಟ ಹುಡುಗಿ ಹೊಸಪೇಟೆ ನಾಗರಿಕರ ಗಮನ ಸೆಳೆಯುವಂತಾಯಿತು. ಆಗ ಆಕೆಯ ವಯಸ್ಸು ಕೇವಲ 8 ಮಾತ್ರ.

DSCN3282

ಬೀದಿ ನಾಟಕಗಳು ಜನರಲ್ಲಿ ಅರಿವು ಮೂಡಿಸುತ್ತವೆ. ಅವರಲ್ಲಿನ ಮೂಢನಂಬಿಕೆ ನಿವಾರಿಸಲು ನೆರವಾಗುತ್ತವೆ ಎಂಬ ಸ್ಪಷ್ಟ ಕಲ್ಪನೆ ಅಬ್ದುಲ್ ಅವರಿಗಿತ್ತು. ಹೊಸ ಹೊಸ ವಿಷಯಗಳನ್ನಿಟ್ಟುಕೊಂಡ ಬೀದಿ ನಾಟಕಗಳಿಂದ ಅವರು ಹೊಸಪೇಟೆಯಲ್ಲಷ್ಟೇ ಅಲ್ಲ, ಇಡೀ ಬಳ್ಳಾರಿ ಜಿಲ್ಲೆಯಾದ್ಯಂತ ವಿಶಿಷ್ಟ ಕ್ರಾಂತಿಯನ್ನೇ ಮಾಡಿದ್ದಾರೆ.

ಭಾವೈಕ್ಯತಾ ವೇದಿಕೆಯಡಿ `ಕಾಲರಾ,' `ನಾವು ಮನುಜರು,' `ಈ ನೆಲ ಈ ಜಲ,' `ಅರಿವು,' `ಜೀತ ಪದ್ಧತಿ,' `ಚುನಾವಣೆ,' `ದಹನ,' `ಬಂದರು ಬಂದರು,' `ನೆರವು,' `ಕಳ್ಳಕಳ್ಳ ಎಚ್ಚರಿಕೆ,' `ಓ ಮತದಾರ ಪ್ರಭುವೆ,' `ಮಗಳು ಮಾತನಾಡಿದಳು' ಮುಂತಾದ ಅನೇಕ ಬೀದಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಸಹನಾ ಈ ನಾಟಕಗಳಲ್ಲಿ ಒಂದು ಸಾಮಾನ್ಯ ಪಾತ್ರವೇ ಆಗಿದ್ದರೂ ತನ್ನ ಅಭಿನಯ ಚಾತುರ್ಯ ಹಾಗೂ ಮಾತುಗಳಿಂದ ಎಲ್ಲರ ಗಮನಸೆಳೆಯುತ್ತಿದ್ದರು. ಈ ಪುಟ್ಟ ಬಾಲೆಗೆ ಮಾವ ಅಬ್ದುಲ್ ‌ಒಂದು ರೀತಿಯಲ್ಲಿ ರಂಗದೀಕ್ಷೆಯನ್ನೇ ಕೊಟ್ಟುಬಿಟ್ಟಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ