ಕಥೆ - ಸುನಂದಾ ಕುಲಕರ್ಣಿ 

ವಿಭಾ ಕಿಟಕಿಯಿಂದ ಹೊರಗೆ ನೋಡುತ್ತಾ ನಿಂತಿದ್ದಳು. ಅವಳ ದೃಷ್ಟಿ ಶೂನ್ಯದಲ್ಲಿ ನೆಟ್ಟಿತ್ತು. ಮುಖದಲ್ಲಿ ಗೆಲುವಿನ ಛಾಯೆ ಇರಲಿಲ್ಲ. ಅದನ್ನು ಕಂಡು ಅವಳ ತಾಯಿಗೆ ಆತಂಕವಾಯಿತು.

ಇಂದಿರಾ ಮಗಳನ್ನು ಕೇಳಿದರು, ``ಏಕೆ ವಿಭಾ, ನೀನು ಟ್ರಿಪ್‌ ಮುಗಿಸಿಕೊಂಡು ಬಂದಂದಿನಿಂದ ಸಪ್ಪಗಿದ್ದೀಯಾ? ಮುರಳಿ ಜೊತೆ ಜಗಳ ಆಡಿಲ್ಲ ತಾನೇ?''

``ಇಲ್ಲಮ್ಮ.... ಹಾಗೇನಿಲ್ಲ.....'' ಎಂದು ವಿಭಾ ಅಲ್ಲಿಂದ ಸರಿದು ಹೋದಳು.

``ಅಲ್ಲ.... ನೀನು ಬಂದು 7 ದಿನ ಆಯಿತು. ಗಂಡನ ಮನೆಗೆ ಹೋಗುವುದಿಲ್ಲವೇ? ನಿಮ್ಮ ಅತ್ತೆ ಫೋನ್‌ ಮಾಡುತ್ತಲೇ ಇದ್ದಾರೆ.... ಅವರಿಗೆ ಏನು ಉತ್ತರ ಕೊಡಲಿ?''

``ಏನಮ್ಮಾ, ಸ್ವಲ್ಪ ದಿನ ನೆಮ್ಮದಿಯಾಗಿ ಇರುವ ಹಾಗೆ ಇಲ್ಲವೇ? ನಿಮಗೆ ಕಷ್ಟವಾದರೆ ಹೇಳಿಬಿಡಿ. ಇಲ್ಲಿಂದ ಹೊರಟುಹೋಗುತ್ತೇನೆ,'' ಎಂದು ವಿಭಾ ದಢಾರನೆ ರೂಮಿನ ಬಾಗಿಲು ಮುಚ್ಚಿಕೊಂಡಳು.

ಇಂದಿರಾ ಕಣ್ಣುಗಳಲ್ಲಿ ನೀರು ತುಂಬಿಕೊಂಡು ಬಾಗಿಲ ಬಳಿ ನಿಂತರು. ಒಂದು ತಿಂಗಳ ಹಿಂದೆಯಷ್ಟೇ ತಮ್ಮ ಏಕಮಾತ್ರ ಪುತ್ರಿಯ ವಿವಾಹವನ್ನು ಸಡಗರದಿಂದ ನೆರವೇರಿಸಿದ್ದರು.

ಸಾಫ್ಟ್ ವೇರ್‌ ಎಂಜಿನಿಯರ್‌ ಆಗಿದ್ದ ಮುರಳಿಯ ಸೌಜನ್ಯಪೂರ್ಣ ನಡವಳಿಕೆ ಮೆಚ್ಚುಗೆಯಾಗಿತ್ತು. ಒಂದೇ ಊರಾದುದರಿಂದ ಬೇಕೆಂದಾಗ ಮಗಳನ್ನು ನೋಡುವ ಅವಕಾಶ. ಹೀಗಾಗಿ ಸಂತೋಷದಿಂದ ಸಂಬಂಧ ಬೆಳೆಸಿದ್ದರು. ಆದರೆ ಹನಿಮೂನ್‌ಗೆ ಹೋಗಿ ಬಂದ ಮಗಳ ಉದಾಸೀನ ವ್ಯವಹಾರ ತಾಯಿಯನ್ನು ಚಿಂತೆಗೀಡು ಮಾಡಿತು.

ದಿಕ್ಕು ತೋಚದಂತೆ ನಿಂತಿದ್ದ ಇಂದಿರಾ ಬಾಗಿಲು ತಟ್ಟಿದ ಶಬ್ದದಿಂದ ವಾಸ್ತವಕ್ಕೆ ಬಂದರು. ವಿಭಾಳ ಆಪ್ತ ಗೆಳತಿ ದಿವ್ಯಾ ಬಂದಿದ್ದಳು.

``ಯಾವಾಗ ಬಂದೆ ದಿವ್ಯಾ? ನಿನ್ನ ಕೆಲಸ ಹೇಗಿದೆ?''

``ನಿನ್ನೆ ರಾತ್ರಿ 8 ಗಂಟೆಗೆ ಬಂದೆ. ಕೆಲಸ ಚೆನ್ನಾಗಿದೆ. 4 ದಿನಗಳ ರಜೆ ಸಿಕ್ಕಿತು. ವಿಭಾ ಬಂದಿದ್ದಾಳೆ ಅಂತ ಅಮ್ಮ ಹೇಳಿದರು. ಅದಕ್ಕೇ ಬೆಳಗ್ಗೇನೇ ಓಡಿ ಬಂದೆ. ನೀವು ಹೇಗಿದ್ದೀರಿ ಆಂಟಿ?''

``ನಾನು ಚೆನ್ನಾಗಿದ್ದೇನಮ್ಮ. ಆದರೆ.....'' ಎಂದು ಅತ್ತಿತ್ತ ನೋಡಿ ಮೆಲ್ಲನೆ ಮಗಳ ಬಗೆಗಿನ ತಮ್ಮ ಆತಂಕವನ್ನು ವಿವರಿಸಿದರು.

``ನೀವು ಯೋಚಿಸಬೇಡಿ. ಆಂಟಿ. ಅದೇನೆಂದು ನಾನು ವಿಚಾರಿಸುತ್ತೇನೆ,'' ಎಂದು ದಿವ್ಯಾ ಆಶ್ವಾಸನೆ ಇತ್ತಳು.

ಅನಿರೀಕ್ಷಿತವಾಗಿ ಗೆಳತಿಯನ್ನು ಕಂಡು ವಿಭಾ ಓಡಿ ಬಂದು ಬಿಗಿದಪ್ಪಿದಳು. ಹೊಸದಾಗಿ ಬೇರೆ ಊರಿನಲ್ಲಿ ಕೆಲಸಕ್ಕೆ ಸೇರಿದ್ದ ದಿವ್ಯಾಳಿಗೆ ಗೆಳತಿಯ ಮದುವೆಗೆ ಬರಲು ಸಾಧ್ಯವಾಗಿರಲಿಲ್ಲ. 4 ತಿಂಗಳ ನಂತರ ಇಬ್ಬರೂ ಭೇಟಿಯಾಗಿದ್ದರು.

``ಹೇಗಿತ್ತು ನಿಮ್ಮ ಹನಿಮೂನ್‌ ಟ್ರಿಪ್‌? ಚೆನ್ನಾಗಿ ಎಂಜಾಯ್‌ ಮಾಡಿದಿರಾ?''

``ಚೆನ್ನಾಗಿತ್ತು. ನೀನು ಯಾವಾಗ ಬಂದೆ?'' ಸೊರಗಿದ ದನಿಯಲ್ಲಿ ವಿಭಾ ಹೇಳಿದಳು.

``ಏನಾಯಿತು ವಿಭಾ? ಅಲ್ಲೇನಾದರೂ ತೊಂದರೆ ಆಯಿತಾ? ನೋಡು, ನನ್ನಿಂದ ನೀನು ಮುಚ್ಚಿಡಬೇಡ. ನಿನ್ನ ನಗುವಿನ ಹಿಂದೆ ಅವ್ಯಕ್ತ ನೋವು ಇರುವುದು ನನಗೆ ಕಾಣಿಸುತ್ತಾ ಇದೆ. ಹೇಳು ಏನು ಅಂತ....'' ದಿವ್ಯಾ ಗೆಳತಿಯ ಭುಜವನ್ನು ಬಳಸಿ ಹಿಡಿದು ಕೇಳಿದಳು.

ದಿವ್ಯಾಳ ತೋಳಿಗೆ ತಲೆಯೊರಗಿಸಿ ವಿಭಾ ಬಿಕ್ಕಿದಳು. ಅವಳು ಹೇಳಿದ ವಿಷಯ ಯೋಚಿಸುವಂತಿತ್ತು.

ವಿಭಾ ಹೇಳಿದ ಪ್ರಕಾರ, ಮುರಳಿ ಮದುವೆಯಾದಾಗಿನಿಂದಲೂ ಫಿಸಿಕಲ್ ರಿಲೇಶನ್‌ನ ಸಂದರ್ಭದಲ್ಲಿ ಏಕೋ ಹಿಂಜರಿಯುತ್ತಾನೆ. ಅದು ಅಸ್ವಾಭಾವಿಕವಾಗಿ ತೋರುತ್ತದೆ. ಎಷ್ಟೇ ಪ್ರಯತ್ನಪಟ್ಟರೂ ಅವರು ಸಂಭೋಗದ ಚರಮೋತ್ಕರ್ಷ ಆನಂದವನ್ನು ಪಡೆಯಲಾಗುತ್ತಿಲ್ಲ. ಹೀಗಾಗಿ ಅವರಿಬ್ಬರ ಸಂಬಂಧದಲ್ಲಿ ಅಸಹನೆ, ಕಸಿವಿಸಿ ತಲೆಯೆತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ