ನಮ್ಮ ರಾಜ್ಯದ ಆನೇಕಲ್ ತಾಲ್ಲೂಕಿನ ತಿರುಮಲಗೊಂಡನಹಳ್ಳಿ ಮೂಲದ 24 ವರ್ಷದ ವಿದ್ಯಾ ಯೆಲ್ಲಾರೆಡ್ಡಿ ಸ್ವತಃ ಅಂಧೆ ಆಗಿದ್ದರೂ, ಟೆಕ್ನಿಕಲ್ ವಿಭಾಗದಲ್ಲಿ ತಮ್ಮ ಸ್ನಾತಕೋತ್ತರ ವಿದ್ಯಾಭ್ಯಾಸ ಪೂರೈಸಿಕೊಂಡರು. ಇದಕ್ಕಾಗಿ ವಿದ್ಯಾ ಬಹಳಷ್ಟು ಸಂಘರ್ಷ ನಡೆಸಿದ್ದಾರೆ. ಆದರೆ ಆಕೆ ಎಂದೂ ಹಿಮ್ಮೆಟ್ಟಲಿಲ್ಲ. ಬದಲಿಗೆ ಹೆಜ್ಜೆ ಹೆಜ್ಜೆಗೂ ಯಶಸ್ಸಿನ ಸೋಪಾನವೇರಿ ಮೇಲೆ ಬಂದಿದ್ದಾರೆ. ಇದೀಗ ಅವರು ತಮ್ಮದೇ ಸಂಸ್ಥೆ ರೂಪಿಸುತ್ತಿದ್ದಾರೆ. ಇದರಿಂದ ಗಣಿತ, ವಿಜ್ಞಾನದಲ್ಲಿ ಉನ್ನತ ವ್ಯಾಸಂಗ ಮಾಡಬಯಸುವ ಅಂಧ ಮಕ್ಕಳಿಗೆ ಹೆಚ್ಚಿನ ಸಹಕಾರ ಸಿಗಲಿದೆ. ವಿದ್ಯಾರ ಈ ಯಶಸ್ವೀ ಸಾಹಸಗಾಥೆಗಾಗಿ ರೀಬೋಕ್‌ ಸಂಸ್ಥೆ `ಫಿಟ್‌ ಟು ಫೈಟ್‌' ಪ್ರಶಸ್ತಿ ಪುರಸ್ಕಾರಗಳಿಂದ ಸನ್ಮಾನಿಸಿದೆ.

ಹೆತ್ತವರ ಸಹಕಾರ

ಹುಟ್ಟಿನಿಂದ ಅಂಧೆಯಾದ ವಿದ್ಯಾ ಚಿಕ್ಕ ವಯಸ್ಸಿನಿಂದಲೇ ಹೋರಾಟಗಾರ್ತಿ. ಆಕೆಯ ತಾಯಿತಂದೆ ಎಲ್ಲ ಮಕ್ಕಳಂತೆಯೇ ಇವಳನ್ನು ಸಾಧಾರಣ ರೀತಿಯಲ್ಲಿ ಸಾಕಿ ಸಲಹಿದರು. ಆಕೆ ಹೇಳುತ್ತಾರೆ, ``ನನ್ನ ತಾಯಿ ತಂದೆ  ಕಲಿತವರಲ್ಲ. ಆದರೆ ಅವರ ಮಾರ್ಗದರ್ಶನ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದೆ. ಹಳ್ಳಿಯಲ್ಲಿ ನೆಲೆಸಿದ ಕಾರಣ ಯಾವುದೇ ಆಧುನಿಕ ಸೌಲಭ್ಯಗಳ ಬಗ್ಗೆ ಅವರಿಗೆ  ಮಾಹಿತಿ ಇರಲಿಲ್ಲ. ನನ್ನನ್ನು  ಬೆಂಗಳೂರಿನಂಥ ಮಹಾನಗರದ ವೈದ್ಯರುಗಳಿಗೆ ತೋರಿಸಿ ಆಧುನಿಕ ಚಿಕಿತ್ಸೆ ಕೊಡಿಸುವ ಐಡಿಯಾ ಇರಲಿಲ್ಲ. ನಾನು ಅವರ ಮೊದಲ ಸಂತಾನ ಹಾಗೂ ಪ್ರೀಮೆಚ್ಯೂರ್‌ ಬೇಬಿ ಆದಕಾರಣ ಅವರು ಬಹಳ ಗಾಬರಿಗೊಂಡಿದ್ದರು. ಇದೆಲ್ಲ ನನಗೆ ಅರಿವಾಗುವಷ್ಟರಲ್ಲಿ ಬಹಳ ತಡವಾಗಿತ್ತು. ನನಗಿಂತ ಚಿಕ್ಕವರಾದ ಇಬ್ಬರು ತಂಗಿಯರು ನಾರ್ಮಲ್ ಆಗಿದ್ದಾರೆ.

``ಮೊದಲ ಮಗು ಹೆಣ್ಣಾಗಿ ಹುಟ್ಟಿದ್ದೇ ಅವರಿಗೆ ಘೋರ ನಿರಾಸೆ ತರಿಸಿತ್ತು. ಅಂಥದ್ದರಲ್ಲಿ ಆ ಮಗು ಹುಟ್ಟು ಕುರುಡು ಎಂದು ಗೊತ್ತಾದರೆ ಅವರಿಗೆ ಇನ್ನೆಷ್ಟು ಕಂಗಾಲಾಗಬೇಡ..... ಹಳ್ಳಿಯ ಜನ ತಲೆಗೊಂದರಂತೆ ಅವರಿಗೆ ಸಲಹೆ ನೀಡಿದರು. ಅಂದರೆ, ಹುಡುಗಿಯನ್ನು ಶಾಲೆಗೆ ಸೇರಿಸಬೇಡಿ, ಇವಳನ್ನು ಮುಂದೆ ನೋಡಿಕೊಳ್ಳುವರಾರು? ಮುಂದೆ ಯಾರು ಇವಳನ್ನು ಮದುವೆ ಆಗ್ತಾರೆ? ಮೈನೆರೆದು ದೊಡ್ಡವಳಾದಾಗ ಇವಳ ಗರ್ಭಕೋಶ ತೆಗೆಸಿಬಿಡಿ, ಮುಂದೆ ತಾಯಿ ಆಗುವ ಆತಂಕ ಇರುವುದಿಲ್ಲ.... ಇತ್ಯಾದಿ ಹೇಳಿದ್ದಾರೆ.

``ಆದರೆ ಸಾಹಸಿಗಳಾದ ನನ್ನ ಹೆತ್ತವರು ಇಂಥ ಯಾವ ಮಾತುಗಳಿಗೂ ಕಿವಿಗೊಡಲಿಲ್ಲ. ಎಲ್ಲರ ಸಲಹೆ ಕೇಳಿದರು, ತಮಗೆ ಸರಿತೋರಿದ್ದನ್ನು ವಿವೇಕಯುತವಾಗಿ ನಡೆಸಿದರು. ನನ್ನ ತಾಯಿಗೆ 12 ವರ್ಷಕ್ಕೆ ಮೊದಲೇ ಮದುವೆ ಆಗಿತ್ತು. ಅವರಿಗೆ 16 ತುಂಬುವಷ್ಟರಲ್ಲೇ ನಾನು ಹುಟ್ಟಿದ್ದೆ. ಆದ್ದರಿಂದ ಪರಿಸ್ಥಿತಿ ಸರಿತೂಗಿಸಲು ಬಹಳ ಕಷ್ಟಪಟ್ಟಿದ್ದಾರೆ.''

ಸಂಘರ್ಷದ ಆರಂಭ

ವಿದ್ಯಾ ಹೇಳುತ್ತಾರೆ, ``ಅಂಧರ ಮಕ್ಕಳ ಶಾಲೆ ನಮ್ಮಂಥ ಹಳ್ಳಿಗಳಲ್ಲಿ ಎಲ್ಲಿಂದ ಬರಬೇಕು? ಎಲ್ಲ ನಗರಗಳಲ್ಲಿ ಕೇಂದ್ರೀಕೃತಗೊಂಡಿವೆ. ಹೀಗಿರುವಾಗ ಎಲ್ಲಿ ಏನು ಮಾಡಬೇಕೆಂದು ಯಾರಿಗೂ ಹೊಳೆಯಲಿಲ್ಲ. ನಂತರ ಹೆತ್ತವರು ನನ್ನನ್ನು ಬೆಂಗಳೂರಿನ ಒಂದು ಹಾಸ್ಟೆಲ್‌ಗೆ ಸೇರಿಸಿ, ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ನಾಂದಿ ಹಾಡಿದರು. ಹಾಸ್ಟೆಲ್‌ನಿಂದ ಶಾಲೆಗೆ ನಾನು ಒಬ್ಬಳೇ ಹೋಗಿಬರುತ್ತಿದ್ದೆ. ಅಲ್ಲಿ ನನಗೆ ಉತ್ತಮ ಮಟ್ಟದ ವಿದ್ಯಾಭ್ಯಾಸ ದೊರೆಯಿತು. ಆದರೆ ಹೈಸ್ಕೂಲ್‌‌ನಲ್ಲೂ ಸಹ ನನ್ನ ಗಣಿತ, ವಿಜ್ಞಾನ  ಹೆಚ್ಚಿಗೇನೂ ಸುಧಾರಿಸಿರಲಿಲ್ಲ. ವಿಜ್ಞಾನದ 3 ಭಾಗಗಳ ಡ್ರಾಯಿಂಗ್ಸ್ ಕಲಿಸುವ ಪ್ರಮೇಯವೇ ಇರಲಿಲ್ಲ. ಏಕೆಂದರೆ ಅದಕ್ಕೆ ದೃಷ್ಟಿ ಮಾಧ್ಯಮ ಅಗತ್ಯವಾಗಿತ್ತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ