ಕಲಾವಿದ, ಡ್ರಾಗ್ ಪರ್ಫಾರ್ಮರ್ ಮತ್ತು ಸಕ್ರಿಯ ಕಾರ್ಯಕರ್ತರಾದ ರಾಣಿ ಕೋಹಿನೂರ್ (ಸುಶಾಂತ್ ದಿವ್ಗೀಕರ್) ಅವರು ಪೂಜಾ ಚೌಧರಿ ಅವರೊಂದಿಗಿನ 'ಇನ್‌ಕಾಂಟ್ರೋವರ್ಸಿಯಲ್' ಪಾಡ್‌ಕಾಸ್ಟ್‌ನಲ್ಲಿ ತೃತೀಯ ಲಿಂಗಿಗಳ ತಿದ್ದುಪಡಿ ಮಸೂದೆಯ ವಿರುದ್ಧ ತೀವ್ರವಾಗಿ ಗುಡುಗಿದ್ದಾರೆ.

ಈ ಮಸೂದೆಯು ಸಂಪೂರ್ಣವಾಗಿ ಅಸಂಬದ್ಧವಾಗಿದೆ.  ಏಕೆಂದರೆ ಇದು ನಲ್ಸಾ (NALSA) ತೀರ್ಪು ನಮಗೆ ನೀಡಿದ್ದ ಘನತೆಯನ್ನು ಕಿತ್ತುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ತೃತೀಯ ಲಿಂಗಿಗಳ ಗುರುತನ್ನು ಘನತೆಯಿಂದ ಮಾನ್ಯ ಮಾಡಿದ ಮೊದಲ ದೇಶಗಳಲ್ಲಿ ಭಾರತವೂ ಒಂದಾಗಿತ್ತು, ಆದರೆ ಈಗ ಆ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದಿದ್ದಾರೆ.

ಶಾಸಕರ ಆದ್ಯತೆಗಳನ್ನು ಪ್ರಶ್ನಿಸಿದ ಕೋಹಿನೂರ್, “ನಿಮ್ಮ ಅತ್ಯಾಚಾರ ಕಾನೂನುಗಳನ್ನು ನೀವು ಸರಿಪಡಿಸಿದ್ದೀರಾ? ಮಕ್ಕಳ ಕಳ್ಳಸಾಗಣೆ ತಡೆದಿದ್ದೀರಾ? ಜನರು ಪ್ರತಿದಿನ ಎದುರಿಸುತ್ತಿರುವ ಅದೆಷ್ಟೋ ನೈಜ ಸಮಸ್ಯೆಗಳ ಮೇಲೆ ಗಮನ ಹರಿಸುವುದನ್ನು ಬಿಟ್ಟು ನಮ್ಮ ದೇಹಗಳ ಬಗ್ಗೆ ನಿಮಗೆ ಯಾಕಿಷ್ಟು ಚಿಂತೆ? ಮಹಿಳೆಯರಿಗಾಗಿ, ಲಿಂಗಪರಿವರ್ತಿತರಿಗಾಗಿ ಮತ್ತು ಇಡೀ ಸಮುದಾಯಗಳಿಗಾಗಿ ಕೇವಲ ಪುರುಷರೇ ಕಾನೂನುಗಳನ್ನು ರಚಿಸುತ್ತಿದ್ದಾರೆ. ಇಲ್ಲಿ ನಮ್ಮ ಪ್ರಾತಿನಿಧ್ಯ ಎಲ್ಲಿದೆ? ಕನಿಷ್ಠಪಕ್ಷ ಯಾರ ಬಗ್ಗೆ ಕಾನೂನುಗಳನ್ನು ರಚಿಸುತ್ತಿದ್ದೀರೋ ಆ ಜನರನ್ನು ಸಂಪರ್ಕಿಸಿ. ನಾವು ಆ ಸಂಭಾಷಣೆಯ ಭಾಗವಾಗದೆ ನಮ್ಮ ಅಸ್ತಿತ್ವವನ್ನು ನಿರ್ಧರಿಸಲು ನಿಮಗೆ ಸಾಧ್ಯವಿಲ್ಲ”ಎಂದಿದ್ದಾರೆ.

ನೀತಿಗಳ ಹೊರತಾಗಿ, ರಾಣಿ ಮನೋರಂಜನಾ ಉದ್ಯಮದ ಕುರಿತೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಜೀವನದ ಕಥೆಗಳನ್ನು ತೋರಿಸಿ ಲಾಭ ಪಡೆಯುವವರು, ನಿಜ ಜೀವನದಲ್ಲಿ ಬೆಂಬಲ ನೀಡುವ ವಿಷಯ ಬಂದಾಗ ಮೌನಕ್ಕೆ ಶರಣಾಗುತ್ತಾರೆ. ಪರದೆಯ ಮೇಲೆ ನಮ್ಮನ್ನು ಸಂಭ್ರಮಿಸುವವರು ವಾಸ್ತವದಲ್ಲಿ ನಮ್ಮನ್ನು ಕೈಬಿಡುತ್ತಾರೆ ಎಂದು ಟೀಕಿಸಿದ್ದಾರೆ.

ತಮ್ಮ ಜೀವನದ ಬಗ್ಗೆ ಮಾತನಾಡುತ್ತಾ, “ಸುತ್ತಲಿನ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಅರಿವಿಲ್ಲದಿದ್ದಾಗ ನಾನು ಬಾತ್‌ರೂಮ್‌ನಲ್ಲಿ ಹಾಡಲು ಶುರುಮಾಡಿದೆ. ಅಲ್ಲಿಂದ ಇಂದು ಸಾವಿರಾರು ಜನರ ಮುಂದೆ ಪ್ರದರ್ಶನ ನೀಡುವವರೆಗೆ ಬೆಳೆದಿದ್ದೇನೆ” ಎಂದಿದ್ದಾರೆ.

ಸಮುದಾಯದ ಸದಸ್ಯರಿಗೆ ಧೈರ್ಯ ತುಂಬಿದ ಅವರು, “ಯಾರಾದರೂ ತಾವು ಒಬ್ಬಂಟಿ ಎಂದು ಭಾವಿಸಿದರೆ, ನೆನಪಿಡಿ ನೀವು ಒಬ್ಬಂಟಿಯಲ್ಲ. ನಾನು ನಿಮಗಾಗಿ ನಿಲ್ಲುತ್ತೇನೆ. ಯಾವುದೇ ನೀತಿ, ಮಸೂದೆ ಅಥವಾ ವ್ಯವಸ್ಥೆಯು ನೀವು ಯಾರು ಎಂಬುದನ್ನು ಅಳಿಸಲು ಸಾಧ್ಯವಿಲ್ಲ” ಎಂದು ಭರವಸೆ ನೀಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ