ರಾಘವೇಂದ್ರ ಅಡಿಗ ಎಚ್ಚೆನ್.

ಆರಡಿ ಹೈಟು… ಸ್ಮಾಟ್ ಲುಕ್ಕು.. ಗತ್ತು ಗೈರತ್ತು.. ಎಲ್ಲಾ ಇದ್ರೂ ಆಯ್ಕೆಯ ವಿಚಾರಕ್ಕೊ… ಹಣೆಬರಹವೋ.. ಗೊತ್ತಿಲ್ಲ… ಸತತ ಪ್ರಯತ್ನಗಳಾದ್ರೂ ಫಲಿತಾಂಶ ನಿರೀಕ್ಷೆ ಮುಟ್ಟುತ್ತಿಲ್ಲ.

IMG-20250305-WA0014

ಹಾಗಂತ ಸುಮ್ನೆ ಕೂತ್ರೆ ಆಗುತ್ತಾ..? ಚೂರೋ ಪಾರೋ ಗುರುತಿಸುವಿಕೆ ಸಿಕ್ಕಿರೋ ಅಪ್ಪಟ ಕನ್ನಡದ ಈ ಪ್ರತಭಾನ್ವಿತ ನಟನಿಗೆ ಈಗ ತೆಲುಗು, ತಮಿಳು‌ ಮಂದಿ ಸೈಲೆಂಟಾಗಿ ಗಾಳ ಹಾಕಿದ್ದಾರೆ.

IMG-20250305-WA0016

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ಹಿರಣ್ಯ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್​ಗೆ ಎಂಟ್ರಿ ಕೊಟ್ಟಿದ್ರು.

IMG-20250305-WA0018

ಮಾಸ್ ಕ್ಲಾಸ್ ಹಿಸ್ಟಾರಿಕಲ್ ಎಲ್ಲಾ ಜಾನರ್​ಗಳನ್ನು ಮುಟ್ಟಿದ್ರೂ ರಾಜವರ್ಧನ್ ಅನ್ನೋ ಈ ಅಜಾನುಬಾಹು ನಟನಿಗೆ, ನಿರೀಕ್ಷಿಸಿದ ಫಲಿತಾಂಶ ಸಿಕ್ತಿಲ್ಲ. ಹೀಗಿರೋವಾಗ್ಲೇ ಅಕ್ಕ ಪಕ್ಕದ ಇಂಡಸ್ಟ್ರಿಯವ್ರು ಅವರ ಮೇಲೆ ಕಣ್ಣು ಹಾಕಿದ್ದಾರೆ.

IMG-20250305-WA0020

ಚಹರೆ ಪ್ರತಿಭೆ ಎರಡೂ ಹೊತ್ತ ರಾಜವರ್ಧನ್​ಗೆ ದೊಡ್ಡ ನಿರ್ದೇಶಕರಿಂದ, ದೊಡ್ಡ ನಿರ್ಮಾಣ ಸಂಸ್ಥೆಯಿಂದ ಈಗ ಅವಕಾಶಗಳು ಹರಸಿ ಬರ್ತಿವೆ.

IMG-20250305-WA0024

ಮೂಲಗಳ ಪ್ರಕಾರ ರಾಜವರ್ಧನ್ ಇಷ್ಟರಲ್ಲೇ ತೆಲುಗು ತಮಿಳಿನಲ್ಲಿ ಮೂಡಿ ಬರಲಿರೋ ಒಂದು ದೊಡ್ಡ ಪ್ರಾಜೆಕ್ಟಲ್ಲಿ ಕಾಣಿಸಿಕೊಳ್ತಿದ್ದಾರಂತೆ. ಅದು ನೆಗೆಟಿವ್ ರೋಲ್ ಅಂತ ಸಹ ಹೇಳಲಾಗ್ತಿದೆ. ಅದಕ್ಕಾಗಿ ರಾಜವರ್ಧನ್ ದೇಹವನ್ನ ಹುರಿಗೊಳಿಸಿಕೊಳ್ತಿದ್ದಾರಂತೆ. ಈಗಾಗಲೇ ಚೆನ್ನೈ, ಹೈದ್ರಾಬಾದ್ ಅಂತ ಹಾರ್ತಿರೋ ರಾಜವರ್ಧನ್ ಸ್ಯಾಂಡಲ್​ವುಡ್​​ಗೆ ಗುಡ್ ಬೈ ಹೇಳಿದ್ರು ಅಚ್ಚರಿ ಇಲ್ಲ ಅಂತಿದ್ದಾರೆ ರಾಜವರ್ಧನ್​ನ ಬಲ್ಲ ಸ್ನೇಹಿತರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ